ಭಾರತೀಯ ವಾಯುಪಡೆಯ ಜೂನಿಯರ್ ವಾರಂಟ್ ಆಫೀಸರ್ ಆಗಿ ನಿವೃತ್ತಿಗೊಂಡ ಸತ್ಯನಾರಾಯಣ ಭಟ್ ಹಾಗೂ ನಿರ್ಗತಿಕ ವೃದ್ಧರ ಪುನರ್ವಸತಿಗೆ ಶ್ರಮಿಸುತ್ತಿರುವ ನಾಗರಾಜ ನಾಯ್ಕ ಅವರಿಗೆ ಸ್ಕೋಡ್ವೆಸ್ ಸಂಸ್ಥೆ ಧ್ವಜವಂದನಾ ಪುರಸ್ಕಾರ ನೀಡುವುದಾಗಿ ಘೋಷಿಸಿದೆ.
ಸ್ಕೋಡ್ವೆಸ್ ಸಂಸ್ಥೆ ಪ್ರತಿ ವರ್ಷವೂ ದೇಶಸೇವೆ, ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ತಲಾ ಒಬ್ಬರನ್ನು ಗುರುತಿಸಿ ಸ್ವಾತಂತ್ರೊö್ಯÃತ್ಸವದ ಧ್ವಜವಂದನಾ ಕಾರ್ಯಕ್ರಮದಲ್ಲಿ ಗೌರವಿಸುತ್ತಿದೆ. ಧ್ವಜಾರೋಹಣದ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಅದರಂತೆ, ಈ ಬಾರಿ ಭಾರತೀಯ ವಾಯುಪಡೆಯ ಜೂನಿಯರ್ ವಾರಂಟ್ ಆಫೀಸರ್ ಆಗಿ ನಿವೃತ್ತಿಗೊಂಡ ಸತ್ಯನಾರಾಯಣ ಆರ್ ಭಟ್ ಅವರಿಗೆ ಈ ಗೌರವ ಸಿಗಲಿದೆ. ಜೊತೆಗೆ ಸಾಮಾಜಿಕ ಸೇವೆಗಾಗಿ ನಿರ್ಗತಿಕ ವೃದ್ಧರ ಪುನರ್ವಸತಿಗೆ ಶ್ರಮಿಸುತ್ತಿರುವ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಮುಖ್ಯಸ್ಥ ನಾಗರಾಜ ನಾಯ್ಕ ಅವರನ್ನು ಈ ವೇಳೆ ಸನ್ಮಾನಿಸಲಾಗುತ್ತದೆ.
ಈ ಕುರಿತು ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. ಅಗಸ್ಟ 15ರ ಕಾರ್ಯಕ್ರಮದ ಅವಧಿಯಲ್ಲಿ ಸನ್ಮಾನ ನಡೆಯಲಿದೆ. `ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರ ಸೇವೆ ಇನ್ನಿತರರಿಗೂ ಪ್ರೇರಣೆಯಾಗಲಿದೆ’ ಎಂದವರು ಹೇಳಿದ್ದಾರೆ.