ಜೊಯಿಡಾದ ರಾಮನಗರ-ಧಾರವಾಡ ಮಾರ್ಗದಲ್ಲಿ ಬುಲೇರೋ ಪಿಕಪ್ ಸ್ಕೂಟಿಗೆ ಗುದ್ದಿದೆ. ಪರಿಣಾಮ ಸ್ಕೂಟಿ ಹಿಂದೆ ಕೂತಿದ್ದ ಮಹಮದ್ ಇಜಾಜ್ ಅವರು ಸಾವನಪ್ಪಿದ್ದಾರೆ. ಅಪಘಾತದ ನಂತರ ಬುಲೆರೋ ಚಾಲಕ ಪರಾರಿಯಾಗಲು ಪ್ರಯತ್ನಿಸಿದ್ದು, ಬುಲೆರೋ ಟೈಯರ್ ಪಂಚರ್ ಆದ ಕಾರಣ ತಪ್ಪಿತಸ್ಥರು ಸಿಕ್ಕಿಬಿದ್ದಿದ್ದಾರೆ.
ರಾಮನಗರ – ಧಾರವಾಡ ಮಾರ್ಗದಲ್ಲಿ ಈ ಅಪಘಾತ ನಡೆದಿದೆ. ಕೊಡಗೈ ಕ್ರಾಸ್ ಸಮೀಪ ರಾಮನಗರದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಬೊಲೆರೋ ಗೋವಾ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟಿಯ ಸಹ ಸವಾರರಾಗಿದ್ದ ಗೋವಾದ ಮೊಹಮ್ಮದ್ ಇಜಾಜ್ (18) ಅವರು ಸ್ಥಳದಲ್ಲಿಯೇ ಸಾವನಲ್ಲಿದ್ದಾರೆ. ಸ್ಕೂಟಿ ಓಡಿಸುತ್ತಿದ್ದ ಗೋವಾದ ಅಬ್ದುಲ್ ಲತೀಫ್ (22) ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅವರನ್ನು 108 ಆಂಬುಲೆನ್ಸಿನ ಮೂಲಕ ಗೋವಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಪಘಾತದ ಬಳಿಕ ಬೊಲೆರೋ ಪಿಕಪ್ ಚಾಲಕ ಧಾರವಾಡದ ಕಡೆಗೆ ಪರಾರಿಯಾಗಲು ಯತ್ನಿಸಿದರು. ಕುಂಭಾರಡಾ ಸಮೀಪ ಬುಲೆರೋ ಟೈಯರ್ ಸ್ಪೋಟವಾಗಿ ಅವರು ಸಿಕ್ಕಿ ಬಿದ್ದರು. ಒಳ ದಾರಿಯಲ್ಲಿ ವಾಹನ ನಿಲ್ಲಿಸಿ ಟೈಯರ್ ಬದಲಿಸುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆಪಡೆದರು. ಸ್ಕೂಟಿ ಸವಾರರು ಉರುಸ್ ಕಾರ್ಯಕ್ರಮಕ್ಕಾಗಿ ಭಾನುವಾರ ಹುಲಗೂರಿಗೆ ಹೋಗಿದ್ದು, ಸೋಮವಾರ ಮರಳುವಾಗ ಅವಘಡ ನಡೆದಿದೆ. ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.