`ಸಮಸ್ಯೆ ಬಂದಾಗ ಅದನ್ನು ವಾಟ್ಸಪ್-ಫೇಸ್ಬುಕ್ ಮೂಲಕ ಚರ್ಚಿಸುವ ಬದಲು ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ನಡೆಯಬೇಕು’ ಎಂದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ್ ಪಾಟೀಲ್ ಕುಲಕರ್ಣಿ ಅವರು ಹೇಳಿದ್ದಾರೆ. ಧಾರವಾಡದಲ್ಲಿ ಶಿಕ್ಷಕರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಬಲಿಷ್ಠ ಸಂಘಟನೆಗೆ ಕರೆ ನೀಡಿದ್ದಾರೆ. ಈ ವೇಳೆ ಸಂಘದ ಪದಾಧಿಕಾರಿಗಳನ್ನು ಅವರು ಆಯ್ಕೆ ಮಾಡಿದ್ದು, ಯಲ್ಲಾಪುರದ ಶಿಕ್ಷಕ ಎಂ ರಾಜೇಶೇಖರ್ ಅವರು ಸಹ ಕಾರ್ಯದರ್ಶಿಯಾಗಿ ಜವಾಬ್ದಾರಿವಹಿಸಿಕೊಂಡಿದ್ದಾರೆ.
`ವಿಜ್ಞಾನ, ವಿದ್ಯಾರ್ಥಿ, ವಿಜ್ಞಾನ ಶಿಕ್ಷಕದ ಅಭ್ಯುದಯ ಹಾಗೂ ಪ್ರಗತಿಯ ದೃಷ್ಟಿಕೋನ ಬದಲಾಗಿದ್ದು, ಈ ಸನ್ನಿವೇಶದಲ್ಲಿ ಗುಣಮಟ್ಟದ ಹಾಗೂ ಏಕರೂಪದ ಸಂಶೋಧನೆಗಳನ್ನು ಎಲ್ಲರಿಗೂ ತಲುಪಿಸಬೇಕಿದೆ. ವಿಜ್ಞಾನ ಶಿಕ್ಷಕರು ಅನುಭವಿಸುತ್ತಿದ್ದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದ್ದು, ರಾಜ್ಯಮಟ್ಟದಲ್ಲಿ ಏಕರೂಪತೆ ತರುವುದಕ್ಕಾಗಿ ವಿಜ್ಞಾನ ಶಿಕ್ಷಕರ ಸಂಘ ನೋಂದಾಯಿಸಲಾಗಿದೆ’ ಎಂದವರು ಹೇಳಿದ್ದಾರೆ. ಸಂಘದ ಧೇಯೋದ್ದೇಶ ಹಾಗೂ ಸಂಘಟನೆಯ ಅವಶ್ಯಕತೆಯ ಬಗ್ಗೆ ಅವರು ಸದಸ್ಯರಿಗೆ ವಿವರಿಸಿದ್ದಾರೆ.
`ಬಹಳ ವರ್ಷಗಳಿಂದ ನಾವು ಕೇವಲ ಸಮೂಹ ಮಾಧ್ಯಮ, ವಾಟ್ಸಪ್ ಮೂಲಕ ಸಮಸ್ಯೆ ಹೇಳಿ ಸುಮ್ಮನಾಗುತ್ತಿದ್ದೇವು. ಸರ್ಕಾರದ ಮಟ್ಟದಲ್ಲಿ ಅದನ್ನು ಪ್ರತಿಪಾದಿಸುವಾಗ ನಮಗೆ ಸಂಘಟನೆಯ ಕೊರತೆ ಉಂಟಾಗುತ್ತಿತ್ತು. ಆ ಕೊರತೆಯನ್ನು ಇದೀಗ ನೀಗಿಸಲಾಗಿದೆ. ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನ ಶಿಕ್ಷಕರ ಸಹಯೋಗದೊಂದಿಗೆ ಸಂಘವನ್ನು ಬಲಪಡಿಸಲಾಗುತ್ತದೆ’ ಎಂದವರು ಘೋಷಿಸಿದರು.
ಧಾರವಾಡದ ಶಿಕ್ಷಕ ಪ್ರಮೋದ್ ವಾದಿರಾಜ ಅವರು ಸಂಘಕ್ಕೆ ಶುಲ್ಕವಿಲ್ಲದೇ ಕೊಠಡಿ ನೀಡುವುದಾಗಿ ಹೇಳಿದರು. ರಾಜ್ಯದ ನಾಲ್ಕು ವಿಭಾಗಗಳಿಂದ ನಾಲ್ಕು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಬಸವರಾಜ್, ಸಹ ಕಾರ್ಯದರ್ಶಿಯಾಗಿ ಎಂ ರಾಜಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಗಜಕೋಶ, ಖಜಾಂಚಿಯಾಗಿ ಸಂತೋಷ್ ಕುಮಾರ ಸಂವಹನಕಾರರಾಗಿ ಹಾಗೂ ಪತ್ರಿಕಾ ನಿಧಿಯಾಗಿ ಸಂಜೀವ ಕುಮಾರ್ ಭೂಶೆಟ್ಟಿ ಅವರು ಆಯ್ಕೆಯಾದರು. ರಾಜ್ಯದ ಎಲ್ಲಾ ಎಲ್ಲ ಜಿಲ್ಲೆಗಳಿಂದ ವಿಜ್ಞಾನ ಶಿಕ್ಷಕ ಪ್ರತಿನಿಧಿಗಳನ್ನು ಒಳಗೊಂಡ ರಾಜ್ಯದ ಕಾರ್ಯಕಾರಣಿ ಸಭೆ ನಡೆಸಲು ನಿರ್ಧರಿಸಲಾಯಿತು.