ಭಟ್ಕಳದ ವೈದ್ಯರೊಬ್ಬರು ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಆ ವೈದ್ಯರ ಜೊತೆ ಮದುವೆ ಮಾಡಿಸುವಂತೆ ಕೋರಿ ಆ ಮಹಿಳೆ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
Advertisement. Scroll to continue reading.
ಭಟ್ಕಳದ ಹೆಬಳೆ ಗಾಂಧೀನಗರದಲ್ಲಿ ವಾಸಿಸುವ 25 ವರ್ಷದ ಮಹಿಳೆಯನ್ನು ಆಜಾದ್ ನಗರದ ಆರನೇ ಕ್ರಾಸಿನ ಡಾ ನಾಸೀರ್ ಅಹ್ಮದ್ ಎಂ ಎಂ ಅಲಿ ಸಾಹೇಬ್ ಅವರು ಪುಸಲಾಯಿಸಿದ್ದರು. ಮದುವೆ ಆಗುವುದಾಗಿ ನಂಬಿಸಿ ಆ ಮಹಿಳೆಯನ್ನು ಭಟ್ಕಳ, ಹೊನ್ನಾವರ, ಚಿಕ್ಕಮಗಳೂರು ಹಾಗೂ ಬೆಂಗಳೂರಿಗೆ ಕರೆದೊಯ್ದು ಸುತ್ತಾಡಿಸಿದ್ದರು. ತಿರುಗಾಟದ ನಂತರ ಅವರು ಆ ಮಹಿಳೆಯನ್ನು ಲಾಡ್ಜಿಗೆ ಕರೆದೊಯ್ದು ದೈಹಿಕವಾಗಿಯೂ ಬಳಸಿಕೊಂಡಿದ್ದರು.
10 ದಿನಗಳ ಕಾಲ ಬೇರೆ ಬೇರೆ ಮಹಿಳೆ ಜೊತೆ ಸುತ್ತಾಟ ನಡೆಸಿದ ಡಾ ನಾಸೀರ್ ಅಹ್ಮದ್ ಆ ಅವಧಿಯಲ್ಲಿ ಮದುವೆ ಆಗುವ ಭರವಸೆ ನೀಡಿದ್ದರು. ಆದರೆ, ನಂತರ ತಮ್ಮ ಮಾತಿನ ವರಸೆ ಬದಲಿಸಿದರು. ಬಲವಂತವಾಗಿ ಬಲಾತ್ಕಾರ ನಡೆಸಿದಲ್ಲದೇ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದರು. ಅದಾಗಿಯೂ ಆ ಮಹಿಳೆ ತಮಗಾದ ಮೋಸ, ವಂಚನೆ, ಅಪಹರಣ, ಅತ್ಯಾಚಾರ ಹಾಗೂ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.