ಅಂಕೋಲಾ-ಯಲ್ಲಾಪುರ ಗಡಿಭಾಗವಾದ ರಾಮನಗುಳಿಯಲ್ಲಿರುವ `ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ’ಕ್ಕೆ ಕಾರ್ತಿಕ ಭಟ್ಟ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಗುರುವಾರ ಅವರು ಅಧಿಕಾರ ಸ್ವೀಕರಿಸಿದ್ದು, ಅನೇಕರು ಕಚೇರಿಗೆ ಆಗಮಿಸಿ ಅಭಿನಂದಿಸಿದ್ದಾರೆ.
ಅoಕೋಲಾ ತಾಲೂಕಿನ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘವೂ ತಾಲೂಕಿನಲ್ಲಿಯೇ ಅತಿ ದೊಡ್ಡ ಸೊಸೈಟಿಯಾಗಿ ಗುರುತಿಸಿಕೊಂಡಿದೆ. ಸುಮಾರು ಏಳು ದಶಕಗಳಿಂದ ಈ ಸೊಸೈಟಿ ಜನರ ಆಗು-ಹೋಗುಗಳಿಗೆ ಸ್ಪಂದಿಸುತ್ತಿದೆ. ಗ್ರಾಮದ ಬೆಳವಣಿಗೆಯಲ್ಲಿ ಸೊಸೈಟಿಯ ಪಾತ್ರ ಅತಿ ಮುಖ್ಯವಾಗಿದ್ದು, ಕೃಷಿ-ಹೈನುಗಾರಿಕೆ ಸೇರಿ ಊರಿನ ಆರ್ಥಿಕ ವ್ಯವಹಾರಗಳಿಗೂ ತನ್ನದೇ ಆದ ಕೊಡುಗೆ ನೀಡಿದೆ. ಸಾವಿರಾರು ಸದಸ್ಯರಿಗೆ ಈ ಸೊಸೈಟಿ ಸೇವೆ ನೀಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘಕ್ಕೆ ಶೇವ್ಕಾರಿನ ಕಾರ್ತಿಕ ಭಟ್ಟ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಗಮಿಸಿದ್ದಾರೆ.
ಬೆಂಗಳೂರಿನ ದಯಾನಂದ ಸಾಗರ ಶಿಕ್ಷಣ ಸಂಸ್ಥೆಯಲ್ಲಿ MBA ಪದವಿಯನ್ನು ಪೂರ್ಣಗೊಳಿಸಿರುವ ಕಾರ್ತಿಕ ಭಟ್ಟ ಅವರು ಸಹಕಾರ ಕ್ಷೇತ್ರದ ನಿರ್ವಹಣೆಯ ಆಳ-ಅಗಲದ ಬಗ್ಗೆ ಅರಿವು ಹೊಂದಿದ್ದಾರೆ. ಸಹಕಾರ ಕ್ಷೇತ್ರದ ಆಡಳಿತ ಮತ್ತು ನಿರ್ವಹಣಾ ಜ್ಞಾನವನ್ನು ವೃದ್ಧಿಪಡಿಸುವ ಉದ್ದೇಶದಿಂದ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಶಿಕ್ಷಣವನ್ನು ಅವರು ಓದಿದ್ದಾರೆ. ಆಧುನಿಕ ಆಡಳಿತ ವ್ಯವಸ್ಥೆ, ಪಾರದರ್ಶಕ ಕಾರ್ಯನಿರ್ವಹಣೆ, ತಂತ್ರಜ್ಞಾನ ಅಳವಡಿಕೆ, ಸಾಲ ವಸೂಲಾತಿ ಬಲವರ್ಧನೆ ಹಾಗೂ ಸದಸ್ಯ ಕೇಂದ್ರಿತ ಸೇವೆಗಳ ಮೂಲಕ ಸಂಘಕ್ಕೆ ಶಕ್ತಿ ತುಂಬಲು ಕಾರ್ತಿಕ ಭಟ್ಟ ಅವರು ಆಸಕ್ತರಾಗಿದ್ದಾರೆ. ವಿದ್ಯಾವಂತ ಯುವಕನ ಕೈಗೆ ಸೊಸೈಟಿಯ ಅಧಿಕಾರ ಸಿಕ್ಕಿರುವುದರಿಂದ ಸಹಕಾರ ಕ್ಷೇತ್ರದಲ್ಲಿ ಹೊಸ ಚಿಂತನೆ ಮತ್ತು ವೃತ್ತಿಪರ ನಿರ್ವಹಣೆಗೆ ಹೆಚ್ಚಿನ ಒತ್ತು ಬರುವ ಸಾಧ್ಯತೆಗಳಿವೆ.