ಶಿರಸಿ ಜಾತ್ರೆ ಅಂಗವಾಗಿ ನಡೆಯುವ ಹೊರಬೀಡಿನ ಪಲ್ಲಕ್ಕಿ ಉತ್ಸವದ ವೇಳೆ ಪ್ರಮುಖ ಸಮುದಾಯವೊಂದನ್ನು ಕೆಡೆಗಣಿಸಿದ ಬಗ್ಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದೇ ವಿಷಯ ಇಂದಿನ ಚರ್ಚೆಗೆ ಕಾರಣವಾಗಿದೆ.
ಬೇದ-ಭಾವ ಮಾಡಿದ ಆರೋಪದ ವಿಷಯವಾಗಿ ಮಾರಿಕಾಂಬಾ ದೇಗುಲದಲ್ಲಿ ತುರ್ತು ಸಭೆ ನಡೆದಿದೆ. ಈ ಸಭೆಯಲ್ಲಿ `ಯಾವುದೇ ಬೇದ-ಭಾವ ನಡೆದಿಲ್ಲ’ ಎಂದು ದೇಗುಲ ಸಮಿತಿಯವರು ಹೇಳಿದ್ದು, ಆ ಬಗ್ಗೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. `ಜಾತ್ರೆ ಹೊರಬೀಡಿನ ಪಲ್ಲಕ್ಕಿ ಉತ್ಸವದ ವೇಳೆ ಚಲುವಾದಿ ಸಮಾಜದ ಪಡಲಿಗಳನ್ನು ಕಡೆಗಣಿಸಲಾಗುತ್ತಿದೆ’ ಎಂದು ಪತ್ರವೊಂದು ಸಲ್ಲಿಕೆಯಾಗಿತ್ತು. ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಆಡಳಿತ ಮಂಡಳಿಯವರು ಈ ವಿಷಯವಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದರು. `ಪಡಲಗಿ ಇಡುವ ವೇಳೆ ಬೇಧ-ಭಾವ ಮಾಡುತ್ತಿದ್ದಾರೆ. ಅಲ್ಲದೇ, ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಆರೋಪಿಸಿ ಸಹಾಯಕ ಆಯುಕ್ತರಿಗೆ, ತಹಸೀಲ್ದಾರರಿಗೆ, ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಆ ಎಲ್ಲಾ ಅಧಿಕಾರಿಗಳು ಸಭೆಗೆ ಆಗಮಿಸಿ ಸಮಸ್ಯೆ ಆಲಿಸಿದರು.
`ಪಡಲಗಿ ವಿಷಯದಲ್ಲಿ ತಾರತಮ್ಯ ಕಾಣುತ್ತಿರುವುದರಿಂದ ನಮ್ಮ ಸಮಾಜದವರು ನನ್ನ ನಮನಕ್ಕೆ ತಂದರು. ಆ ವಿಷಯದ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಇದನ್ನು ಸರಿಪಡಿಸುವಂತೆ ವಿನಂತಿಸಲಾಗಿದೆ. ಪಡಲಗಿಗಳನ್ನು ಕೆಳಗಿಟ್ಟು ಪೂಜೆ ಮಾಡುತ್ತಾರೆ. ಸಾಮೂಹಿಕವಾಗಿ ಪೂಜೆಗೆ ಅವಕಾಶ ನೀಡಬೇಕು’ ಎಂದು ಚಲುವಾದಿ ಸಮಾಜದ ಜಿಲ್ಲಾಧ್ಯಕ್ಷ ಮಾದೇವ ಚಲುವಾದಿ ಅವರು ಆಗ್ರಹಿಸಿದರು. `ಅನಾದಿಕಾಲದಿಂದಲೂ ದೇವಿ ಸೇವೆಯ ಮಾಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ತಾರತಮ್ಯ ಇದ್ದಿತ್ತು. ಅದು ಕಳೆದು ಎಷ್ಟೋ ದಶಕಗಳಾಗಿವೆ. ಜಾತಿ ಬೇಧ-ಭಾವ ಎಂದಿಗೂ ಕಂಡುಬAದಿಲ್ಲ. ಸುಮಾರು 35 ರಿಂದ 40 ಜಾತ್ರೆ ನೋಡಿದ್ದೇನೆ’ ಎಂದು ಅಲ್ಲಿದ್ದ ಶಾಂತವ್ವ ಅವರು ಹೇಳಿದರು.
`ಜಾತ್ರೆ ಹೋರಬೀಡಿನ ವೇಳೆ ಸುಮಾರು 53ರಿಂದ 58 ಪಡಲಗಿಗಳು ಆಗುತ್ತದೆ. ಸ್ಥಳವಕಾಶ ಕಡಿಮೆ ಇದೆ. ಎಲ್ಲರೂ ಸಹಕಾರ ನೀಡಬೇಕು’ ಎಂದು ವಿಜಯ ನಾಡಿಗ್ ಅವರು ಮನವಿ ಮಾಡಿದರು. `ದೇವಸ್ಥಾನದ ಧಾರ್ಮಿ ಕಾರ್ಯಕ್ರಮಗಳು ನೆರವೇರಿಸುವ ವೇಳೆ ಬೇಧ-ಭಾವ ಮಾಡುವ ಪ್ರಶ್ನೆಯೇ ಇಲ್ಲ. ವಿಧಿ-ವಿಧಾನಗಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ದೇಗುಲ ಮುಖ್ಯಸ್ಥರು ಸ್ಪಷ್ಠಪಡಿಸಿದರು. ಈ ಸಭೆಯಲ್ಲಿ ಬಾಬುದಾರರು, ಸಹಾಯಕರು ದೇವಸ್ಥಾನದ ವಿಧಿ-ವಿಧಾನಗಳನ್ನು ನೇರವೇರಿಸುವ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲರ ವಿಷಯಗಳನ್ನು ಪರಿಗಣಿಸಿ, ಕಟ್ಟೆಯ ಮೇಲೆ ದೇವಸ್ಥಾನದ 4 ಪಡಲಗಿಗಳನ್ನು ಮಾತ್ರ ಇಡಲಾಗುತ್ತದೆ. ಉಳಿದ ಎಲ್ಲ ಪಡಲಿಗಿಯನ್ನು ಎದುರು ಇಡಲಾಗುತ್ತದೆ. ಈ ಕುರಿತು ಜಿಲ್ಲಾ ನ್ಯಾಯಾಧೀಶರಿಗೆ ಪತ್ರದ ಮೂಲಕ ಮಾಹಿತಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್ ಜಿ.ನಾಯ್ಕ ಅವರು ಮಾತನಾಡಿ `ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಲಾಗುತ್ತದೆ. ಅವರಿಂದ ಬಂದ ಉತ್ತರ ತಿಳಿಸಲಾಗುತ್ತದೆ’ ಎಂದರು. ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಎಸ್.ಪಿ.ಶೆಟ್ಟಿ, ವತ್ಸಲಾ ಹೆಗಡೆ, ಸಹಾಯಕ ಆಯುಕ್ತ ಚಂದ್ರಶೇಖರ ಜಿ ಆರ್, ತಹಸೀಲ್ದಾರ ಪಟ್ಟರಾಜ ಗೌಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಅಹವಾಲು ಆಲಿಸಿದರು.