ಶಿರಸಿಯ ಬಿಡ್ಕಿ ಸರ್ಕಲ್ ಬಳಿ ಹೊಡೆದಾಟ ನಡೆದಿದೆ. ಕ್ಷುಲ್ಲಕ ವೈಯಕ್ತಿಕ ವಿಚಾರವೊಂದಕ್ಕೆ ಎಂಟು ಜನ ಹೊಡೆದಾಡಿಕೊಂಡಿದ್ದಾರೆ.
ಶನಿವಾರ ಸಂಜೆ ಶಿರಸಿ ನಗರದ ಬಿಡ್ಕಿ ಸರ್ಕಲ್ ಸಮೀಪದ ಉಡುಪಿ ಹೋಟೆಲ್ ಎದುರು ಈ ಹೊಡೆದಟ ನಡೆದಿದೆ. ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡಿದ ಆರೋಪದಡಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ ಮಾಹಿತಿಯ ಪ್ರಕಾರ ಆಗಸ್ಟ್ 1ರಂದು ಸಂಜೆ ಸುಮಾರು 6.30ರ ವೇಳೆಗೆ ಬಿಡ್ಕಿ ಸರ್ಕಲ್ ಉಡುಪಿ ಹೋಟೆಲ್ ಬಳಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ಆರಂಭವಾಗಿದೆ. ನಂತರ ಅದು ಹೊಡೆದಾಟಕ್ಕೆ ತಿರುಗಿದೆ. ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಕೈಯಿಂದ ಹೊಡೆದಾಡಿಕೊಂಡ ಪರಿಣಾಮ ಅಲ್ಲಿದ್ದ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರೆ.
ಈ ಪ್ರಕರಣದಲ್ಲಿ ಆರೆಕೊಪ್ಪದ ಮಂಜುನಾಥ ಬಸವರಾಜ ಜಗ್ಲೆರ (ಸೆಂಟ್ರಿಂಗ್ ಕೆಲಸ), ಬನವಾಸಿಯ ಗಿರೀಶ ಚಂದ್ರಶೇಖರ ದೇವಾಡಿಗ (ರೈತ), ಬಚಗಾಂವದ ಗಣೇಶ ಯೋಗೇಂದ್ರ ಮಡಿವಾಳ (ವಿದ್ಯಾರ್ಥಿ), ಕೊರ್ಲಕಟ್ಟದ ನಾಗರಾಜ ಪರಶುರಾಮ ತಳವಾರ (ಗೌಂಡಿ ಕೆಲಸ), ವಡ್ಡಿನಕೊಪ್ಪ, ಕೊರ್ಲಕಟ್ಟದ ಮಾರುತಿ ಪರಶುರಾಮ ತಳವಾರ (ಗೌಂಡಿ ಕೆಲಸ), ಬೆಂಗಳೆಯ ಮಯೂರ ಶೇಖರ ಉಪ್ಪಾರ (ಹೋಟೆಲ್ ಸಪ್ಲೈಯರ್), ಶಿವಳ್ಳಿ-ಬಪ್ಪನಳ್ಳಿಯ ವಿನಾಯಕ ನರಸಿಂಹ ದೇವಾಡಿಗ (ಹೋಟೆಲ್ ಮ್ಯಾನೇಜರ್) ಹಾಗೂ ಮರಾಠಿಕೊಪ್ಪದ ಚರಣ ವಿನೋದ ಭಂಡಾರಿ (ಸಪ್ಲೈಯರ್ ಕೆಲಸ) ಪ್ರಮುಖ ಪಾತ್ರದಾರಿಗಳಾಗಿದ್ದಾರೆ.
ಘಟನೆಯ ಬಗ್ಗೆ ಸಹಾಯಕ ಪೊಲೀಸ್ ಉಪನಿರೀಕ್ಷಕ ನೆಲ್ಸನ್ ಆರ್ ಮೆಂತೆರೋ ಅವರು ಕಾನೂನು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಉಂಟುಮಾಡಿದ ಹಿನ್ನಲೆ ಆ ಎಲ್ಲರ ವಿರುದ್ಧ ಕೇಸು ದಾಖಲಿಸಿದರು.