ಯಲ್ಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪಿಸೈ ರಾಜಶೇಖರ ವಂದಲಿ ಅವರು ಭೇಟಿ ನೀಡಿದ್ದು, ಮುಕ್ಕಾಲು ತಾಸು ಪಾಠ ಮಾಡಿದ್ದಾರೆ. ಮಾದಕ ಮುಕ್ತ ಸಮಾಜದ ಬಗ್ಗೆ ಅವರು ವಿವರಿಸಿದ್ದು, ಮಕ್ಕಳು ಅದನ್ನು ಆಲಿಸಿದ್ದಾರೆ.
ಈ ವೇಳೆ ಮಾದಕ ದ್ರವ್ಯಗಳ ಸೇವನೆ-ಸಾಗಾಣಿಕೆ ಹಾಗೂ ಬಳಕೆ ಕುರಿತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗಿದೆ. ಈ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಶ್ವಿನಿ ಗಾಂವ್ಕರ್ ಅವರು ಪ್ರಥಮ ಬಹುಮಾನಪಡೆದಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಐಶ್ವರ್ಯ ನಾಯ್ಕ ಹಾಗೂ ಕಾವ್ಯ ಪಟಗಾರ ಅವರು ದ್ವಿತೀಯ ಬಹುಮಾನ ಹಂಚಿಕೊAಡಿದ್ದಾರೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮಾನ್ಯ ಬಾಂದೇಕರ್ ಅವರು ಮೂರನೇ ಬಹುಮಾನ ಗೆದ್ದಿದ್ದಾರೆ. ಈ ಎಲ್ಲರಿಗೂ ಪೊಲೀಸರು ಪ್ರಶಂಸಾ ಪತ್ರವನ್ನು ನೀಡಿದ್ದಾರೆ.
`ಮಾದಕ ವಸ್ತುಗಳು ಜೀವನಕ್ಕೆ ಮಾರಕ’ ಎಂದು ಈ ವೇಳೆ ರಾಜಶೇಖರ ವಂದಲಿ ಅವರು ಹೇಳಿದ್ದಾರೆ. `ಸಣ್ಣ ಪ್ರಮಾಣದಲ್ಲಿ ಶುರುವಾಗುವ ದುಶ್ಚಟಗಳು ಕ್ರಮೇಣ ದೊಡ್ಡದಾಗಿ ಬೆಳೆಯುತ್ತದೆ. ಅವು ಇಡೀ ಬದುಕನ್ನು ನಾಶ ಮಾಡುತ್ತದೆ’ ಎಂದವರು ಮಕ್ಕಳಿಗೆ ಮನವರಿಕೆ ಮಾಡಿದ್ದಾರೆ. `ಮಾದಕ ವಸ್ತುಗಳ ಸಾಗಾಟ, ಮಾರಾಟ ಹಾಗೂ ಸೇವನೆಯ ಬಗ್ಗೆ ಅನುಮಾನವಿದ್ದರೆ ಪೊಲೀಸರಿಗೆ ತಿಳಿಸಿ’ ಎಂದು ಮನವಿ ಮಾಡಿದ್ದಾರೆ.