`ಸಮೃದ್ಧ ಜೀವನ’ ಎಂಬ ಯೋಜನೆ ಅಡಿ ಹೂಡಿಕೆ ಮಾಡಿದ ಅನೇಕರು ಕಾಸು ಕಳೆದುಕೊಂಡಿದ್ದಾರೆ. ತಮ್ಮ ಹಣ ತಮಗೆ ಮರಳಿಸಿ ಎಂದು ಅವರು ಪಟ್ಟುಹಿಡಿದಿದ್ದು, ಹಣಪಡೆದವರಾರೂ ಕೈಗೆ ಸಿಗುತ್ತಿಲ್ಲ!
Advertisement. Scroll to continue reading.
ಸಮೃದ್ಧ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸಸ್ ಕೋ-ಆಪ್ರೇಟಿವ್ ಸೊಸೈಟಿ ಹಾಗೂ ಪುಣೆಯ ಸಮೃದ್ಧ ಜೀವನ ಅಗ್ರೋ ಪ್ರಾಪರ್ಟಿ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಜನರಿಗೆ ಅನ್ಯಾಯ ನಡೆದಿದೆ. ಭಾರತದ ಎಲ್ಲಡೆ ಶಾಖೆ ಹೊಂದಿರುವುದಾಗಿ ನಂಬಿಸಿದ ಈ ಕಂಪನಿ ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡಿದೆ. ಆರ್ಡಿ, ಎಫ್ಡಿ, ಎಸ್ ಐ ಪಿ ಸೇರಿ ಹಲವು ಯೋಜನೆಗಳ ಹೆಸರಿನಲ್ಲಿ ಜನರನ್ನು ಯಾಮಾರಿಸಿದೆ. ಲಕ್ಷಾಂತರ ಜನ ಈ ವಂಚನೆಗೆ ಒಳಗಾಗಿದ್ದು, ಸಾಕಷ್ಟು ಹೋರಾಟ ನಡೆಸಿದರೂ ಅವರ ಹಣ ಮಾತ್ರ ಮರಳಿ ಸಿಕ್ಕಿಲ್ಲ
ಕೂಲಿ ಕಾರ್ಮಿಕರು, ನಿವೃತ್ತ ನೌಕರರು, ಮಹಿಳೆಯರು ಸೇರಿ ಬಡವರನ್ನು ಗುರಿಯಾಗಿರಿಸಿಕೊಂಡು ಈ ಸಂಸ್ಥೆ ಹಣ ಸಂಗ್ರಹಿಸಿದೆ. 1600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದೆ. ಸಂಸ್ಥೆ ಮುಖ್ಯಸ್ಥರೇ ಈ ಅಪರಾತಪರ ನಡೆಸಿದ್ದು, ಅವರು ಬಡವರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಆ ಕಂಪನಿ ಆಸ್ತಿ ಮುಟ್ಟುಗೋಲು ಹಾಕಿ ಸಂತ್ರಸ್ತರ ಹಣ ಮರಳಿಸುವಂತೆ ಒತ್ತಾಯಿಸಿದರೂ ಆ ಕೆಲಸ ನಡೆದಿಲ್ಲ. ಈ ಎಲ್ಲಾ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ.