• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026
  • Home
  • Janamata
Wednesday, August 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ದಶಕದ ನಂತರ ದರ್ಶನ: ಅನಂತಕುಮಾರರ ಭಾಷಣ ಸಂಪೂರ್ಣ ಸಪ್ಪೆ!

Achyutkumar by Achyutkumar
March 8, 2026
Share on FacebookShare on WhatsappShare on Twitter

ಜೀವನದಲ್ಲಿಯೇ ಮೊದಲ ಬಾರಿಗೆ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು `ಸಪ್ಪೆ’ ಭಾಷಣ ಮಾಡಿದ್ದಾರೆ. ಅದಾಗಿಯೂ, ಅವರ ಬೆಂಬಲಿಗರು `ಅನಂತಕುಮಾರ ಹೆಗಡೆ ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದ್ದಾರೆ.

ADVERTISEMENT

ಮಾರ್ಚ 8ರಂದು ಭಟ್ಕಳದಲ್ಲಿ ನಡೆದ `ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತಕುಮಾರ ಹೆಗಡೆ ಅವರು ಮುಖ್ಯ ಭಾಷಣಕಾರರಾಗಿದ್ದು, ಅನೇಕ ವರ್ಷಗಳ ನಂತರ ಅವರ ಭಾಷಣ ಕೇಳಲು ಜನ ಕುತೂಹಲದಿಂದ ಆಗಮಿಸಿದ್ದರು. ಅನಂತಕುಮಾರ ಹೆಗಡೆ ಅವರ 45 ನಿಮಿಷದ ಭಾಷಣದಲ್ಲಿ ಮೊದಲಿನ ಹುಮ್ಮಸ್ಸು ಇರಲಿಲ್ಲ. ವಿವಾಧಾತ್ಮಕ ಹೇಳಿಕೆಗಳು ಕಾಣಲಿಲ್ಲ. ರಾಜಕೀಯವಾಗಿಯೂ ಮಾತನಾಡಲಿಲ್ಲ. ಹೀಗಾಗಿ ಅನಂತಕುಮಾರ ಹೆಗಡೆ ರಾಜಕೀಯ ಮರುಪ್ರವೇಶದ ಬಗ್ಗೆ ಸುಳಿವು ನೀಡುವ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿರಾಸೆಯಾಯಿತು. ಅದಾಗಿಯೂ, ಅನಂತಕುಮಾರ ಹೆಗಡೆ ಅವರು ವೇದಿಕೆಯಿಂದ ನಿರ್ಗಮಿಸುವ ಅವಧಿಯಲ್ಲಿ ಕಾರ್ಯಕರ್ತರು ಘೋಷಣೆ ಕೂಗಿದ್ದು, `ಮುಂದಿನ ಮುಖ್ಯಮಂತ್ರಿ ಅನಂತಕುಮಾರ ಹೆಗಡೆ’ ಎಂದು ಕೇಳಿಸಿತು. ಅದಕ್ಕೆ ಸಹ ಅನಂತಕುಮಾರ ಹೆಗಡೆ ಅವರು ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಲಿಲ್ಲ.

ADVERTISEMENT

`ಹಿಂದಿನ ಆರ್ ಎಸ್ ಎಸ್ ಹಾಗೂ ಇಂದಿನ ಆರ್ ಎಸ್ ಎಸ್’ ಎಂಬ ಚೌಕಟ್ಟು ಮೀರಿ ಅನಂತಕುಮಾರ ಹೆಗಡೆ ಅವರು ಬೇರೆ ಮಾತನಾಡಲಿಲ್ಲ. ನಡುವೆ ಭಾರತೀಯ ಆಯುರ್ವೇದ, ಗಣಿತ, ವಿಜ್ಞಾನ ಹಾಗೂ ಖಗೋಳ ಶಾಸ್ತçವನ್ನು ಅವರು ಬಣ್ಣಿಸಿದ್ದು, `ನಾವೆಲ್ಲರೂ ಹಿಂದೂ’ ಎಂದು ಒತ್ತಿ ಹೇಳಿದರು. `ನಾವು ದುರ್ಬಲರಾಗಿರುವ ತನಕ ನಮ್ಮನ್ನು ತುಳಿಯುವವರಿರುತ್ತಾರೆ. ತಲೆ ಎತ್ತಿ ನಿಂತರೆ ಯಾರೂ ನಮ್ಮನ್ನು ತಡೆಯಲಾರರು’ ಎಂದು ಒಮ್ಮೆ ಹೇಳಿದ ಅವರು ನಂತರ ಮತ್ತೆ ಶಾಂತಚಿತ್ತದ ಭಾಷಣ ಮುಂದುವರೆಸಿದರು. `ಜಗತ್ತಿನ ಯಾರಿಗೂ ಕೂಡಾ ಹಿಂದೂ ಸಮಾಜವನ್ನು ಹಿಮ್ಮೆಟ್ಟಿಸುವ ತಾಕತ್ತು ಇಲ್ಲ’ ಎಂದು ನಡುವೆ ಒಮ್ಮೆ ಉಚ್ಚರಿಸಿದರು.

`ನೂರು ವರ್ಷಗಳ ಹಿಂದೆ ನಾಗಪುರದಲ್ಲಿ ಕೆಲವೇ ಕೆಲವರು ಸೇರಿಕೊಂಡು ಹುಟ್ಟು ಹಾಕಿದ ಆರ್ ಎಸ್ ಎಸ್ ತತ್ವವನ್ನು ಇದೀಗ ಜಗತ್ತೇ ಒಪ್ಪಿಕೊಳ್ಳುತ್ತಿದೆ. ಅಂದಿನ ಆರ್ ಎಸ್ ಎಸ್ ಹಾಗೂ ಇಂದಿನ ಆರ್ ಎಸ್ ಎಸ್‌ಗೆ ಅಜಗಜಾಂತರ ವ್ಯತ್ಯಾಸವಿದೆ. ಹಿಂದೂ ಸಮಾಜದ ಜಾಗೃತಿ ಇಂದು ಜಗತ್ತಿಗೇ ತಲುಪಿದೆ’ ಎಂದವರು ಹೇಳಿದರು. `ಭಾರತ ಮೊದಲಿನಿಂದಲೂ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ವಿವಿಧ ದೇಶಗಳಲ್ಲಿ ನಾಗರೀಕತೆ ಬೆಳಗಿದಿದ್ದರೆ ಅದು ಭಾರತದಿಂದ’ ಎಂದು ಹೇಳಿದರು. `ಭಾರತ ಇಂದು ವಿಶ್ವದೆಲ್ಲೆಡೆ ಯೋಗವನ್ನು ಅಳವಡಿಸಕೊಳ್ಳುವಂತೆ ಮಾಡಲು ಯಶಸ್ವಿಯಾಗಿದೆ’ ಎಂದರು. `ಹಿಂದು ಸಮಾಜದಲ್ಲಿ ಭಾಷೆ, ಜಾತಿ, ಗುಂಪು ಯಾವುದೂ ಮುಖ್ಯವಾಗುವುದಿಲ್ಲ. ಯಾವುದೇ ಸಂದರ್ಭದಲ್ಲಿ ನಮ್ಮನ್ನು ಕರೆದಾಗ ನಾನೋರ್ವ ಹಿಂದೂ ಎಂದು ಹೋಗಬೇಕು. ಸಮಾಜದ ಕಾರ್ಯದಲ್ಲಿ ಎಲ್ಲರೂ ಸಹಭಾಗಿಯಾಗಬೇಕು’ ಎಂದು ಮನವಿ ಮಾಡಿದರು.

`ಭಾರತಕ್ಕೆ ಇಡೀ ಜಗತ್ತೇ ತಲೆಬಾಗುತ್ತಿದೆ. ಆದರೆ ಭಾರತವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದ್ದರೂ ಸಹ ನಮ್ಮ ದೇಶ ಕಂಡು ಕೇಳರಿಯದ ವೇಗದಲ್ಲಿ ಮುನ್ನೆಡೆಯುತ್ತಿದೆ’ ಎಂದವರು ಹೇಳಿದರು. `ಭಾರತದ ಇತಿಹಾಸವನ್ನು ತಿರುಚಿ ತಿರುಚಿ ನಮಗೆ ಹೇಳಲಾಗಿದೆ. ಜಗತ್ತಿನ ಮಹಾ ದಂಡನಾಯಕ ಯಾರೆಂದು ಕೇಳಿದರೆ ಅದು ಕಾಶ್ಮೀರದ ಲಲಿತಾದಿತ್ಯ. ಈತ ಜಗತ್ತನ್ನೇ ಗೆದ್ದು ಬಂದಿದ್ದ ಎಂದ ಅವರು ಆತ ಇಡಿಗ ಸಮುದಾಯದ ರಾಜನೆನ್ನುವುದು ವಿಶೇಷ’ ಎಂದವರು ಹೇಳಿದರು. `ನಾವು ಜಗತ್ತನ್ನೇ ಮೆಟ್ಟಿ ನಿಂತವರು ಎನ್ನುವ ಕಲ್ಪನೆ ನಮಗಿಲ್ಲ. ಬೇರೆಯವರ ಇತಿಹಾಸವನ್ನು ನೋಡಿ ಅದುವೇ ಶ್ರೇಷ್ಠ ಎಂದು ಬಿಂಬಿಸಿದ್ದರಿAದ ಅದನ್ನೇ ನಾವು ನಂಬಿದ್ದೇವೆ. ಹೀಗಿರುವಾಗ ಸತ್ಯ ಶೋಧನೆಗಾಗಿ ಆರ್ ಎಸ್ ಎಸ್ ಹುಟ್ಟಿದ್ದು, ಅದನ್ನು ಮಟ್ಟ ಹಾಕುವುದಾಗಿ ಹೇಳಿದವರು ಮಿಣುಕು ಹುಳ ಇದ್ಧಂತೆ’ ಎಂದರು.

`ಹಿoದೂಗಳು ತಾಯಿ ನೆಲವನ್ನು ಪೂಜಿಸುವವರು. ಯಾವ ದೇಶದಲ್ಲಿ ನಾವಿರುತ್ತೇವೆಯೋ ಅಲ್ಲಿನ ನೆಲವನ್ನು ಪೂಜಿಸುತ್ತೇವೆ. ಅಮೇರಿಕದಲ್ಲಿನ ಭಾರತೀಯರು ದೇಶವನ್ನು ಕಟ್ಟುವನ್ನು ಪ್ರಮುಖ ಪಾತ್ರವಹಿಸಿದ್ದಾರೆ. ಯಾವುದೇ ದೇಶದಲ್ಲಿರಲಿ ಅಲ್ಲಿನ ಸಂಸ್ಕೃತಿಯನ್ನು ನೆಲವನ್ನು ಗೌರವಿಸುವ ಧರ್ಮ ನಮ್ಮದು’ ಎಂದರು. `ಬ್ರಾಹ್ಮಣ್ಯದ ಬಗ್ಗೆ ಇಂದು ಬಹು ಚರ್ಚೆ ನಡೆಯುತ್ತಿದೆ. ಮನುಸ್ಮತಿಯನ್ನು ಓದಿದವರು ಯಾರೂ ಕೂಡಾ ಚರ್ಚೆ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ನಮ್ಮ ಋಷಿಮುನಿಗಳಲ್ಲಿ ಶೇ 90ರಷ್ಟು ಋಷಿಮುನಿಗಳು ಬ್ರಾಹ್ಮಣರೇ ಅಲ್ಲ. ಜಾತಿಯಿಂದ ಯಾರನ್ನು ಗುರುತಿಸಿಲ್ಲ, ಅವರ ಯೋಗ್ಯತೆಯಿಂದ ಗುರುತಿಸಲಾಗಿದೆ’ ಎಂದವರು ಅಭಿಪ್ರಾಯಪಟ್ಟರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!