ಪ್ರೀತಿಸಿದ ಹುಡುಗಿ ಕೈ ಕೊಟ್ಟ ಕಾರಣ ಹೊನ್ನಾವರದ ಹರೀಶ ಮೇಸ್ತ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿಗಾಗಿ ಅವರು ಜೀವ ಬಿಟ್ಟಿದ್ದಾರೆ.
ಹೊನ್ನಾವರದ ಕಾಸರಕೋಡಿನ ರಾಮನಗರ ಬಳಿ ಹರೀಶ ಗಣಪತಿ ಮೇಸ್ತಾ ಅವರು ವಾಸವಾಗಿದ್ದರು. 24 ವರ್ಷದ ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಮದುವೆ ವಯಸ್ಸಿಗೆ ಬಂದಿದ್ದ ಹರೀಶ ಮೇಸ್ತಾ ಅವರು ಯುವತಿಯೊಬ್ಬರನ್ನು ಪ್ರೀತಿಸಿದ್ದರು. ಅವರನ್ನೇ ಮದುವೆ ಆಗಲು ನಿರ್ಧರಿಸಿದ್ದರು. ಆ ಯುವತಿ ಬಳಿ ತಮ್ಮ ಪ್ರೀತಿಯ ನಿವೇದನೆಯನ್ನು ಮಾಡಿದ್ದರು.
ಕೆಲ ಕಾಲ ಅನ್ಯೋನ್ಯವಾಗಿದ್ದ ಆ ಯುವತಿ ಕ್ರಮೇಣ ಹರೀಶ ಮೇಸ್ತಾ ಅವರನ್ನು ದೂರ ಮಾಡಿದ್ದು, ಅದರಿಂದ ಅವರು ಮಾನಸಿಕವಾಗಿ ನೊಂದಿದ್ದರು. ಯುವತಿ ದೂರವಾದ ನೋವಿನಲ್ಲಿ ಅವರು ಅಸ್ವಸ್ಥರಾಗಿದ್ದು, ದುಡುಕು ನಿರ್ಧಾರವನ್ನು ಮಾಡಿದರು. ಪ್ರೀತಿಸಿದ ಹುಡುಗಿ ಕೈ ಕೊಟ್ಟ ಕಾರಣ ಹರೀಶ ಮೇಸ್ತ ಅವರು ಜುಲೈ 29ರ ಮಧ್ಯಾಹ್ನ ನೇಣಿಗೆ ಶರಣಾದರು. ಮಧ್ಯಾಹ್ನದ ವೇಲೆ ಮನೆಯಲ್ಲಿ ಯಾರು ಇಲ್ಲದಿರುವಾಗ ಅಲ್ಲಿದ್ದ ಸೀರೆಯನ್ನು ಬಳಸಿ ಸಾವನಪ್ಪಿದರು.
ಸಂಜೆ 7 ಗಂಟೆ ಅವಧಿಗೆ ಹರೀಶ ಮೇಸ್ತಾ ಅವರ ಅಣ್ಣ ಗೌರೀಶ ಮೇಸ್ತಾ ಅವರು ಮನೆಗೆ ಬಂದರು. ಸಹೋದರ ಸಾವನಪ್ಪಿರುವ ಬಗ್ಗೆ ಅರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಕಾನೂನು ಕ್ರಮ ಜರುಗಿಸಿದರು.