ಸಿದ್ದಾಪುರ ಪಿಸೈ ನಾಗಪ್ಪ ಅವರು ಎಂ ಜಿ ಸಿ ಕಾಲೇಜು ಬಳಿ ವಾಹನ ತಪಾಸಣೆ ನಡೆಸುವಾಗ ಶಿರಸಿಯ ಯುವಕರಿಬ್ಬರು ಪೊಲೀಸರನ್ನು ನೋಡಿ ಓಡುವ ಪ್ರಯತ್ನ ಮಾಡಿದ್ದಾರೆ. ಗಲಿಬಿಲಿಯಲ್ಲಿದ್ದ ಅವರಿಬ್ಬರನ್ನು ಪಿಸೈ ನಾಗಪ್ಪ ಅವರು ತಡೆದು ನಿಲ್ಲಿಸಿದ್ದು, ಅಮಲಿನಲ್ಲಿ ಅವರು ಬೈಕ್ ಓಡಿಸಿದ ಅನುಮಾನ ಶುರುವಾಗಿದೆ.
ಈ ವೇಳೆ ಪೊಲೀಸರು ಅವರನ್ನು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಆಗ, ಶಿರಸಿ ಹಂಚಿನಕೇರಿಯ ಟೈಲ್ಸ್ ಕೆಲಸಗಾರ ಮಹಮದ್ ಆಸೀಪ್ ನಜೀರ್ ಸಾಬ್ (26) ಅವರ ವರದಿ ಪಾಸಿಟಿವ್ ಎಂದು ಬಂದಿದ್ದು, ಅವರು ಗಾಂಜಾ ಸೇವಿಸಿದ್ದು ದೃಢವಾಗಿದೆ. ಅವರ ಜೊತೆಗಿದ್ದ ಸಾಹಿಲ್ ಖಾದರ್ ಖಾನ್ (19) ಅವರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ.
ಜೂನ್ 15ರಂದು ಸಂಜೆ ಸಿದ್ದಾಪುರ ಪಟ್ಟಣದ ಎಂ ಜಿ ಸಿ ಕಾಲೇಜು ಬಳಿ ಪೊಲೀಸರು ವಿವಿಧ ವಾಹನಗಳ ದಾಖಲೆ ಪರಿಶೀಲನೆ ಮಾಡಿದ್ದಾರೆ. ಆಗ, ಮಹಮದ್ ಆಸೀಪ್ ನಜೀರ್ ಸಾಬ್ ಹಾಗೂ ಜೊತೆಗಿದ್ದ ಸಾಹಿಲ್ ಖಾದರ್ ಖಾನ್ ಪೊಲೀಸರನ್ನು ನೋಡಿ ಬೆದರಿದ್ದಾರೆ. ಅವರ ಆ ಹೆದರಿಕೆಯಿಂದಲೇ ಪೊಲೀಸರಿಗೆ ಅವರಿಬ್ಬರ ಮೇಲೆ ಅನುಮಾನ ಮೂಡಿದೆ. ಅಲ್ಲಿಂದ ಓಡಿ ಪರಾರಿಯಾಗಲು ಯತ್ನಿಸಿದವರನ್ನು ಪೊಲೀಸರು ತಡೆದು `ಯಾಕೆ ಓಡುವೆ?’ ಎಂದು ಕೇಳಿದ್ದಾರೆ. ಆಗ, ಅವರಿಬ್ಬರು ಸರಿಯಾದ ಉತ್ತರ ಕೊಟ್ಟಿಲ್ಲ.
ಅದಾದ ನಂತರ ಅವರು ಅಪರಿಚಿತರಿಂದ ಗಾಂಜಾ ಖರೀದಿಸಿರುವುದಾಗಿ ಹೇಳಿದ್ದಾರೆ. ಅದನ್ನು ಸೇವನೆ ಮಾಡಿದ ಬಗ್ಗೆಯೂ ತಪ್ಪೊಪ್ಪಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಒಬ್ಬರ ವರದಿ ಮಾತ್ರ ಪಾಸಿಟಿವ್ ಬಂದಿದ್ದರಿAದ ಪೊಲೀಸರು ಆಸೀಪ್ ನಜೀರ್ ಸಾಬ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.