ಶಿರಸಿಯ ಹುತ್ಗಾರಿನ ಬಸವರಾಜ ತೋಟದ್ ಅವರು ಹೆಚ್ಚಿನ ಲಾಭದ ಆಸೆಗೆ ಬಿದ್ದು 73 ಲಕ್ಷ ರೂ ಕಳೆದುಕೊಂಡಿದ್ದಾರೆ. ಹೆಚ್ಚಿನ ಲಾಭದ ಆಸೆ ತೋರಿಸಿದ ಸಾಮಾಜಿಕ ಜಾಲತಾಣದ ಶೂರರು ಅವರ ಬ್ಯಾಂಕ್ ಖಾತೆ ಖಾಲಿ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ ಬಸವರಾಜ ತೋಟದ್ (76) ಅವರು ಶಿರಸಿಯ ಹುತ್ಗಾರ ಕ್ರಾಸಿನಲ್ಲಿ ವಾಸವಾಗಿದ್ದಾರೆ. ರೈತರಾಗಿ ಅವರು ದುಡಿಯುತ್ತಿದ್ದು, ಜಾಲತಾಣಗಳಲ್ಲಿಯೂ ಸಕ್ರೀಯವಾಗಿದ್ದಾರೆ. 2026ರ ಏಪ್ರಿಲ್ 24ರಂದು ಬಸವರಾಜ್ ಅವರು ಫೇಸ್ಬುಕ್ ಬಳಸುತ್ತಿದ್ದಾಗ ‘Finsol’ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಸಂದೇಶ ಬಂದಿದೆ. ಅದನ್ನು ನೋಡಿದ ಅವರು ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ “813 Finsol Collective Private” ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿದ್ದಾರೆ.
ಅಲ್ಲಿ ಅನನ್ಯಾ ಕುಲಕರ್ಣಿ ಎಂಬಾತರು ಪರಿಚಯವಾಗಿದ್ದಾರೆ. ತಮ್ಮನ್ನು ಟ್ರೇಡಿಂಗ್ ತಜ್ಞರು ಎಂದು ಪರಿಚಯಿಸಿಕೊಂಡ ಅವರು “Finsol Sarathi Plan” ಮೂಲಕ ಹಣ ಹೂಡಿಕೆ ಮಾಡಿದರೆ ಭಾರೀ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ಹಂತ ಹಂತವಾಗಿ ಬಸವರಟಜ ತೋಡದ್ ಅವರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.
ಏಪ್ರಿಲ್ 27ರಿಂದ ಜೂನ್ 15ರವರೆಗೆ ಒಟ್ಟು ₹73,72,090 ಹಣವನ್ನು ವರ್ಗಾವಣೆ ಮಾಡಿದ್ದರೂ, ಹೂಡಿಕೆಯ ಲಾಭವೂ ಸಿಗಲಿಲ್ಲ, ಮೂಲ ಹಣವೂ ಮರಳಿ ಬಂದಿಲ್ಲ.