`ಸಂವಿಧಾನಕ್ಕೆ ವಿರುದ್ಧವಾಗಿ ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದು, ತಮ್ಮ ವ್ಯಕ್ತಿತ್ವಕ್ಕೆ ಮಾಡಿದ ಅವಮಾನ. ಈ ಸ್ಥಾನದಿಂದ ಕೆಳಗಿಳಿಸಿದ ಮಾತ್ರಕ್ಕೆ ಶಿಕ್ಷಕರ ಸಮಸ್ಯೆ ವಿರುದ್ಧ ಹೋರಾಟ ನಿಲ್ಲಿಸಲ್ಲ’ ಎಂದು ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ. `ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದ ಹಾಗೇ ಶಿಕ್ಷಕರ ಕ್ಷೇತ್ರದ ಘನತೆ ಕಾಪಾಡಿಕೊಂಡು ಬಂದಿದ್ದ ತನ್ನ ಗೌರವಕ್ಕೆ ಇದೀಗ ಧಕ್ಕೆಯಾಗಿದೆ. ಇಷ್ಟು ವರ್ಷಗಳ ಕಾಲ ಘನತೆಯಿಂದ ಕಾಪಾಡಿಕೊಂಡು ಬಂದಿರುವ ಈ ವ್ಯಕ್ತಿತ್ವಕ್ಕೆ ಅವಮಾನ ಮಾಡಲಾಗಿದೆ. ಆದರೆ, ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇನ್ನೂ ಹೆಚ್ಚಿನ ಸಮಯ ಶಿಕ್ಷಕರ ಕ್ಷೇತ್ರದಲ್ಲಿ ಸೇವೆ ಮಾಡುವೆ’ ಎಂದವರು ಹೇಳಿದ್ದಾರೆ.
ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಯಲ್ಲಾಪುರ ತಾಲೂಕ ಮಟ್ಟದ ಮಾಧ್ಯಮಿಕ ನೌಕರರ ಸಂಘದ ಕಾರ್ಯಕಾರಿಣಿ ಸಭೆ ನಡೆಸಿದ ಅವರು `ಸಂಘಟನೆ ವಿಷಯವಾಗಿ ಸಾಂವಿಧಾನಿಕವಾದ ಬಂಧನದಿAದ ತನಗೆ ಬಿಡುಗಡೆಯಾಗಿದೆ. ಅದರಿಂದ ಶಿಕ್ಷಕರಿಗಾಗಿ ಶ್ರಮಿಸಲು ಇನ್ನಷ್ಟು ಸಮಯ ಸಿಕ್ಕಿದೆ. ಕಾಲ್ಪನಿಕ ವೇತನದ ಕುರಿತು ನ್ಯಾಯಾಂಗ ವ್ಯವಸ್ಥೆ ನೀಡಿರುವ ತೀರ್ಪನ್ನು ಅನುಸರಿಸಿ ಸರ್ಕಾರವನ್ನು ಈ ರಾಜ್ಯದಲ್ಲಿ ಒಪಿಎಸ್ ಜಾರಿ ಮಾಡುವಂತೆ ಒತ್ತಾಯಿಸುವುದರ ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಹಾಗೂ ಅನುದಾನಿತ ಶಾಲೆಗಳು ಕನ್ನಡ ಮಾಧ್ಯಮದ ಶಾಲೆಗಳ ಉಳಿವಿಗಾಗಿ ಸದಾ ಶ್ರಮಿಸಲು ಬದ್ಧವಾಗಿದ್ದೇನೆ. ಶಿಕ್ಷಕರ ಸಂಘಟನೆಗಳೊAದಿಗೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ’ ಎಂದವರು ಹೇಳಿದ್ದಾರೆ.
`ಕೆಪಿಎಸ್ ಶಾಲೆ ದ್ವಿಭಾಷೆ ಶಾಲೆಗಳನ್ನ ಪ್ರಾರಂಭಿಸುವ ಮೂಲಕ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನ ಅನುದಾನಿತ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕುರಿತು ಗಂಭೀರವಾದ ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರವನ್ನು ಎಚ್ಚರಿಸಲಾಗುತ್ತದೆ’ ಎಂದವರು ವಿವರಿಸಿದರು. `ಶಿಕ್ಷಕರ ಸಂಘಟನೆಗಳನ್ನು ಬಲಪಡಿಸಬೇಕು. ಸಂಘಟನೆ ಇಲ್ಲದಿದ್ದರೆ ಶಿಕ್ಷಕರು ಇನ್ನಷ್ಟು ಸಮಸ್ಯೆ ಅನುಭವಿಸಬೇಕಾಗಿದ್ದು, ಎಲ್ಲರೂ ಸಂಘಟನೆ ಸದಸ್ಯರಾಗಿ ಶ್ರಮಿಸಬೇಕು’ ಎಂದು ಕರೆ ನೀಡಿದರು. ಈ ವೇದಿಕೆಯಲ್ಲಿ ತಾಲೂಕ ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ, ಕಾರ್ಯದರ್ಶಿ ಶರಣಬಸವ ಬೇವಿನಕಟ್ಟಿ, ಕೇಂದ್ರ ಸಮಿತಿಯ ವೀಕ್ಷಕರಾಗಿ ಆಗಮಿಸಿದ ಎಂ ರಾಜಶೇಖರ ಅವರು ಇದ್ದರು.