ಕೈಗಾ ಮಾರ್ಗವಾಗಿ ಭಾರೀ ಪ್ರಮಾಣದ ವಾಹನ ಸಂಚಾರದಿoದ ರಸ್ತೆ ಹಾಳಾಗಿರುವುದನ್ನು ಮನಗಂಡ ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಈ ಮಾರ್ಗವಾಗಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ವಾಹನ ಓಡಾಟದ ಚಲನ-ವಲನಗಳ ಮೇಲೆ ನಿಗಾವಿರಿಸುವಂತೆ ಅವರು ಪೊಲೀಸರಿಗೆ ಜವಾಬ್ದಾರಿ ನೀಡಿದ್ದಾರೆ.
Advertisement. Scroll to continue reading.
ಕಾರವಾರ-ದೇವಳಮಕ್ಕಿ-ಕೆರವಡಿ-ಬೋಳ್ವೆ-ಇರಪಾಗೆ-ಮಲ್ಲಾಪುರ ಮಾರ್ಗವಾಗಿ ಭಾರೀ ವಾಹನಗಳ ಸಂಚಾರದಿAದ ರಸ್ತೆ ಹಾಳಾಗಿದೆ. ಇಲ್ಲಿ ಪದೇ ಪದೇ ಅಪಘಾತವಾಗುತ್ತಿದ್ದು, ಜನರ ಜೀವಕ್ಕೂ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಹೊಂಡ ಬಿದ್ದಿದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದೆ. ಈ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು 30ಟನ್’ಗಿಂತ ಅಧಿಕ ಬಾರದ ವಾಹನಗಳ ಓಡಾಟದಿಂದಲೇ ಈ ಸಮಸ್ಯೆ ಉದ್ಬವಿಸಿರುವುದನ್ನು ಗಮನಿಸಿದ್ದಾರೆ.
Advertisement. Scroll to continue reading.
ಈ ಹಿನ್ನಲೆ ಕಾರವಾರ-ದೇವಳಮಕ್ಕಿ-ಕೆರವಡಿ-ಬೋಳ್ವೆ-ಇರಪಾಗೆ-ಮಲ್ಲಾಪುರ ಮಾರ್ಗವಾಗಿ 30 ಟನ್ ಮೇಲ್ಪಟ್ಟ ಎಲ್ಲಾ ವಾಹನಗಳ ಓಡಾಟ ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ. ಲಘು ವಾಹನಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಲಘು ವಾಹನಗಳ ಓಡಾಟಕ್ಕೆ ಅನುಕೂಲ ಆಗುವ ಹಾಗೇ ತಕ್ಷಣ ರಸ್ತೆ ರಿಪೇರಿ ಮಾಡುವಂತೆ ಕೈಗಾ ಅಣು ಘಟಕದವರಿಗೆ ಡೀಸಿ ಸೂಚನೆ ನೀಡಿದ್ದಾರೆ. ಪೊಲೀಸರು ಅಗತ್ಯವಿರುವ ಕಡೆ ಬ್ಯಾರಿಕೇಡ್ ಅಳವಡಿಸಬೇಕು. ಈ ಮಾರ್ಗವಾಗಿ ಓಡಾಡುವ ವಾಹನಗಳ ಚಲನ-ವಲನ ಗಮನಿಸಬೇಕು ಎಂದು ಡೀಸಿ ಪೊಲೀಸರಿಗೆ ಸೂಚಿಸಿದ್ದಾರೆ.