ಅಬ್ದುಲ್ ಅವರ ಮನೆಯ ತೆಂಗಿನ ಮರ ಗಫರ್ ಅವರ ಮನೆ ಕಡೆ ವಾಲಿದ್ದು, ಆ ಮರದ ಫಸಲು ಪದೇ ಪದೇ ಗಫರ್ ಅವರ ಮನೆ ಮೇಲೆ ಬೀಳುತ್ತಿದೆ. ಇದೇ ವಿಷಯವಾಗಿ ಅವರಿಬ್ಬರ ಕುಟುಂಬದ ನಡುವೆ ಜಗಳವಾಗಿದೆ.
Advertisement. Scroll to continue reading.
ಭಟ್ಕಳದ ಜಾಲಿಯ ಟಗ್ಗರಗೋಡ ನಿವಾಸಿ ಅಬ್ದುಲ್ ಸಮೀರ ಮುಲ್ಲಾ ತಂದೆ ಅಬ್ದುಲ್ ಖಾದೀರ ಮುಲ್ಲಾ (36) ಅವರು ತಮ್ಮ ನೆರೆಮನೆಯವರಾದ ಮೋಹಿದ್ದಿನ ಸಾಬ ಹೊಸ್ಮನಿ (60) ಮತ್ತು ಗಫರ ಮೋಹಿದ್ದಿನ ಸಾಬ ಹೊಸ್ಮನಿ (38) ವಿರುದ್ಧ ಕಿಡಿಕಾರಿದ್ದಾರೆ. ಅವರಿಬ್ಬರ ನಡುವೆ ಗಲಾಟೆಯ ಬಗ್ಗೆ ಅವರು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಪಾದಿತರ ಹಿತ್ತಲಿನಲ್ಲಿದ್ದ ತೆಂಗಿನ ಮರಗಳು ದೂರುದಾರರ ಮನೆಯ ಮುಂದಿನ ರಸ್ತೆಯ ಮೇಲೆ ವಾಲಿಕೊಂಡು ಬಂದಿದ್ದು ಮರಗಳಲ್ಲಿನ ಒಣಗಿದ ಕಾಯಿಗಳು ಮತ್ತು ಗರಿಗಳು ಮೈ ಮೇಲೆ ಬಿಳುತ್ತದೆ. ಆಪಾದಿತರ ಮನೆಯ ಗಟಾರದ ನೀರು ಸಹ ಮನೆಯ ಹಿತ್ತಲಿಗೆ ಬರುತ್ತಿದೆ ಎಂದವರು ದೂರಿದ್ದಾರೆ.
ಜನವರಿ 5ರಂದು ತೆಂಗಿನ ಮರದ ಗರಿ ಅಬ್ದುಲ್ಲಾ ಅವರ ತಾಯಿಯ ಮೇಲೆ ಬಿದ್ದ ವಿಚಾರವಾಗಿ ಆ ಕುಟುಂಬಗಳ ನಡುವೆ ಜಗಳವಾಗಿದೆ. ಈ ವೇಳೆ ಬಿಬಿ ಫಾತೀಮಾ ಅವರು ಮಾತನಾಡಿದಾಗ ಗಫರ್ ಅವರು ಬಿಬಿ ಫಾತೀಮಾ ಅವರಿಗೆ ಬೈದು ಕಲ್ಲಿನಿಂದ ಹೊಡೆದಿದ್ದಾರೆ. ಈ ವಿಷಯವಾಗಿ ಅಬ್ದುಲ್ಲಾ ಅವರು ಪೊಲೀಸ್ ದೂರು ನೀಡಿದ್ದಾರೆ.