ಮುಂಡಗೋಡಿನ ಮನೆಯಲ್ಲಿ ಸುಮ್ಮನೆ ಮಲಗಿದ್ದ ಮಂಜುನಾಥ ತಳವಾರ್ ಅವರಿಗೆ ಅಗಡಿ ಗ್ರಾಮದ ದೇವರಾಜ್ ಲಮಾಣಿ ಅವರು ಫೋನ್ ಮಾಡಿದ್ದು, ರಾತ್ರಿ ವೇಳೆ ದೇವರಾಜ ಲಮಾಣಿ ಅವರ ಮನೆಗೆ ಹೋದ ಮಂಜುನಾಥ ಲಮಾಣಿ ಹಿಗ್ಗಾಮುಗ್ಗ ಹೊಡೆತ ತಿಂದಿದ್ದಾರೆ. ಮನೆಯಲ್ಲಿದ್ದ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಹೋರಿಸಿದ ದೇವರಾಜ ಲಮಾಣಿ ಕುಟುಂಬದವರು ಮಂಜುನಾಥ ಲಮಾಣಿ ಅವರ ಬಟ್ಟೆ ಬಿಚ್ಚಿ ಹೊಡೆದಿದ್ದಾರೆ.
ಮುಂಡಗೋಡಿನ ಅಗಡಿಯಲ್ಲಿ ಮಂಜುನಾಥ ಬಸವರಾಜ ತಳವಾರ್ ಅವರು ವಾಸವಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡು ಅವರು ಬದುಕು ನಡೆಸುತ್ತಿದ್ದಾರೆ. ಏಪ್ರಿಲ್ 19ರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಫೋನ್ ಬಂದಿದೆ. ಅದೇ ಊರಿನ ದೇವರಾಜ್ ಶಿವಪ್ಪ ಲಮಾಣಿ ಅವರು ಫೋನ್ ಮಾಡಿದ್ದು, ಅದಾದ ನಂತರ ಮಂಜುನಾಥ ತಳವಾರ್ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ದೇವರಾಜ ಲಮಾಣಿ ಅವರ ಮನೆಗೆ ಹೋಗಿದ್ದ ಮಂಜನಾಥ ತಳವಾರ್ ಅವರ ಮೇಲೆ ಅಲ್ಲಿದ್ದವರು ಅಸಭ್ಯ ವರ್ತನೆಯ ಆರೋಪ ಹೋರಿಸಿದ್ದಾರೆ. ಮನೆ ಬಾಗಿಲಿಗೆ ಕಟ್ಟಿದ್ದ ಹಗ್ಗ ತೋರಿಸಿದ ದೇವರಾಜ ಲಮಾಣಿ ಅವರು `ತಂಗಿಗೆ ಮಲಗಲು ಕರೆಯುವೆಯಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸುವುದರೊಳಗೆ ದೇವರಾಜ ಲಮಾಣಿ ಅವರು ಮಂಜುನಾಥ ತಳವಾರ್ ಅವರ ಮೇಲೆ ಕೈ ಮಾಡಿದ್ದಾರೆ. ಈ ವೇಳೆ ಸಂಜು ಪರಶುರಾಮ ಲಮಾಣಿ ಹಾಗೂ ಅರುಣ ಪರಶುರಾಮ ಲಮಾಣಿ ಅವರು ಸಹ ಮಂಜುನಾಥ ತಳವಾರ್ ಅವರಿಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ.
ತಲೆ, ಕಿವಿ, ಮುಖ, ಕುತ್ತಿಗೆಗೆ ಪೆಟ್ಟು ಬಿದ್ದ ಕಾರಣ ಮಂಜುನಾಥ ತಳವಾರ್ ಅವರು ನರಳಾಡಿದ್ದಾರೆ. ಈ ವೇಳೆ ಅಲ್ಲಿ ಸೇರಿದ ಜನ ಮಂಜುನಾಥ ತಳವಾರ್ ಅವರನ್ನು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ, ಮನೆಯವರೆಗೂ ಹಿಂಬಾಲಿಸಿಕೊAಡು ಬಂದ ದೇವರಾಜ ಲಮಾಣಿ, ಸಂಜು ಲಮಾಣಿ ಹಾಗೂ ಅರುಣ ಲಮಾಣಿ ಅವರು ಅಲ್ಲಿಯೂ ಬಟ್ಟೆ ಹರಿಯುವಂತೆ ಹೊಡೆದಿದ್ದಾರೆ. ಈ ವೇಳೆ ಮಂಜುನಾಥ ತಳವಾರ್ ಅವರ ಪತ್ನಿ ಸುಗಂದ ತಳವಾರ್ ಹಾಗೂ ಪುತ್ರ ಪ್ರೀತಂ ತಳವಾರ್ ತಪ್ಪಿಸಲು ಬಂದಿದ್ದು, ಅವರಿಗೂ ಆ ಮೂವರು ನಿಂದಿಸಿದ್ದಾರೆ.