ಅಘನಾಶಿನಿ ನದಿ ಜೋಡಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ 25 ಸಾವಿರಕ್ಕೂ ಅಧಿಕ ಜನ ಸಿದ್ದಾಪುರದಿಂದ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ.
ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರಿಗೆ ಈ ಪತ್ರ ರವಾನೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ನಾಶ ಮಾಡಿ ಹೊಸ ಯೋಜನೆ ತರುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಾಲೂಕಾ ದಂಡಾಧಿಕಾರಿ ಎಮ್ ಆರ್ ಕುಲಕರ್ಣಿ ಅವರ ಮೂಲಕ ಪತ್ರ ರವಾನೆಯಾಗಿದ್ದು, ಪರಿಸರ ಉಳಿಸುವ ಅನಿವಾರ್ಯತೆಯ ಬಗ್ಗೆ ವಿವರಿಸಲಾಗಿದೆ.
ನ್ಯಾಯವಾದಿ ರವೀಂದ್ರ ನಾಯ್ಕ ಮುಂದಾಳತ್ವದಲ್ಲಿ ಈ ಜನಾಂದೋಲನ ನಡೆದಿದೆ. `ಪಶ್ಚಿಮಘಟ್ಟಗಳು ಕೇವಲ ಪ್ರಾದೇಶಿಕ ಪರಿಸರ ಸಂಪತ್ತು ಅಲ್ಲ. ಹವಮಾನ ಭದ್ರತೆ ವ್ಯವಸ್ಥೆಯ ಅವಿಭಾಜ್ಯ ಅಂಗ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. `ಅರಣ್ಯ ನಾಶ, ಭೂ ಕುಸಿತ ಅಸ್ಥಿರತೆ, ಜೀವ ವೈವಿದ್ಯ ಹಾನಿ, ಹವಮಾನದ ವ್ಯತಿರಿಕ್ತತೆ ಮೇಲೆ ಪರಿಣಾಮ ಬೀರುವುದೆಂಬುದು ಅಧ್ಯಯನದಿಂದ ತಿಳಿದು ಬಂದಿರುವುದರಿAದ ನಿಯೋಜಿತ ಯೋಜನೆಯು ಅವೈಜ್ಞಾನಿಕ’ ಎಂದು ವಿವರವಾಗಿ ಬರೆಯಲಾಗಿದೆ.
ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ನಾಗಪತಿ ಗೌಡ ಹುಕ್ಕಳ್ಳಿ, ಜಿ ಎನ್ ಹೆಗಡೆ, ಮಂಜು ಮರಾಠಿ ಕುಮಟಾ, ಸುರೇಶ್ ಮೇಸ್ತಾ, ಶ್ಯಾಮಲ ಗೌಡ, ರಾಜೇಶ್ ವಿ ಭಟ್ ಮಕ್ಕಿಗದ್ದೆ, ಮಂಜುನಾಥ, ಮಹೇಶ ಭಟ್, ಎನ್ ವಿ ಹೆಗಡೆ ಮುತ್ತಿಗೆ, ರಾಜು ನಾಯ್ಕ ಕಿರೇಕೋಡ, ರಾಮಕೃಷ್ಣ ನಾಯ್ಕ ಶಿರೂರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಬ್ರಾಹೀಂ ಗೌಡಳ್ಳಿ, ಮಹೇಶ್ ನಾಯ್ಕ ಕಾನಕ್ಕಿ, ಹರಿಹರ್ ನಾಯ್ಕ ಓಂಕಾರ, ಸತೀಶ್ ನಾಯ್ಕ, ಮಹೇಂದ್ರ ಕತಗಾಲ, ಸೀತಾರಾಮ ಗೌಡ ಹುಕ್ಕಳ್ಳಿ, ಸಾರಂಬಿ, ಕೆ ಟಿ ನಾಯ್ಕ, ಪರಮ ಗೌಡ, ದ್ಯಾವ ಗೌಡ, ಯಂಕ ಗೌಡ್ರು, ಕೆ ಟಿ ಗೌಡ ಮಾದ್ಲಮನೆ, ಗೋವಿಂದ ಗೌಡ ಕಿಲವಳ್ಳಿ, ಮೋಹನ್ ನಾಯ್ಕ ಕಾನಳ್ಲಿ, ರಾಮಚಂದ್ರ ನಾಯ್ಕ, ಜಿ ಎನ್ ಹೆಗಡೆ ಗುಂಜಗೋಡ, ಸುಬಾಷ್ ನಾಯ್ಕ ಕ್ಯಾದಗಿ ಸಭೆಯ ಸಂಘಟನೆ ನೋಡಿಕೊಂಡಿದ್ದಾರೆ.