ತವರುಮನೆಗೆ ಹೋದ ಪತ್ನಿ ಮನೆಗೆ ಮರಳದ ಕಾರಣ ಯಲ್ಲಾಪುರ ಹಿತ್ಲಳ್ಳಿ ಬಳಿಯ ಮಂಜುನಾಥ ಕುಣಬಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಸಾರಿಕ ಜೀವನದಲ್ಲಿನ ಜಿಗುಪ್ಸೆಯಿಂದಾಗಿ 38ನೇ ವಯಸ್ಸಿನಲ್ಲಿಯೇ ಅವರು ದುಡುಕು ನಿರ್ಧಾರ ಮಾಡಿದ್ದಾರೆ.
ಯಲ್ಲಾಪುರದ ಹಿತ್ಲಳ್ಳಿ ಗೊಣಗಲಮಕ್ಕಿಯಲ್ಲಿ ಮಂಜುನಾಥ ಮಾಣಿ ಕುಣಬಿ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ನಡೆಸುತ್ತಿದ್ದರು. ಹೀಗಿರುವಾಗ ಅವರ ಪತ್ನಿ ವಸಂತಿ ಕುಣಬಿ ಅವರು ಮಗಳು ಭಾಗ್ಯ ಅವರ ಜೊತೆ ತವರು ಮನೆಗೆ ಹೋಗಿದ್ದರು. ಪತ್ನಿ ತವರು ಮನೆಗೆ ಹೋದ ಕಾರಣ ಮಂಜುನಾಥ ಕುಣಬಿ ಅವರು ಬೇಸರದಲ್ಲಿದ್ದರು. ಎಷ್ಟು ದಿನ ಕಳೆದರೂ ಪತ್ನಿ ಮರಳದ ಕಾರಣ ಮಾನಸಿಕವಾಗಿ ಕುಗ್ಗಿದ್ದರು.
ಕುಟುಂಬ ಸರಿಯಿಲ್ಲದ ನೆವದಲ್ಲಿ ಮಂಜುನಾಥ ಕುಣಬಿ ಅವರು ಸರಾಯಿ ಸೇವನೆ ಶುರು ಮಾಡಿದರು. ಸರಾಯಿ ಸೇವನೆ ವಿಪರೀತವಾಗಿದ್ದು, ಮಾನಸಿಕವಾಗಿ ಅವರು ಇನ್ನಷ್ಟು ದುರ್ಬಲರಾದರು. ಪತ್ನಿ ಹಾಗೂ ಮಗಳು ಮನೆ ಬಿಟ್ಟು ಹೋಗಿರುವ ಚಿಂತೆಯಲ್ಲಿಯೇ ಮಂಜುನಾಥ ಕುಣಬಿ ಅವರು ತಮ್ಮ ಜೀವನವನ್ನು ಅಂತ್ಯಗೊಳಿಸಲು ನಿರ್ಧರಿಸಿದರು. ಜೂನ್ 6ರಂದು ಕಾಣೆಯಾದ ಮಂಜುನಾಥ ಕುಣಬಿ ಅವರು ಜೂನ್ 7ರಂದು ಮನೆ ಪಕ್ಕದ ಮಸರಕುಳಿ ಹಳ್ಳದ ಅಂಚಿನ ಗೇರು ಗಿಡಕ್ಕೆ ನೇತಾಡುತ್ತಿದ್ದರು. ಸಹೋದರನ ಸಾವಿನ ಬಗ್ಗೆ ನರಸಿಂಹ ಕುಣಬಿ ಅವರು ಮಾಹಿತಿ ನೀಡಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದರು.