5 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಬಂಗಾರದ ಪದಕ ಗೆದ್ದಿದ್ದಾರೆ.
Advertisement. Scroll to continue reading.
ಯೋಗ ಫೆಡರೇಶನ್ ಆಫ್ ಇಂಡಿಯಾ ಸಾಗರದಲ್ಲಿ ನಡೆಸಿದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಬ್ರಾಯ ಭಟ್ಟ ಅವರು ಅಲ್ಲಿ ಬೆಳ್ಳಿ ಪದಕ ಗೆದ್ದರು. ಅದಾದ ನಂತರ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಯೋಗ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.
Advertisement. Scroll to continue reading.
ಯಲ್ಲಾಪುರ ತಾಲೂಕಿನ ಹುಟಕಮನೆ ಶಾಲೆಯಲ್ಲಿ ಸುಬ್ರಾಯ ಭಟ್ಟ ಅವರು ಶಿಕ್ಷಕರಾಗಿದ್ದಾರೆ. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಯೋಗ ವಿಸ್ತಾರಕರಾಗಿಯೂ ಕೆಲಸ ಮಾಡುತ್ತಿರುವ ಅವರು ತಮ್ಮ ಓಂಕಾರ್ ಯೋಗ ಕೇಂದ್ರದ ಮೂಲಕ ಯೋಗದ ಬಗ್ಗೆ ಮಾಹಿತಿ, ಕಾರ್ಯಾಗಾರ ಹಾಗೂ ಚಿಕಿತ್ಸೆ ನೀಡುವ ಕಾಯಕ ಮಾಡುತ್ತ ಬಂದಿದ್ದಾರೆ.
Advertisement. Scroll to continue reading.
ಓಂಕಾರ್ ಯೋಗ ಕೇಂದ್ರಕ್ಕೆ 6 ವರ್ಷ ತುಂಬಿದ ಹಿನ್ನಲೆ ಮಕ್ಕಳಿಗಾಗಿ ರಾಮಾಯಣ-ಮಹಾಭಾರತದ ಬಗ್ಗೆ ಪರೀಕ್ಷೆ ಆಯೋಜಿಸುವ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡಲು ನಿರ್ಧರಿಸಿದ್ದಾರೆ.