ಯಲ್ಲಾಪುರ ಜಾತ್ರೆಗೆ ಬರುವ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ ಮೂರನೇ ದಿನವೂ ಮುಂದುವರೆದಿದೆ.
ಯಲ್ಲಾಪುರ ದೇವಿ ಗದ್ದುಗೆಯ ಬಲಭಾಗದಲ್ಲಿ ಲಡ್ಡು ವಿತರಣೆ ನಡೆದಿದೆ. ಲಾರಿ ಮಾಲಕ ಸಂಘದವರು ಲಡ್ಡು ಪ್ರಸಾದ ವಿತರಣೆಯ ಜವಾಬ್ದಾರಿವಹಿಸಿಕೊಂಡಿದ್ದು, ಈವರೆಗೆ 20 ಸಾವಿರಕ್ಕೂ ಅಧಿಕ ಭಕ್ತರಿಗೆ ಅವರು ಲಡ್ಡು ಹಂಚಿದ್ದಾರೆ.
ಲಡ್ಡು ವಿತರಣಾ ಮಳಿಗೆಗೆ ಶನಿವಾರ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ ಅವರು ಭೇಟಿ ನೀಡಿದರು. ಅವರು ಪ್ರಸಾದ ಸ್ವೀಕರಿಸಿದ್ದು, ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಲಡ್ಡು ಪ್ರಸಾದ ವಿತರಣೆ ಪಕ್ಕದಲ್ಲಿ ಡಿ ಎನ್ ಗಾಂವ್ಕರ್ ಅವರು ನಿಂತಿದ್ದು, ಅವರು ಭಕ್ತರಿಗೆ ಪಾನಕ ಸೇವೆ ಒದಗಿಸುತ್ತಿದ್ದರು.
ಲಾರಿ ಮಾಲಕ ಸಂಘದ ಅಧ್ಯಕ್ಷ ಸುಜಯ ಮರಾಠಿ, ಗೌರವ ಅಧ್ಯಕ್ಷ ಮಹೇಶ್ ನಾಯ್ಕ, ಟಿಪ್ಪರ್ ಸಂಘದ ಅಧ್ಯಕ್ಷ ನವೀನ್ ನಾಯ್ಕ, ಪ್ರಮುಖರಾದ ಎಂ ಡಿ ಮುಲ್ಲಾ, ರೂಪೇಶ ನಾಯ್ಕ, ನಾಗೇಂದ್ರ ಭಟ್ಟ, ರೂಪೇಶ ನಾಯ್ಕ, ಮುರಳಿ ರಾವಲ್, ಸುರೇಶ ಮರಾಠಿ ಇನ್ನಿತರರು ಭಕ್ತಿಯಿಂದ ಪ್ರಸಾದ ವಿತರಣಾ ಕಾರ್ಯದಲ್ಲಿರುವುದು ಕಾಣಿಸಿತು.
ಉದ್ಯಮಿ ಬಾಲು ನಾಯ್ಕ ಅವರು ದೇವಿ ಗೆದ್ದುಗೆಯಲ್ಲಿದ್ದು, ಲಡ್ಡು ಪ್ರಸಾದ ವಿತರಣೆ ಹಾಗೂ ಪಾನಕ ವಿತರಣೆ ಮಾಡುತ್ತಿರುವವರ ಕಾರ್ಯವನ್ನು ಶ್ಲಾಘಿಸಿದರು.