ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಯು ಟಿ ಖಾದರ್ ಅವರಿಗೆ ಜನಶಕ್ತಿ ವೇದಿಕೆಯವರು ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಒಟ್ಟು 11 ಬೇಡಿಗಳ ಈಡೇರಿಕೆಗೆ ಆಗ್ರಹಿಸಿ ಮಾಧವ ನಾಯಕ ಅವರು ಮನವಿ ಸಲ್ಲಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರ್ತು ಕ್ರಮ ಜರುಗಿಸಬೇಕು’ ಎಂದು ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. `ಉತ್ತರ ಕನ್ನಡವು ರ್ನಾಟಕದ ಗಡಿಭಾಗ ಜಿಲ್ಲೆಯಾಗಿದ್ದರೂ ಸರ್ಪಕ ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ವೈದ್ಯರ ಕೊರತೆ, ಖಾಲಿ ಹುದ್ದೆಗಳು, ಅಗತ್ಯ ವೈದ್ಯಕೀಯ ಉಪಕರಣಗಳ ಅಭಾವ ಹಾಗೂ ತಜ್ಞ ವೈದ್ಯರ ಕೊರತೆಯಿಂದ ಜನ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಕಾರವಾರ ವೈದ್ಯಕೀಯ ವಿಜ್ಞಾನಗಳ ಕೇಂದ್ರದಲ್ಲಿ ವಿಲೀನಗೊಂಡಿರುವ ಜಿಲ್ಲಾ ಆಸ್ಪತ್ರೆಯನ್ನು ಮರುಸ್ಥಾಪಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೆ ನೀಡಬೇಕು. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು, ತಾಂತ್ರಿಕ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಹುದ್ದೆಗಳನ್ನು ತರ್ತಾಗಿ ರ್ತಿ ಮಾಡಬೇಕು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ಒದಗಿಸಿ ಹೃದಯ ಸಂಬಂಧಿ ತರ್ತು ಚಿಕಿತ್ಸೆಯನ್ನು ಗ್ರಾಮೀಣ ಮಟ್ಟದಲ್ಲೇ ಲಭ್ಯವಾಗುವಂತೆ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯ ಏಕೈಕ ಯುರೋಲಾಜಿಸ್ಟ್ರನ್ನು ಹೊರ ಜಿಲ್ಲೆಗೆ ರ್ಗಾವಣೆ ಮಾಡಿರುವ ಆದೇಶವನ್ನು ರದ್ದುಪಡಿಸಿ ಜಿಲ್ಲೆಯಲ್ಲಿ ಸೇವೆ ಮುಂದುವರಿಸಲು ಕ್ರಮ ಕೈಗೊಳ್ಳಬೇಕು. ಅಂಕೋಲಾ ತಾಲೂಕಿನ ಹಟ್ಟಿಕೇರಿ ಪ್ರದೇಶದಲ್ಲಿ ಟ್ರಾಮಾ ಸೆಂಟರ್ ಒಳಗೊಂಡ ಜಿಲ್ಲಾ ಆಸ್ಪತ್ರೆ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇದರೊಂದಿಗೆ `ದಾಂಡೇಲಿಯ 50 ಹಾಸಿಗೆ ಆಸ್ಪತ್ರೆಯನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ರ್ಜೆಗೆ ಏರಿಸಬೇಕು. 108 ತರ್ತು ಆಂಬುಲೆನ್ಸ್ ಸೇವೆಯನ್ನು ಮತ್ತೆ ಪರ್ಣ ಪ್ರಮಾಣದಲ್ಲಿ 24್ಠ7 ವ್ಯವಸ್ಥೆಯಲ್ಲಿ ಕರ್ಯನರ್ವಹಿಸುವಂತೆ ಮಾಡಬೇಕು. ಆಯುಷ್, ಆಯರ್ವೇದ ಹಾಗೂ ಯುನಾನಿ ಆಸ್ಪತ್ರೆಗಳಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ನಿವಾರಿಸಿ ಅಗತ್ಯ ಹುದ್ದೆಗಳನ್ನು ರ್ತಿ ಮಾಡಬೇಕು. ರ್ಕಾರದ ಪರ್ವಾನುಮತಿ ಬಳಿಕ ಮಾತ್ರ ಸಿಟಿ ಸ್ಕ್ಯಾನ್ ಮಾಡುವ ಆದೇಶವನ್ನು ಹಿಂಪಡೆದು ತರ್ತು ಸಂರ್ಭಗಳಲ್ಲಿ ತಕ್ಷಣ ಸ್ಕ್ಯಾನ್ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಮಂಗನ ಕಾಯಿಲೆಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ ಹಾಗೂ ರೇಬಿಸ್ ಸೋಂಕಿತ ನಾಯಿ ಕಡಿತದಿಂದ ಮೃತಪಟ್ಟವರ ಕುಟುಂಬಗಳಿಗೂ ಪರಿಹಾರ ನೀಡಬೇಕು. ಕಾರವಾರ ತಾಲೂಕಿನ ಮುಡುಗೇರಿ ಗ್ರಾಮದ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಯಾಗಿ ಮೇಲ್ರ್ಜೆಗೆ ಏರಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ಜಿಲ್ಲೆಯಲ್ಲಿ ಒಟ್ಟು 2,442 ಮಂಜೂರಾದ ಹುದ್ದೆಗಳ ಪೈಕಿ 1,135 ಹುದ್ದೆಗಳು ಖಾಲಿ ಇರುವುದರಿಂದ ಆರೋಗ್ಯ ಸೇವೆಯ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಗಡಿಭಾಗ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಸೇವೆ ಸಲ್ಲಿಸುವ ವೈದ್ಯರು ಹಾಗೂ ಸಿಬ್ಬಂದಿಗೆ ವಿಶೇಷ ಪ್ರೋತ್ಸಾಹಧನ ನೀಡುವ ಜೊತೆಗೆ ಎಂಆರ್ಐ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕೂಡ ತರ್ತಾಗಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಪ್ರಮುಖರಾದ ರಾಮ ನಾಯ್ಕ, ಜರ್ಜ್ ರ್ನಾಂಡಿಸ್, ಇಬ್ರಾಹಿಂ ಕಲ್ಲೂರ್, ಬಾಬಾ ಕಿತ್ತೂರ್, ಬಾಬು ಶೇಕ್, ಖೈರುನಿಸಾ ಶೇಕ್, ಸುರಜ್ ಕುರುಂಕರ್, ರಾಜೇಂದ್ರ ಅಂಚೆ ಕರ್, ನಿತ್ಯಾನಂದ ನಾಯ್ಕ್, ಲೀಯೋ ಲೂಯಿಸ್, ಫ್ರಾಂಕಿ ಗುಡಿನೋ, ಎಂ ಈ ಶೇಕ್, ಇಮ್ತಿಯಾಜ್ ಬುಖಾರಿ, ವಿಠಲ ನಾಯಕ್, ರೋಹಿದಾಸ್ ವೈಂಗಣಕರ್ ಅವರು ಸಹ ಮಾಧವ ನಾಯಕ ಅವರ ಮನವಿಗೆ ಸಹಿ ಹಾಕಿದ್ದಾರೆ.