ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಷಯವಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿ ವಾಸಸ್ಥಳ ದೃಢೀಕರಣಕ್ಕೆ ಸರ್ಕಾರ ಆದೇಶಿಸಿದ್ದು, ಆ ಆದೇಶವೇ ಅಸಂಬದ್ಧ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಈ ವಿಷಯವಾಗಿ ಮಾತನಾಡಿದ ನ್ಯಾಯವಾದಿ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ್ಕ ಅವರು `ವಾಸಸ್ಥಳ ದೃಡೀಕರಣ ದಾಖಲೆ ಸ್ಪಷ್ಟತೆಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
`ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಭಾರತದ ಪೌರತ್ವ ಸಾಭೀತುಪಡಿಸುವ ದಾಖಲಾತಿ ಪಟ್ಟಿಯಲ್ಲಿ ಶಾಶ್ವತ ನಿವಾಸಿ ಪ್ರಮಾಣ ಪತ್ರ ಒದಗಿಸಲು ಅವಕಾಶ ನೀಡಿದೆ. ಮತದಾರರಿಗೆ ಅನುಕೂಲ ದೃಷ್ಟಿಯಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಜೂನ್ 20ರಂದು ಸ್ಥಳಿಯ ಗ್ರಾಮ ಪಂಚಾಯತ್ ಅಭೀವೃದ್ದಿ ಅಧಿಕಾರಿಯಿಂದ ವಾಸಸ್ಥಳ ದೃಡಿಕರಣ ಪತ್ರ ನೀಡಲು ಸೂಚನೆ ನೀಡಿದ್ದಾರೆ. ಆದರೆ, ಚುನಾವಣೆ ಆಯೋಗವು ಕಂದಾಯ ಇಲಾಖೆ ಸೂಚಿಸಿದ ಅಧಿಕಾರಿಯು ಧೃಡಿಕರಿಸಿದ ವಾಸಸ್ಥಳದ ಪ್ರಮಾಣ ಪತ್ರ ಅವಶ್ಯ ಎಂದು ಹೇಳಿದೆ. ಈ ಬಗ್ಗೆ ವಿಶೇಷ ಸಮಗ್ರ ಪರಿಷ್ಕರಣ ಪಟ್ಟಿಯ 11 ವಿವಿಧ ದಾಖಲೆಯ ಪಟ್ಟಿಯಲ್ಲಿ ಉಲ್ಲೇಖವೂ ಆಗಿದೆ’ ಎಂದವರು ವಿವರಿಸಿದ್ದಾರೆ.
`ಕರ್ನಾಟಕದಲ್ಲಿ ಉಪತಹಶೀಲ್ದಾರ ದರ್ಜೆಗಿಂತ ಕೆಳಹಂತದ ಅಧಿಕಾರಿಗಳು ನೀಡುವ ಪ್ರಮಾಣ ಪತ್ರಕ್ಕೆ ಕಾನೂನಾತ್ಮಕ ಮೌಲ್ಯತೆ ಕುರಿತ ಚರ್ಚೆಯೂ ಗೊಂದಲಕ್ಕೆ ಕಾರಣವಾಗಿದೆ. ಮತದಾರರಲ್ಲಿ ಆಗಿರುವ ಗೊಂದಲವನ್ನು ಜಿಲ್ಲಾ ಚುನಾವಣಾ ಆಯೋಗ ಬಗೆಹರಿಸಬೇಕು. ಮತದಾರರಿಗೆ ಸೂಕ್ತ ಮಾಹಿತಿ ಒದಗಿಸಬೇಕು’ ಎಂದು ಅವರು ಹೇಳಿದ್ದಾರೆ. `ಆಯೋಗದ ಉಲ್ಲೇಖದಂತೆ ಶಾಶ್ವತ ನಿವಾಸಿ ಪ್ರಮಾಣ ಪತ್ರವು ಪೌರತ್ವ ಧೃಡೀಕರಣದ ದಾಖಲೆಯೆಂದು ಆರ್ಥಯಿಸಿದರೆ ರಾಜ್ಯ ಸರ್ಕಾರ ಉಲ್ಲೇಖಿಸಿದ ವಾಸಸ್ಥಳದ ಧೃಡೀಕರಣ ಪತ್ರವು ವಿಳಾಸ ಧೃಡೀಕರಣಕ್ಕೆಂದು ಅರ್ಥಯಿಸಲಾಗುತ್ತಿದೆ. ಈ ಹಂತದಲ್ಲಿ ಜಿಲ್ಲಾ ಚುನಾವಣೆ ಆಯೋಗದ ಸ್ಪಷ್ಟೀಕರಣ ಅವಶ್ಯ’ ಎಂದು ರವೀಂದ್ರ ನಾಯ್ಕ ಅವರು ಅಭಿಪ್ರಾಯಪಟ್ಟಿದ್ದಾರೆ.