ಅಮಾಯಕ ಆಕಳುಗಳನ್ನು ಕೊಂದು ಆರಾಮಾಗಿ ಅಲೆದಾಡುತ್ತಿದ್ದ ಭಟ್ಕಳದ ಇಸ್ಮಾಯಲ್ ಹವ್ವಾ ಅವರನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ. ಪ್ರಕರಣಗಳೆರಡರಲ್ಲಿ ಶಿಕ್ಷೆ ಅನುಭವಿಸಿದರೂ ಸ್ವಭಾವದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಈ ಕ್ರಮ ಅನುಸರಿಸಿದ್ದಾರೆ.
ಭಟ್ಕಳದ ಮೂಸಾ ನಗರದ ಸಿದ್ದಿಕ್ ಸ್ಟಿಟ್ ಬಳಿ ಇಸ್ಮಾಯಲ್ ಹವ್ವಾ ಅವರು ವಾಸವಾಗಿದ್ದರು. ಈವರೆಗೆ ಒಟ್ಟು ಏಳು ಬಾರಿ ಅವರು ಹಸು ಕೊಂದ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಆ ಪೈಕಿ ಎರಡು ಪ್ರಕರಣದಲ್ಲಿ ಅವರು ಶಿಕ್ಷೆಯನ್ನು ಅನುಭವಿಸಿದ್ದು, ಐದು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ೨೦೨೦ರಿಂದ ಇಸ್ಮಾಯಲ್ ಹವ್ವಾ ಅವರ ವಿರುದ್ಧ ಪೊಲೀಸ್ ದೂರುಗಳು ದಾಖಲಾಗುತ್ತಿವೆ. ಅದಾಗಿಯೂ, ಇಸ್ಮಾಯಲ್ ಹವ್ವಾ ಅವರ ವರ್ತನೆ ಮಾತ್ರ ಬದಲಾಗಿಲ್ಲ.
ಇಸ್ಮಾಯಲ್ ಹವ್ವಾ ಅವರ ಈ ಕ್ರೂರ ಸ್ವಭಾವ ಹಾಗೂ ಅಪರಾದ ಹಿನ್ನಲೆ ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುವ ಸಾಧ್ಯತೆಯಿರುವ ಹಿನ್ನಲೆ ಭಟ್ಕಳ ಪೊಲೀಸರು ಗಡಿಪಾರಿಗೆ ಮನವಿ ಮಾಡಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ಆ ಮನವಿಯನ್ನು ಪುರಸ್ಕರಿಸಿದ್ದಾರೆ. ಜೂನ್ ೧೭ರಂದು ಆದೇಶ ಹೊರಡಿಸಿದ ಪೊಲೀಸ್ ಅಧೀಕ್ಷಕರು ಇಸ್ಮಾಯಲ್ ಹವ್ವಾ ಅವರನ್ನು ಇಲ್ಲಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ಅದರ ಪ್ರಕಾರ, ಪೊಲೀಸರು ಇಸ್ಮಾಯಲ್ ಹವ್ವಾ ಅವರನ್ನು ರಾಯಚೂರು ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಗೆ ಬಿಟ್ಟು ಬಂದಿದ್ದಾರೆ.