ಹುಡುಗಿಯೊಬ್ಬರಿಗೆ ಕಾಟ ಕೊಡುತ್ತಿದ್ದ ಜೊಯಿಡಾದ ಮಾರುತಿ ವೇಳಿಪ್ ಅವರಿಗೆ ಸುಬ್ರಾಯ ಹೆಗಡೆ, ದಯಾನಂದ ಗಾವಡಾ ಹಾಗೂ ನಂದಾ ವೇಳಿಪ್ ಸೇರಿ ಬೆದರಿಸಿದ್ದಾರೆ. ಅವರ ಬೆದರಿಕೆಯಿಂದ ಹೆದರಿದ ಮಾರುತಿ ವೇಳಿಪ್ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ.
ಜೊಯಿಡಾದ ನಗಾರಿ ಬಳಿ ಮಾರುತಿ ಕೇಶವ ವೇಳಿಪ್ ಅವರು ವಾಸವಾಗಿದ್ದರು. 26 ವರ್ಷದ ಅವರು ಪ್ರತಿಮಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಾರುತಿ ವೇಳಿಪ್ ಅವರು ಪ್ರತಿಮಾ ಅವರ ಹಿಂದೆ ಬಿದ್ದಿದ್ದನ್ನು ಪ್ರತಿಮಾ ಕಡೆಯವರು ಸಹಿಸಿರಲಿಲ್ಲ. ಸಾಕಷ್ಟು ಎಚ್ಚರಿಕೆ ಕೊಟ್ಟರೂ ಕೇಶವ್ ವೇಳಿಪ್ ಅವರ ವರ್ತನೆಯಲ್ಲಿ ಬದಲಾವಣೆ ಆಗಿರಲಿಲ್ಲ.
ಹೀಗಾಗಿ ಮೇ 18ರಂದು ಜೊಯಿಡಾ ಪೋಸ್ಟ್ ಆಫಿಸ್ ಬಳಿ ರುಂಡಾಳಿಯ ಸುಬ್ರಾಯ ಹೆಗಡೆ ಅವರು ಕೇಶವ ವೇಳಿಪ್ ಅವರನ್ನು ಅಡ್ಡಗಟ್ಟಿದರು. ಹಲಕಂಬಿಯ ದಯಾನಂದ ಗಾವಡಾ ಮಾಲಾಂಗಣಿ ಶ್ರೀಪತಿಯ ನಂದಾ ವೇಳಿಪ ಅವರು ಸುಬ್ರಾಹ ಹೆಗಡೆ ಅವರ ಜೊತೆಯಿದ್ದರು. ಆ ಮೂವರು ಸೇರಿ ಕೇಶವ ವೇಳಿಪ್ ಅವರನ್ನು ಹೆದರಿಸಿದರು. `ಆ ಹುಡುಗಿ ಸುದ್ದಿಗೆ ಹೋಗಬೇಡ’ ಎಂದು ಜೋರಾಗಿಯೇ ಎಚ್ಚರಿಸಿದರು. ಅದಾದ ನಂತರ `ನೀನಾಗಿಯೇ ಆತ್ಮಹತ್ಯೆ ಮಾಡಿಕೊ. ಇಲ್ಲವಾದರೆ ನಾವೇ ನಿನ್ನ ಸಾಯಿಸುತ್ತೇವೆ’ ಎಂದು ಹೇಳಿದರು.
ಇದರಿಂದ ಆಘಾತಕ್ಕೆ ಒಳಗಾದ ಕೇಶವ್ ವೇಳಿಪ್ ಅವರು ತಮಗೆ ಬಂದ ಬೆದರಿಕೆಯ ಬಗ್ಗೆ ಅಣ್ಣ ಕುಮಾರ ವೇಳಿಪ್ ಅವರಲ್ಲಿ ಹೇಳಿದ್ದರು. ಅದಾದ ನಂತರವೂ ಹೆದರಿಕೆಯಲ್ಲಿಯೇ ಇದ್ದ ಕೇಶವ ವೇಳಿಪ್ ಅವರು ಮೇ 25ರಂದು ನಗರಿಯಲ್ಲಿರುವ ಮನೆ ಕೋಣೆಯಲ್ಲಿ ನೇಣು ಹಾಕಿಕೊಳ್ಳಲು ನಿರ್ಧರಿಸಿದ್ದರು. ಫ್ಯಾನಿಗೆ ಹಗ್ಗ ಕಟ್ಟಿ ನೇತಾಡಿದ ಅವರನ್ನು ಅಕ್ಕಪಕ್ಕದ ಮನೆಯವರು ನೋಡಿ ರಕ್ಷಣೆ ಮಾಡಿದರು. ಅಸ್ವಸ್ಥರಾಗಿದ್ದ ಅವರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.