ಮುಖ್ಯಮoತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ ಅವರು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ವೇಳೆ ಶಿರಸಿಯ ಸಮೀಕ್ಷಾ ಹೆಗಡೆ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಜೊತೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಜೊತೆಯಾಗಿ ಈ ಪದಕ ಪ್ರದಾನ ಮಾಡಿದ್ದಾರೆ
ಬೆಂಗಳೂರಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಶಿರಸಿ ಮೂಲದ ಡಾ ಸಮೀಕ್ಷಾ ಹೆಗಡೆ ಅವರಿಗೆ ಚಿನ್ನದ ಪದಕ ಸಿಕ್ಕಿದೆ. ನಿರಂತರ ಪರಿಶ್ರಮದ ಫಲವಾಗಿ ಅವರು ವೈದ್ಯಕೀಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದಾರೆ. ಮೈಕ್ರೋಬಯಾಲಜಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಾರಣ ಅವರಿಗೆ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿAದ ಗೌರವ ಪದಕ ಸಿಕ್ಕಿದೆ.
ಶಿರಸಿಯ ಸಮೀಕ್ಷಾ ಹೆಗಡೆ ಅವರು ಕಾನಸೂರಿನ ಕಾಳಿಕಾ ಭವಾನಿ ಶಾಲೆಯಲ್ಲಿ ಓದಿದ್ದಾರೆ. ಅದಾದ ನಂತರ ಬೇರೆ ಬೇರೆ ಊರುಗಳಿಗೆ ಹೋಗಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಮತ್ತಿಹಳ್ಳಿಯ ಪ್ರಗತಿ ಪರ ಕೃಷಿಕ ಶ್ರೀಕಾಂತ ಹೆಗಡೆ ಮತ್ತು ಸುವರ್ಣಾ ಹೆಗಡೆ ಅವರ ಪುತ್ರಿಯಾಗಿರುವ ಡಾ ಸಮೀಕ್ಷಾ ಹೆಗಡೆ ಅವರು ಮಿಜಾರಿನ ಡಾ ಲಕ್ಷ್ಮೀಶ ಜಯರಾಮ ಹೆಗಡೆ ಅವರನ್ನು ವರಿಸಿದ್ದಾರೆ. ಡಾ ಲಕ್ಷ್ಮೀಶ ಹೆಗಡೆ ಅವರು ಅರಿವಳಿಕೆ ತಜ್ಞರಾಗಿದ್ದಾರೆ. ಡಾ ಸಮೀಕ್ಷಾ ಹೆಗಡೆ ಅವರ ಸಹೋದರ ಸಾತ್ವಿಕ ಹೆಗಡೆ ಅವರು ಸಹ ಬಿಎಂಸಿ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಸಮೀಕ್ಷಾ ಹೆಗಡೆ ಅವರು ಭರತನಾಟ್ಯ ಕಲಾವಿದೆಯೂ ಹೌದು.