ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆ ಅವಧಿಯಲ್ಲಿ ಅಧಿಕಾರಿಗಳು ಸಾಕಷ್ಟು ತಪ್ಪು ಮಾಡಿದ್ದಾರೆ. ಆ ಪೈಕಿ ಆರು ತಪ್ಪುಗಳ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಗಮನಸೆಳೆದಿದ್ದು, ತಪ್ಪು ತಿದ್ದುಪಡಿಗಾಗಿ ಸರ್ಕಾರದ ಗಮನಸೆಳೆದಿದ್ದಾರೆ.
`ಮಹಜರ್ ಸಂದರ್ಭದಲ್ಲಿ ಅಧಿಕಾರಿ ತಂಡದೊoದಿಗೆ ಸ್ಥಳೀಯ ಮುಖಂಡರನ್ನು ಸೇರಿಸಿಕೊಳ್ಳದಿರುವುದು ಸಮಿತಿಯ ಮೊದಲ ತಪ್ಪಾಗಿದೆ. ಜಂಟಿ ಮಹಜರ್ ಸರಿಯಾಗಿ ನಡೆಸದಿರುವುದು, ಅಪೂರ್ಣ ಅಂಕಿ-ಅoಶಗಳಿoದ ಕೂಡಿದ ದಾಖಲೆ ಹಾಗೂ ಅರಣ್ಯವಾಸಿಗಳಿಗೆ ಮುಂಚಿತ ಮಾಹಿತಿ ನೀಡದಿರುವುದು ಸಹ ಪ್ರಮುಖ ತಪ್ಪುಗಳಾಗಿವೆ. ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಭAಧಿಸಿದ ದಾಖಲೆಗಳನ್ನು ಮಹಜರಿನಲ್ಲಿ ಉಲ್ಲೇಖಿಸಿದಿರುವುದು ಸಹ ದೊಡ್ಡ ತಪ್ಪಾಗಿದೆ. ಅಲ್ಪ ಕಂದಾಯ ಭೂಮಿ ಹೊಂದಿ ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿರುವ ಅರಣ್ಯವಾಸಿಗಳ ಪ್ರತ್ಯೇಕ ಮನೆ, ಪ್ರತ್ಯೇಕ ರೇಷನ್ ಕಾರ್ಡ ಹೊಂದಿರುವ ಒಂದೇ ಕುಟುಂಬದ ಒಂದಕ್ಕಿAತ ಹೆಚ್ಚು ಕುಟುಂಬ ಸದಸ್ಯರ ಅರ್ಜಿಯನ್ನು ಮಹಜರ್ ಪ್ರಕ್ರಿಯೆಗೆ ಅಳವಡಿಸದೇ ಸಮಿತಿ ಲೋಪ ಎಸಗಿದೆ.
ಇದರೊಂದಿಗೆ ಮಹಜರ್ ಸಂದರ್ಭದಲ್ಲಿ ಅವಶ್ಯ ಅಧಿಕಾರ ವರ್ಗದವರು ಉಪಸ್ಥಿತರಿರಲಿಲ್ಲ. ಜಂಟಿ ಮಹಜರ್ ಪ್ರಕ್ರಿಯೆಯಲ್ಲಿ ತಿರಸ್ಕರಿಸಿದ ಎಲ್ಲಾ ಅರ್ಜಿಗೆ ಸಂಬ0ಧಿಸಿ ಮಹಜರ್ ಗಣನೆಗೆ ತೆಗೆದುಕೊಂಡಿಲ್ಲ. ಜಂಟಿ ಮಹಜರಿಗೆ ಕೆಲವು ಕಡೆ ಅರಣ್ಯವಾಸಿಯ ಸಹಿಯನ್ನು ದಾಖಲಿಸಿಲ್ಲ. ಇದೆಲ್ಲವೂ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನ್ಯತೆಯ ಅಂಶಗಳಾಗಿವೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವಿವರಿಸಿದೆ. ಈ ಬಗ್ಗೆ ಶಿರಸಿಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಪತ್ರವನ್ನು ನೀಡಿದ್ದು, ಅದನ್ನು ದಾಖಲೀಕರಣ ಮಾಡಲಾಗಿದೆ.