ದಾಂಡೇಲಿಯ ಕನ್ಯಾ ವಿದ್ಯಾಲಯದಲ್ಲಿನ ಕನ್ಯೆಯರಿಗೆ ಕಿರುಕುಳ ನೀಡಿ ಅಮಾನತು ಆಗಿದ್ದ ಪ್ರಾಚಾರ್ಯ ಹನುಮಂತ ಕುಂಬಾರ್ ಅವರು ನ್ಯಾಯಾಲಯಕ್ಕೆ ಹೋಗಿ ತಮ್ಮ ಅಮಾನತು ಆದೇಶಕ್ಕೆ ತಡೆ ತಂದಿದ್ದಾರೆ. ಆ ಆದೇಶ ಪ್ರತಿಯೊಂದಿಗೆ ಕಾಲೇಜು ಪ್ರವೇಶಿಸಿದ ಹನುಮಂತ ಕುಂಬಾರ್ ಅವರು ಅಲ್ಲಿನ ಆಡಳಿತ ಮಂಡಳಿಯವರಿಂದ ಪೆಟ್ಟು ತಿಂದಿದ್ದಾರೆ!
ದಾoಡೇಲಿಯ ಕನ್ಯಾ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಹನುಮಂತ ಕುಂಬಾರ್ ಅವರು ಆ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದರು. ವಿದ್ಯಾರ್ಥಿನಿಯರ ಮೈ ಮುಟ್ಟುವ ಮೂಲಕ ಕಾಲೇಜಿನ ಪ್ರಾಚಾರ್ಯ ಸ್ಥಾನಕ್ಕೆ ಅವರು ಧಕ್ಕೆ ತಂದಿದ್ದರು. ಪಾಠ ಮಾಡುವ ವೇಳೆ ಮಕ್ಕಳ ಮೈ ಮುಟ್ಟುವುದು, ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಅಶ್ಲೀಲ ಶಬ್ದಗಳ ಪ್ರಯೋಗ ಮಾಡುವ ಆರೋಪವನ್ನು ಅವರು ಎದುರಿಸಿದ್ದರು. ತಮ್ಮ ಮಾತು ಒಪ್ಪಿಕೊಳ್ಳದ ವಿದ್ಯಾರ್ಥಿನಿಯರಿಗೆ ನಿಂದಿಸುವ ಅವರ ಸ್ವಭಾವದ ಖಂಡಿಸಿ ಅಲ್ಲಿನ ವಿದ್ಯಾರ್ಥಿನಿಯರೇ ಸಿಡಿದೆದ್ದಿದ್ದರು. ಆ ಅಯೋಗ್ಯ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಅಸಮಧಾನವ್ಯಕ್ತಪಡಿಸಿದ್ದರು.
ಕಾಲೇಜು ಆವರಣದಲ್ಲಿ ಮಕ್ಕಳು ಪ್ರತಿಭಟಿಸಿದ್ದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿತ್ತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರು ತಮಗಾದ ಕೆಟ್ಟ ಅನುಭವಗಳ ಬಗ್ಗೆ ವಿವರಿಸಿದಲ್ಲದೇ ಅದನ್ನು ಲಿಖಿತವಾಗಿಯೂ ನೀಡಿದ್ದರು. ಹನುಮಂತ ಕುಂಬಾರ್ ವಿರುದ್ಧ ದಾಂಡೇಲಿ ವೆಲ್ ಪೆರ್ ಸೊಸೈಟಿಯವರು ಪೊಲೀಸ್ ದೂರು ಸಹ ನೀಡಿದ್ದು, ಈ ಎಲ್ಲಾ ಹಿನ್ನಲೆ ಹನುಮಂತ ಕುಂಬಾರ್ ಅವರು ಸೇವೆಯಿಂದ ಅಮಾನತಾಗಿದ್ದರು. ಹನುಮಂತ ಕುಂಬಾರ ಅವರ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಈ ಎಲ್ಲಾ ಘಟನಾವಳಿಗಳ ಬೆನ್ನಲ್ಲೆ ಹನುಮಂತ ಕಂಬಾರ್ ಅವರು ಧಾರವಾಡದ ಉಚ್ಛ ನ್ಯಾಯಾಲಯದ ಮೊರೆ ಹೋದರು. ಅಮಾನತು ಆದೇಶದ ವಿರುದ್ಧ ತಡೆಯಾಜ್ಞೆಯನ್ನು ತಂದರು. ಮತ್ತೆ ಪ್ರಾಚಾರ್ಯ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಅವರು ಕಾಲೇಜು ಪ್ರವೇಶಿಸಿದ್ದು, ಅದನ್ನು ಆಡಳಿತ ಮಂಡಳಿಯುವರು ಸಹಿಸಲಿಲ್ಲ.
ಆ ದಿನದ ಈ ಸುದ್ದಿ ನೀವು ಓದಿಲ್ಲವೇ? ಇದನ್ನು ಓದಿ: ಆತ ಉಪನ್ಯಾಸಕ ಅಲ್ಲ.. ಕಾಮುಕ!
ಜನವರಿ 12ರಂದು ಕಾಲೇಜು ಪ್ರವೇಶಿಸಿದ ಹನುಮಂತ ಕುಂಬಾರ್ ಅವರನ್ನು ಕಾಲೇಜು ಕಾರ್ಯದರ್ಶಿ ರಾಜೇಂದ್ರ ಕೋಡ್ಕಣಿ ಅವರು ತಡೆದರು. ಕಾಲೇಜು ಖಜಾಂಚಿ ಅರುಣಾಧಿ ರಾವ್ ಅವರು ಹನುಮಂತ ಕುಂಬಾರ್ ಮತ್ತೆ ಕಾಲೇಜಿಗೆ ಬಂದಿದನ್ನು ವಿರೋಧಿಸಿದರು. ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಹನುಮಂತ ಕುಂಬಾರ್ ಅವರನ್ನು ಮತ್ತೆ ಪಾಠ ಮಾಡಲು ಬಿಡಲಿಲ್ಲ. ಆಗ, ಅನಗತ್ಯ ರಂಪಾಟ ನಡೆಸಿದ ಹನುಮಂತ ಕುಂಬಾರ್ ಅವರನ್ನು ಕಾಲೇಜು ಕೊಠಡಿಯೊಳಗೆ ಕೂಡಿ ಹಾಕಿದರು. ಇನ್ನಷ್ಟು ಉಗ್ರವಾದ ಹನುಮಂತ ಕುಂಬಾರ ಅವರನ್ನು ಸಮಾಧಾನ ಮಾಡಲು ರಾಜೇಂದ್ರ ಕೋಡ್ಕಣಿ ಹಾಗೂ ಅರುಣಾಧಿ ರಾವ್ ಸೇರಿ ಕೆನ್ನೆಗೆ ಬಾರಿಸಿದರು. ಗಂಡನ ರಕ್ಷಣೆಗೆ ಹೋದ ವಿಜಯಲಕ್ಷಿ ಕುಂಬಾರ್ ಅವರು ಈ ವೇಳೆ ಪೆಟ್ಟು ತಿಂದರು.