ಶಿಕ್ಷಕ, ಸಂಘಟಕ, ನಿರ್ವಾಹಕ ಹಾಗೂ ಅಸ್ನೋಟಿ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕ ಗಣೇಶ ಬೀಷ್ಠಣ್ಣನವರ್ ಅವರಿಗೆ India Business Excellence Award 2026 and Achievements Award ಪ್ರಶಸ್ತಿ ಬಂದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ಗಣೇಶ ಬೀಷ್ಟಣ್ಣನವರ್ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಆಗಮಿಸಿ 22 ವರ್ಷಗಳಾಗಿವೆ. ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಪ್ರೌಢಶಾಲೆಯ ಶಿಕ್ಷಕರಾಗಿ ಆಗಮಿಸಿದ ಅವರು ಹತ್ತು ಹಲವು ಸಂಘ-ಸAಸ್ಥೆಗಳ ಸಕ್ರೀಯ ಸದಸ್ಯರಾಗಿದ್ದಾರೆ. ಗುಡ್ಡಗಾಡು ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸದ್ಯ ಅದೇ ಶಾಲೆಯ ಮುಖ್ಯಾಧ್ಯಪಕರಾಗಿ ಅವರು ಪದೊನ್ನತಿಪಡೆದಿದ್ದಾರೆ. ಅವರ ಈ ಎಲ್ಲಾ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಪರಿಗಣಿಸಿ India Business Excellence Award 2026 and Achievements Award ಪ್ರಶಸ್ತಿ ಬಂದಿದೆ.
ಸರ್ಕಾರಿ ಸೇವೆಯಲ್ಲಿರುವ ಗಣೇಶ ಬೀಷ್ಟಣ್ಣನವರ್ ಅವರು ಆ ಸೇವೆಯ ಜೊತೆ ಜೊತೆಗೆ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಎಂ ಎ, ಬಿ.ಇಡಿ ಓದಿರುವ ಅವರಿಗೆ ಗೌರವ ಡಾಕ್ಟರೇಟ್ ಸಹ ಸಿಕ್ಕಿದೆ. 150ಕ್ಕೂ ಅಧಿಕ ಅಂಕಣ, 450ಕ್ಕೂ ಅಧಿಕ ಕಾರ್ಯಕ್ರಮಗಳ ನಿರ್ವಹಣೆ ಜೊತೆ 500ರಷ್ಟು ವಿಶೇಷ ಉಪನ್ಯಾಸಗಳನ್ನು ಅವರು ನೀಡಿದ್ದಾರೆ. ಪ್ರಬಂದ ರಚನೆ ಮಾರ್ಗದರ್ಶನ ಮಾಡುವುದರಲ್ಲಿ ಅವರ ಕೊಡುಗೆ ಅಪಾರ. ರಾಜ್ಯಮಟ್ಟದ ಸ್ಪರ್ಧೆ ಹಾಗೂ ಕವನ ರಚನೆ ವಿಷಯವಾಗಿ 13 ಬಾರಿ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ.
ಕೊರೊನಾ ಅವಧಿಯಲ್ಲಿ ರೋಗದ ವಿರುದ್ಧ ಜಾಗೃತಿಗಾಗಿ ವಿವಿಧ ಬಗೆಯ ನಾಟಕ ರಚಿಸಿದ್ದಾರೆ. ಮಕ್ಕಳ ಸೃಜನಶೀಲತೆಯ ವಿಕಾಸಕ್ಕೆ ಪ್ರೀತಿ ಪದಗಳ ಪಯಣ, ದರ್ಪಣ, ನಮ್ಮ ನಡಿಗೆ ಸಾವಿರದ ನಡಿಗೆ, ನಾನು ಮತ್ತು ನನ್ನ ಕಲಿಕೆ ಎಂಬAಥಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅನೇಕ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. `ಮಿಸ್ ಕಾಲ್ ನೀಡಿ, ಸಮಸ್ಯೆ ಬಗಹರಿಸಿಕೊಳ್ಳಿ’ ಎಂಬ ಕಾರ್ಯಕ್ರಮದ ಪ್ರಮುಖ ಉಸ್ತುವಾರಿವಹಿಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ. 9 ನಾಟಕಗಳಲ್ಲಿ ಅಭಿನಯಿಸಿದ ಅವರು ಸ್ವತಃ ನಿರ್ದೇಶನವನ್ನು ಮಾಡಿದ್ದಾರೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ, ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಜಿಲ್ಲಾ ವಾಲ್ಮೀಕಿ ಪ್ರಶಸ್ತಿ, ವಿದ್ಯಾರ್ಥಿ ಪ್ರೀಯ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ, ಸಿರಿಗನ್ನಡ ನುಡಿಸಿರಿ ರಾಜ್ಯ ಪ್ರಶಸ್ತಿ, ಜವಹರಲಾಲ್ ನೆಹರು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್, ಭಾರತ ಶಾಂತಿ ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ನೇಶನ್ ಬಿಲ್ಡರ್ ಅವಾರ್ಡ್, ರೋಟರಿ ವೋಕೇಶನಲ್ ಅವಾರ್ಡ್, ಲಯನ್ಸ್ ಡಿಸ್ಟ್ರಿಕ್ಟ್ ಅವಾರ್ಡ್, ಲಯನ್ಸ್ ಇಂಟರ್ನ್ಯಾಷನಲ್ ಅವಾರ್ಡ್,ಶಿಕ್ಷಣ ರತ್ನ ಪ್ರಶಸ್ತಿ ಜೊತೆ ಲೋಕ ಧ್ವನಿ ಪತ್ರಿಕೆಯ ಹೆಮ್ಮೆಯ ಸಾಧಕರು ಪ್ರಶಸ್ತಿಯೂ ಅವರಿಗೆ ಸಿಕ್ಕಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿ ಗಣೇಶ ಬೀಷ್ಟಣ್ಣನವರ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಶೈಕ್ಷಣಿಕ ನಾಯಕತ್ವ ಮತ್ತು ಅಭಿವೃದ್ಧಿಯಲ್ಲಿ ಶ್ರೇಷ್ಠತೆಯಲ್ಲಿನ ಸಾಧನೆಯನ್ನು ಪ್ರಶಸ್ತಿಯ ಮುಖ್ಯ ಮಾನದಂಡವಾಗಿ ಪರಿಗಣಿಸಲಾಗಿದೆ. ಅಗಸ್ಟ 29ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿ ವಿತರಣೆ ನಡೆಯಲಿದೆ.