ಕುಮಟಾ ಹಳಕಾರಿನ ಐಶ್ವರ್ಯ ಶ್ಯಾನಭಾಗ ಅವರು ಅಂಚೆ ಕಚೇರಿಯಲ್ಲಿ ಅಪರಾತಪರ ಮಾಡಿದ್ದು, ಆ ವಿಷಯವಾಗಿ ಪ್ರಶ್ನಿಸಿದ ಕಾರಣ ವನಿತಾ ಹರಿಕಂತ್ರ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈಶ್ವರ್ಯ ಶ್ಯಾನಭಾಗ ಅವರ ಜೊತೆ ಅವರ ತಾಯಿ ಗೀತಾ ಶ್ಯಾನಭಾಗ ಅವರು ಸಹ ವನಿತಾ ಹರಿಕಂತ್ರ ಅವರಿಗೆ ನಿಂದಿಸಿದ್ದಾರೆ.
Advertisement. Scroll to continue reading.
ಕುಮಟಾದ ಹಳಕಾರಿನಲ್ಲಿ ವನಿತಾ ಸುರೇಶ ಹರಿಕಂತ್ರ ಅವರು ವಾಸವಾಗಿದ್ದಾರೆ. 40 ವರ್ಷದ ವನಿತಾ ಹರಿಕಂತ್ರ ಅವರು ಮೀನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರ ಪಕ್ಕದ ಮನೆಯಲ್ಲಿ ಈಶ್ವರ್ಯ ಗುರುನಾಥ ಶ್ಯಾನಭಾಗ ಅವರು ವಾಸವಾಗಿದ್ದಾರೆ. 23 ವರ್ಷದ ಈಶ್ವರ್ಯ ಶ್ಯಾನಭಾಗ ಅವರು ಈ ಮೊದಲು ಹಳಕಾರ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಜನರಿಂದ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ ಅಂಚೆ ಇಲಾಖೆ ಅವರನ್ನು ಸೇವೆಯಿಂದ ಅಮಾನತು ಮಾಡಿದೆ. ಅಮಾನತು ಆಗಲು ಊರಿನ ಜನ ಕಾರಣ ಎಂದು ಭಾವಿಸಿದ್ದ ಈಶ್ವರ್ಯ ಶ್ಯಾನಭಾಗ ಅವರು ವನಿತಾ ಹರಿಕಂತ್ರ ಅವರ ಮೇಲೆಯೂ ಸಿಟ್ಟಾಗಿದ್ದಾರೆ.
ಅದೇ ಸಿಟ್ಟಿನಲ್ಲಿ ಈಶ್ವರ್ಯ ಶ್ಯಾನಭಾಗ ಅವರು ವನಿತಾ ಹರಿಕಂತ್ರ ಅವರ ಮನೆಗೆ ಬೀದಿ ನಾಯಿಗಳನ್ನು ತಂದು ಬಿಡುತ್ತಿದ್ದಾರೆ. ಜೊತೆಗೆ ನಿತ್ಯ ಕೆಟ್ಟ ಶಬ್ದಗಳಿಂದ ಬೈಯುವುದನ್ನು ರೂಢಿಸಿಕೊಂಡಿದ್ದಾರೆ. ಹೀಗಿರುವಾಗ ಸೆಪ್ಟೆಂಬರ್ 4ರಂದು ವನಿತಾ ಹರಿಕಂತ್ರ ಅವರು ಹಳಕಾರಿಗೆ ಹೋಗಿ ಬಟ್ಟೆ ಪಡೆದು ಬರುವಾಗ ಕೂಜಳಿಮುಕ್ರಿ ಮನೆ ಬಳಿ ಐಶ್ವರ್ಯ ಶ್ಯಾನಭಾಗ ಅವರು ಎದುರಾಗಿದ್ದಾರೆ. ಎಲೆಕ್ಟಿçಕಲ್ ಸ್ಕೂಟಿಯಲ್ಲಿ ತಾಯಿ ಗೀತಾ ಗುರುನಾಥ ಶ್ಯಾನಭಾಗ ಅವರನ್ನು ಕೂರಿಸಿಕೊಂಡು ಬಂದ ಐಶ್ವರ್ಯ ಶ್ಯಾನಭಾಗ ಅವರು ವನಿತಾ ಹರಿಕಂತ್ರ ಅವರನ್ನು ಮತ್ತೆ ನಿಂದಿಸಿದ್ದಾರೆ.
Advertisement. Scroll to continue reading.
ಈಶ್ವರ್ಯ ಶ್ಯಾನಭಾಗ ಹಾಗೂ ಗೀತಾ ಶ್ಯಾನಭಾಗ ಸೇರಿ ವನಿತಾ ಹರಿಕಂತ್ರ ಅವರನ್ನು ಅಡ್ಡಹಾಕಿದ್ದು, `ಊರಿನ ಜನರ ಜೊತೆ ಸೇರಿ ನಮ್ಮ ವಿರುದ್ಧ ಹಗೇ ಸಾಧಿಸಿದರೆ ಕೊಲೆ ಮಾಡುತ್ತೇವೆ’ ಎಂದು ಹೆದರಿಸಿದ್ದಾರೆ. ಇದರಿಂದ ಹೆದರಿದ ವನಿತಾ ಹರಿಕಂತ್ರ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದು, ವನಿತಾ ಹರಿಕಂತ್ರ ಅವರಿಗೆ ಧೈರ್ಯ ಹೇಳಿ ಕಳುಹಿಸಿದ್ದಾರೆ.