ಮುರುಡೇಶ್ವರದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವ್ಯಸನ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಇನಾಯತುಲ್ಲಾ ರಸೂಲ್ ಸಾಬ್ ಸವಣೂರು ಹಾಗೂ ಸಿದ್ದಿಕ್ ಅಬ್ದುಲ್ ರೆಹಮಾನ್ ಮಾದಕ ವ್ಯಸನ ಮಾರಾಟ ಜಾಲದಲ್ಲಿರುವುದು ಬಹಿರಂಗವಾಗಿದೆ. ಜೊತೆಗೆ ಕೆಂಪು ಬಣ್ಣದ ಸ್ಕೂಟಿಯೊಂದರಲ್ಲಿ ಮಾದಕ ವ್ಯಸನ ಸಾಗಾಟ ನಡೆಯುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
Advertisement. Scroll to continue reading.
ಈಚೆಗೆ ಮುರುಡೇಶ್ವರ ಬಳಿಯ ಬೈಲೂರಿನಲ್ಲಿ ಮುಸ್ಲೀಂ ಮಕ್ಕಳು ಹಿಂದೂ ಹುಡುಗರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಆ ವೇಳೆ ಆ ಕೃತ್ಯ ಎಸಗಿದವರು ಮಾದಕ ಅಮಲಿನಲ್ಲಿರುವುದು ಗೊತ್ತಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸಿದ್ದಿಕ್ ಅಬ್ದುಲ್ ರೆಹಮಾನ್ ಸಿಕ್ಕಿಬಿದ್ದಿದ್ದು, ಅದರೊಂದಿಗೆ ಮಾದಕ ವ್ಯಸನ ಮಾರಾಟಗಾರ ಇನಾಯತುಲ್ಲಾ ರಸೂಲ್ ಸಾಬ್ ಸವಣೂರು ಸಹ ಸಿಕ್ಕಿ ಬಿದ್ದಿದ್ದಾರೆ. ಬಂಧಿರ ವಾಹನ ಹಾಗೂ ಅವರ ಬಳಿಯಿದ್ದ ಗಾಂಜಾವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ್ ಹಂಚನಾಳ್, ಮುರುಡೇಶ್ವರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಹಣಮಂತ ಬಿರಾದಾರ್, ಲೋಖನಾಥ್ ರಾಠೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಸಿಬ್ಬಂದಿ ಅರುಣ್ ಪಿಂಟೋ, ಸುಬ್ರಹ್ಮಣ್ಯ, ಮಂಜುನಾಥ ಲಕ್ಮಾಪುರ, ಮಂಜುನಾಥ ಮಡಿವಾಳ ಮತ್ತು ಸಂದೀಪ್ ಪಟಗಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.