ಮೊಬೈಲ್ ಕ್ಯಾಂಟೀನ್ ಮಾಡಲು ಬಯಸುವ ವೀರಶೈವ-ಲಿಂಗಾಯತ ಹಾಗೂ ಅದರ ಉಪಜಾತಿಯವರಿಗೆ ಸರ್ಕಾರ ವಿಶೇಷ ಸಹಾಯಧನ ನೀಡಲು ನಿರ್ಧರಿಸಿದೆ. ಮರಾಠಾ ಸಮುದಾಯದವರು ಸಹ ಈ ಯೋಜನೆ ಅಡಿ ಸಬ್ಸಿಡಿಪಡೆಯಲು ಅರ್ಹರಾಗಿದ್ದಾರೆ.
ಕರ್ನಾಟಕದಲ್ಲಿ `ಆಹಾರ ವಾಹಿನಿ ಯೋಜನೆ’ ಅಸ್ತಿತ್ವಕ್ಕೆ ಬಂದಿದೆ. ಸಂಚಾರಿ ಆಹಾರ ಮಳಿಗೆ ಸ್ಥಾಪಿಸಲು ಉದ್ದೇಶಿಸುವವರಿಗೆ ಸರ್ಕಾರ ಈ ಯೋಜನೆ ಅಡಿ 3 ಲಕ್ಷ ರೂವರೆಗೆ ಸಬ್ಸಿಡಿ ನೀಡುತ್ತಿದೆ. ವಿಶೇಷವಾಗಿ ಮಹಿಳೆಯರು, ಯುವಕರಿಗೆ ಅನುಕೂಲವಾಗುವ ಹಾಗೇ ಕಡಿಮೆ ಬಂಡವಾಳದಲ್ಲಿ ಉದ್ದಿಮೆ ಮಾಡಲು ಬಯಸುವವರಿಗೆ ಸರ್ಕಾರ ನೆರವು ನೀಡುತ್ತಿದೆ.
ರಸ್ತೆ ಬದಿಗಳಲ್ಲಿ ಕ್ಯಾಂಟೀನ್ ನಡೆಸುವವರಿಗೆ ಸರ್ಕಾರ ತನ್ನ ಯೋಜನೆಯ ಮೂಲಕ ಪ್ರತ್ಸಾಹಿಸುತ್ತಿದೆ. ಆಹಾರ ವಿತರಣೆ ಉದ್ದಿಮೆ ಮಾಡಲು ಬಯಸುವವರಿಗೆ 4 ಚಕ್ರಗಳ ಮೊಬೈಲ್ ವಾಹನಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ರಾಜ್ಯದ ಎಲ್ಲಡೆ ಈ ಯೋಜನೆ ಜಾರಿಯಲ್ಲಿದ್ದು, ವೀರಶೈವ-ಲಿಂಗಾಯತ ಹಾಗೂ ಅದರ ಉಪ ಜಾತಿಗಳು ಮತ್ತು ಮರಾಠಾ ಸಮುದಾಯದವರಿಗೆ ಪ್ರಾಮುಖ್ಯತೆ ನೀಡಲಾಗಿದೆ.
ಇದರೊಂದಿಗೆ ಮನೆ ಮನೆಗೆ ರೇಶನ್ ವಿತರಣೆ ಮಾಡುವುದಕ್ಕೆ ಸಹ ಈ ಮೊಬೈಲ್ ಕ್ಯಾಂಟೀನ್ ಬಳಕೆ ಮಾಡುವ ಅವಕಾಶವಿದೆ. ಆಹಾರ ಕಿಯೋಸಕ್ ಯೋಜನೆ ಅಡಿ ಅದಕ್ಕೆ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಗ್ರಾಮ ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅಗತ್ಯ ದಾಖಲಾತಿ ಒದಗಿಸುವುದು ಕಡ್ಡಾಯ.
ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ, ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹಳಿಯಾಳ, ಯಲ್ಲಾಪುರ, ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಹಳಿಯಾಳ, ಯಲ್ಲಾಪುರ, ಕಾರವಾರ, ಭಟ್ಕಳ, ಶಿರಸಿ, ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ವೀರಶೈವ-ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮದಿಂದ ಹಳಿಯಾಳ, ಯಲ್ಲಾಪುರ, ಕಾರವಾರ, ಭಟ್ಕಳ, ಶಿರಸಿ, ಕುಮಟಾದಲ್ಲಿ ಯೋಜನೆಯ ಸಹಾಯಧನಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಕೆಗೆ ಮಾರ್ಚ 4 ಕೊನೆ ದಿನ ಎಂದು ಗ್ರಾಮ ಒನ್ ಪ್ರಾಜೆಕ್ಟ್ ಮ್ಯಾನೇಜರ್ ಪೂಜಾ ನಾಯ್ಕ ಅವರು ಮಾಹಿತಿ ನೀಡಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ: 9480362267