ಕಾರವಾರ-ಅಂಕೋಲಾ ಭಾಗದ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ನಿತ್ಯವೂ ಒಂದೊoದು ಬಸ್ಸು ತಾಂತ್ರಿಕ ದೋಷದ ಕಾರಣದಿಂದ ರಸ್ತೆ ಮದ್ಯೆ ನಿಲ್ಲುತ್ತಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಬಸ್ಸುಗಳನ್ನು ಬಿಡದೇ ಗುಜುರಿ ಬಸ್ಸುಗಳ ಸೇವೆ ಮುಂದುವರೆದಿದೆ. ಅದರ ಪರಿಣಾಮ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿನ ಡಿಪೋಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೆಲ ಅಧಿಕಾರಿಗಳು ಬೀಡು ಬಿಟ್ಟಿದ್ದು, ಅವರ ಬೇಜವಬ್ದಾರಿ ವರ್ತನೆ ಜನ ಸಾಮಾನ್ಯರ ಸಮಸ್ಯೆಗೆ ಕಾರಣವಾಗಿದೆ. ಬಸ್ಗಳ ನಿರ್ವಹಣೆಗೆ ಬರುವ ಅನುದಾನ ಸರಿಯಾಗಿ ಬಳಸಿಕೊಳ್ಳದಿರುವ ಆರೋಪವ್ಯಕ್ತವಾಗಿದೆ.
ಸರ್ಕಾರಿ ಬಸ್ಸುಗಳ ಸರಿಯಾದ ಮೇಲ್ವಿಚಾರಣೆ ಮಾಡದೇ, ಗುಜರಿ ಸೇರಬೇಕಾದ ಬಸ್ಗಳಿಗೆ ಕಣ್ಣು ಮುಚ್ಚಿ `ಪಾಸಿಂಗ್’ ನೀಡುತ್ತಿರುವ ಆರ್ಟಿಓ ವಿರುದ್ಧವೂ ಜನ ಅಸಮಧಾನವ್ಯಕ್ತಪಡಿಸಿದ್ದಾರೆ. ಈ ದಿನ ಕಾರವಾರದಿಂದ ಸಿದ್ದರಕ್ಕೆ ತೆರಳುತ್ತಿದ್ದ ಬಸ್ ಕಿನ್ನರ ಬೋರಿಬಾಗದಲ್ಲಿ ಎಕ್ಸಲ್ ತುಂಡಾಗಿದ್ದರಿAದ ಅಲ್ಲಿಯೇ ನಿಂತಿದೆ. ಇದರಿಂದಾಗಿ ಇಡೀ ರಸ್ತೆ ಬಂದ್ ಆಗಿದ್ದು, ನೂರಾರು ವಾಹನ ಸವಾರರು ಹಾಗೂ ಶಾಲಾ ಮಕ್ಕಳು ಬಿಸಿಲಿನಲ್ಲಿ ನಿಂತು ಪರದಾಡಿದ್ದಾರೆ.
ಇನ್ನೂ ಬಸ್ ನಿಲ್ದಾಣದಲ್ಲಿ ಬಸ್ಗಳು ನಿಂತಿದ್ದರೂ ಇಂಜಿನ್ ಮಾತ್ರ ಅಬ್ಬರಿಸುತ್ತಿರುತ್ತವೆ. ಬ್ಯಾಟರಿಗಳ ಸ್ಥಿತಿ ಎಷ್ಟು ದಯನೀಯವಾಗಿದೆ ಎಂದರೆ ಒಮ್ಮೆ ಇಂಜಿನ್ ಆಫ್ ಮಾಡಿದರೆ ಮತ್ತೆ ಚಾಲು ಮಾಡಲು ಪ್ರಯಾಣಿಕರೇ ಬಂದು ತಳ್ಳಬೇಕು ಎನ್ನುವ ಹಾಗಿದೆ. ಬೆಳಿಗ್ಗೆ ನಾಲ್ಕು ಬಸ್ಗಳು ಎರಡು ಗಂಟೆಗಳ ಕಾಲ ಇಂಜಿನ್ ಚಾಲನೆಯಲ್ಲಿರಿಸಿರುವುದನ್ನು ಜನ ವಿಡಿಯೋಸಹಿತ ಮಾಧ್ಯಮಕ್ಕೆ ರವಾನಿಸಿದ್ದಾರೆ. ಇದರಿಂದ ಇಂಧನ ವ್ಯರ್ಥವಾಗುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಇದು `ನಿತ್ಯದ ಕಾಯಕ’ ಎಂಬAತಾಗಿದೆ.
ಹ್ಯಾoಡ್ ಬ್ರೇಕ್ ಇಲ್ಲ. ಕಲ್ಲೇ ಆಸರೆ: ಈ ಭಾಗದ ಬಹುತೇಕ ಬಸ್ಗಳಲ್ಲಿ ಹ್ಯಾಂಡ್ ಬ್ರೇಕ್ ಕೆಲಸ ಮಾಡುತ್ತಿಲ್ಲ. ಚಾಲಕರು ಬಸ್ ನಿಲ್ಲಿಸಿದಾಗ ಗಾಲಿಗೆ ಕಲ್ಲುಗಳನ್ನು ಆಸರೆಯಾಗಿಡುತ್ತಿದ್ದಾರೆ. ಕಳೆದ ವಾರವಷ್ಟೇ ನಗೆಕೊವೆ ಘಟ್ಟದಲ್ಲಿ ಬ್ರೇಕ್ ಮತ್ತು ಕ್ಲಚ್ ಫೇಲ್ ಆಗಿ ಬಸ್ ಹಿಂದಕ್ಕೆ ಚಲಿಸಿ ಭೀತಿ ಸೃಷ್ಟಿಸಿತ್ತು. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿತು. ಆದರೆ, ಸಾರಿಗೆ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.