ಅರಣ್ಯ ಇಲಾಖೆಯಿಂದ ಅನುಷ್ಠಾನಗೊಳಿಸಿದ `ಗಿಡ ನೆಡುವ ಯೋಜನೆ’ ಬಗ್ಗೆ ಮಾಹಿತಿ ಕೋರಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರ್ಜಿ ಸಲ್ಲಿಸಿದ್ದು, ಅವಧಿ ಮುಗಿದರೂ ಅಧಿಕಾರಿಗಳು ಉತ್ತರ ಕೊಟ್ಟಿಲ್ಲ. `ನೆಟ್ಟ ಗಿಡಗಳಲ್ಲಿ ಬದುಕಿದ್ದು ಎಷ್ಟು? ಸತ್ತಿರುವುದು ಎಷ್ಟು?’ ಎಂದು ಬಯಸಿದ ರವೀಂದ್ರ ನಾಯ್ಕ ಅವರ ಅರ್ಜಿಗೆ ಹಿಂಬರಹವೇ ಬಂದಿಲ್ಲ!
ಅರಣ್ಯ ಇಲಾಖೆ ಅನುಷ್ಠಾನಗೊಳಿಸುವ ಗಿಡ ನೆಡುವ ಕಾರ್ಯಕ್ರಮದ ಬಗ್ಗೆ ಎಲ್ಲಡೆ ಟೀಕೆ ಹಾಗೂ ಸಂಶಯ ಶುರುವಾಗಿತ್ತು. ಈ ಹಿನ್ನಲೆ ರವೀಂದ್ರ ನಾಯ್ಕ ಅವರು ಅಧಿಕೃತ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರು. ನಿಯಮಾನುಸಾರ ಅವರು 10ರೂಪಾಯಿಯನ್ನು ಅರಣ್ಯ ಇಲಾಖೆಗೆ ಪಾವತಿಸಿ, ಗಿಡ ನೆಟ್ಟ ಲೆಕ್ಕಾಚಾರದ ವಿವರ ಕೇಳಿದ್ದರು. ಆದರೆ, ಅಧಿಕಾರಿಗಳು ಮಾತ್ರ ಲೆಕ್ಕಾಚಾರದ ಮಾಹಿತಿ ಬಿಚ್ಚಿಟ್ಟಿಲ್ಲ.
`ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗೆ 30 ದಿನದಲ್ಲಿ ದಾಖಲೆ ಒದಗಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಆರು ಪ್ರಶ್ನೆಗಳನ್ನು ಕೇಳಿ ಸಲ್ಲಿಸಿದ ಅರ್ಜಿಗೆ ಉತ್ತರ ಬಂದಿಲ್ಲ’ ಎಂದು ರವೀಂದ್ರ ನಾಯ್ಕ ಅವರು ಅಸಮಧಾನವ್ಯಕ್ತಪಡಿಸಿದರು. `ಅರಣ್ಯ ಇಲಾಖೆ ಪಾರದರ್ಶಕ ಮತ್ತು ಸ್ಪಷ್ಟತೆ ವ್ಯಕ್ತಪಡಿಸಲು ಹಿಂದೆಟು ಹಾಕುತ್ತಿರುವುದು ವಿಷಾಧನೀಯ’ ಎಂದವರು ಹೇಳಿದರು. ನಡುತೋಪು ಯೋಜನೆ ಕಾಮಗಾರಿ ಸಂಭoಧಿಸಿ ಅರಣ್ಯ ಇಲಾಖೆಯು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕಾಮಗಾರಿ ಸಂಬAಧಿಸಿ ವೆಚ್ಚ, ಗುತ್ತಿಗೆದಾರನ ವಿವರ, ಯೋಜನೆಗೆ ಸಂಬAಧಿಸಿ ಇನ್ನೀತರ ಪೂರ್ಣ ಪ್ರಮಾಣದ ಮಾಹಿತಿಯನ್ನು ಪ್ರಕಟಿಸದ ಕಾರಣ ಕಚೇರಿಗೆ ಪಾದಯಾತ್ರೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ.