32 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕುಮಟಾದ ಪಾಂಡುರoಗ ಹುಲಸ್ವಾರ ಅವರು ನಿವೃತ್ತರಾಗಿದ್ದಾರೆ.
ಮುಂಡಗೋಡ, ಹೊಂಡದಕ್ಕಲ, ಹೊನ್ನಳ್ಳಿ, ಗರಡಿ ಬೈಲ್, ಕತಗಾಲದಲ್ಲಿಯೂ ಪಾಂಡುರoಗ ಹುಲಸ್ವಾರ್ ಅವರು ಸೇವೆ ಸಲ್ಲಿಸಿದ್ದಾರೆ. ಅದಾದ ನಂತರ ತಾವು ಕಲಿತ ಕುಮಟಾದ ಚಿತ್ರಗಿ ಶಾಲೆಯಲ್ಲಿ ಶಿಕ್ಷಕರಾಗಿ ಆಗಮಿಸಿದ ಅವರು ಅಲ್ಲಿಯೇ ನಿವೃತ್ತರಾಗಿದ್ದಾರೆ. ಪಾಂಡುರoಗ ಹುಲಸ್ವಾರ ಅವರ ಪತ್ನಿ ರಾಜೇಶ್ವರಿ ಅವರು ಸಹ ಕೂಜಳ್ಳಿ ಶಾಲೆಯಲ್ಲಿದ್ದು, ಮಕ್ಕಳ ಮನಸ್ಸಿನಲ್ಲಿ ಜ್ಞಾನದ ಪ್ರಸಾರ ಮಾಡುತ್ತಿದ್ದಾರೆ. ಈ ಎಲ್ಲಾ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪಾಂಡುರoಗ ಹುಲಸ್ವಾರ ಅವರ ಸೇವೆ ಸ್ಮರಿಸಿದ್ದಾರೆ. ಅವರ ಮನೆಗೆ ಹೊಗಿ ಶಿಕ್ಷಕರನ್ನು ಗೌರವಿಸಿದ್ದಾರೆ.
`ಜನರಿಗೆ ಅಗತ್ಯವಿರುವ ಕಾಗದ ಪತ್ರಗಳನ್ನು ತೆಗೆಸುವುದು ಹಾಗೂ ಅದನ್ನು ಕ್ರಮಬದ್ಧವಾಗಿಸುವಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಹಾಗೂ ನಾಗೇಶ ಹುಲಸ್ವಾರ್ ಅವರ ಶ್ರಮ ಅಸಾಮಾನ್ಯ’ ಎಂದು ಸನ್ಮಾನ ಸ್ವೀಕರಿಸಿದ ಪಾಂಡುರoಗ ಹುಲಸ್ವಾರ್ ಅವರು ಹೇಳಿದರು. ಕೇಂದ್ರದ ಅಧ್ಯಕ್ಷ ಅಗ್ನೇಲ್ ರೋಡ್ರಿಗಸ್ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ ಹುಲಸ್ವಾರ, ವಿನಾಯಕ ಪಟಗಾರ, ಹಾಗೂ ಇಸ್ಮಾಯಿಲ್ ಶೇಖ್ ಇದ್ದರು.