ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ಭಟ್ಕಳದ ದಂಪತಿಗೆ ಆಂಬುಲೆನ್ಸ ಗುದ್ದಿದ್ದು, ಆ ದಂಪತಿ ಅಲ್ಲಿಯೇ ಸಾವನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಆಂಬುಲೆನ್ಸ ಪಲ್ಟಿಯಾಗಿದೆ.
ಶನಿವಾರ ರಾತ್ರಿ 11 ಗಂಟೆ ವೇಳೆಗೆ ಈ ಅವಘಡ ನಡೆದಿದೆ. ಶಾಂತಿನಗರ ಬಸ್ ನಿಲ್ದಾಣದ ಬಳಿ ಆಂಬುಲೆನ್ಸ ಚಾಲಕನ ನಿಯಂತ್ರಣ ತಪ್ಪಿದೆ. ಅಲ್ಲಿದ್ದ ಬೈಕುಗಳಿಗೆ ಆಂಬುಲೆನ್ಸ ಗುದ್ದಿ ಅದಾದ ನಂತರ ಪಲ್ಟಿಯಾಗಿದೆ. ಈ ವೇಳೆ ಸಿಗ್ನಲ್ ಬಳಿ ಇದ್ದ ಭಟ್ಕಳದ ದಂಪತಿ ಸಾವನಪ್ಪಿದ್ದಾರೆ.
ಭಟ್ಕಳದ ಬಂದರ್ ರೋಡಿನ ದಂಪತಿ ಅಪಘಾತದಲ್ಲಿ ಸಾವನಪ್ಪಿದವರಾಗಿದ್ದಾರೆ. ಈ ಅಪಘಾತದಲ್ಲಿ ಹಲವು ಬೈಕುಗಳಿಗೆ ಆಂಬುಲೆನ್ಸ ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಗುದ್ದಿ, ಅಲ್ಲಿ ತಿರುಗಿ ಬಿದ್ದಿದೆ.
ಅಪಘಾತದ ನಂತರ ಆಂಬುಲೆನ್ಸ ಚಾಲಕ ಅಶೋಕರ್ ಪರಾರಿಯಾಗಿದ್ದು, ಭಾನುವಾರ ಬೆಳಗ್ಗೆ ಪೊಲೀಸರು ಚಾಲಕನನ್ನು ಪತ್ತೆ ಮಾಡಿದ್ದಾರೆ. ಅಪಘಾತ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ. ಪೊಲೀಸರು ಕಾನೂನು ಪ್ರಕ್ರಿಯೆ ಮುಂದುವರೆಸಿದ್ದಾರೆ.