ಮೂರು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಗ್ರಾಮದೇವಿ ದೇವಾಲಯದಿಂದ ಹೊರಟ ಕಾಳಮ್ಮ ಹಾಗೂ ದುರ್ಗಮ್ಮ ದೇವಿಯರು ದೇವಿ ಮೈದಾನದ ಗದ್ದುಗೆ ಏರಿದ್ದಾರೆ.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವಿಯರಿಬ್ಬರ ಮೆರವಣಿಗೆ ನಡೆದಿದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದಿದ್ದು, ಭಕ್ತಿ-ಭಾವದಲ್ಲಿ ಜನ ಮಿಂದೆದ್ದಿದ್ದಾರೆ. ಜಾಗಡೆ ವಾದನ, ಚಂಡೆ ವಾದ್ಯ, ಛದ್ಮವೇಶ, ಕುದಿರೆ ಕುಣಿತದ ಜೊತೆ ಎಲ್ಲಡೆ ಕಾಣಿಸಿದ ತೋರಣ ಜಾತ್ರೆಯ ಮೆರಗು ಹೆಚ್ಚಿಸಿದೆ. ಚಿಕ್ಕ ಮಕ್ಕಳಿಂದಹಿಡಿದು ವಯೋವೃದ್ಧರವರೆಗೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ದೇವಿಯರ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿಕೊAಡಿದ್ದಾರೆ.
ಯಲ್ಲಾಪುರ ಪಟ್ಟಣದ ಗ್ರಾಮದೇವಿ ಜಾತ್ರಾ ಉತ್ಸವ ಅಧಿಕೃತವಾಗಿ ಶುರುವಾಗಿದೆ. ಕೆೆಂಪು ಬಣ್ಣದಿಂದ ಶೋಭಿತವಾದ ದುರ್ಗಮ್ಮ ದೇವಿ ಹಾಗೂ ಹಸಿರು ಬಣ್ಣದಿಂದ ಶೋಭಿತವಾದ ಕಾಳಮ್ಮ ದೇವಿಯರು ಭವ್ಯ ಶೋಭಾಯಾತ್ರೆಯ ಮೂಲಕ ಜಾತ್ರಾ ಗದ್ದುಗೆಯಲ್ಲಿ ಬುಧವಾರ ಸಂಜೆ ಆಸೀನರಾಗಿದ್ದಾರೆ. ಅಕ್ಕ ದುಗ9ಮ್ಮ ಗ್ರಾಮದೇವಿ ದೇವಸ್ಥಾನದಿಂದ ಮೊದಲು ಹೊರಬಂದು ಬಲಭಾಗದಲ್ಲಿ ನಿಂತಾಗ ಜನ ಕೈ ಮುಗಿದರು. ನಂತರ ತಂಗಿ ಕಾಳಮ್ಮ ಹೊರಬಂದು ಎಡಭಾಗದಲ್ಲಿ ನಿಂತಿದ್ದು ಆ ವೇಳೆ ಭಕ್ತರು ಎರಡು ದೇವಿಯರ ಮುಂದೆ ಮನದಾಳದ ಪ್ರಾರ್ಥನೆ ಸಲ್ಲಿಸಿದರು. ಶೋಭಾಯಾತ್ರೆಯ ಆರಂಭದಲ್ಲಿ ದುರ್ಗಮ್ಮ ದೇವಿ ಮುಂದೆ ಸಾಗಿದ್ದು, ಕಾಳಮ್ಮ ದೇವಿ ಹಿಂಬಾಲಿಸುತ್ತಿರುವAತೆ ಕಾಣಿಸಿತು.
ಎರಡೂ ದೇವಿಯರು ಅಲ್ಲಲ್ಲಿ ಹಿಂದೆ ಮುಂದೆ ಸಾಗಿತ್ತ ಬಸವೇಶ್ವರ ವೃತ್ತದವರೆಗೂ ಬಂದು ನಂತರ ಜಾತ್ರಾ ಗದ್ದುಗೆಯತ್ತ ನಡೆದರು. ಯಾವುದೇ ವಿಶೇಷ ಎಳೆದಾಟ, ಹೆಚ್ಚಿನ ಜಗ್ಗಾಟವಿಲ್ಲದೆ ದೇವಿಯರು ಸರಳವಾಗಿ ಜಾತ್ರಾ ಗದ್ದುಗೆಗೆ ಬಂದು ತಲುಪಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ವಾದ್ಯತಂಡಗಳು, ವೇಷಭೂಷಣದ ಗೊಂಬೆಗಳು ಶೋಭಾಯಾತ್ರೆಯುದ್ದಕ್ಕೂ ಸಾಗಿದವು.