ಅoಕೋಲಾ ಬೇಲಿಕೇರಿಯ ಅಮರನಾಥ ಭಾನಾವಳಿಕರ್ ಹಾಗೂ ಭಾವಿಕೇರಿಯ ಧನಂಜಯ ನಾಯ್ಕ ಅವರ ನಡುವೆ ಭೂಮಿ ಮಾರಾಟದ ವ್ಯವಹಾರ ನಡೆದಿದ್ದು, ಈ ವ್ಯವಹಾರದ ಮಧ್ಯವರ್ತಿ ಕೇಣಿ ಕಸಬಾದ ರಾಘು ನಾಯ್ಕ ಅವರು ಭದ್ರತೆಗೆ ನೀಡಿದ ಚೆಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಅoಕೋಲಾದದ ಬೇಲಿಕೇರಿಯಲ್ಲಿ ಅಮರನಾಥ ಗಣಪತಿ ಭಾನಾವಳಿಕರ್ ಅವರು ವಾಸವಾಗಿದ್ದಾರೆ. ಮೀನುಗಾರಿಕೆ ನಡೆಸಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಭಾವಿಕೇರಿಯ ಧನಂಜಯ ನಾಯ್ಕ ಅವರಿಂದ ಅಮರತನಾಥ ಭಾನಾವಳಿಕರ್ ಅವರು ಮೊದಲು 5 ಗುಂಟೆ ಭೂಮಿ ಖರೀದಿಸಿದ್ದರು. ಅದಾದ ನಂತರ 2018ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 8 ಗುಂಟೆ ಭೂಮಿ ಖರೀದಿ ಮಾತುಕಥೆ ಮಾಡಿದ್ದರು. ಆ ಭೂಮಿ ಖರೀದಿಗಾಗಿ ಅವರು ಯುನಿಯನ್ ಬ್ಯಾಂಕಿಗೆ ಸಾಲ ಕೇಳಿದ್ದು, ಸಾಲವೂ ಮಂಜೂರಿಯಾಗಿತ್ತು. ಆದರೆ, ಧನಂಜಯ ನಾಯ್ಕ ಅವರಿಂದ ಸಕಾಲದಲ್ಲಿ ಇ-ಸ್ವತ್ತು ದಾಖಲೆ ಸಿಗದ ಕಾರಣ ಸಾಲ ಸಿಕ್ಕಿರಲಿಲ್ಲ.
ಅದಾಗಿಯೂ 2018ರ ಅಗಸ್ಟ 1ರಂದು ಅಮರನಾಥ ಭಾನಾವಳಿಕರ್ ಅವರು ಆ ಭೂಮಿ ಖರೀದಿ ಮಾಡಿದ್ದರು. ಆ ವೇಳೆ ಪೂರ್ಣ ಪ್ರಮಾಣದ ಹಣವಿಲ್ಲದ ಕಾರಣ ನಾಲ್ಕು ಖಾಲಿ ಚೆಕ್ಕುಗಳಿಗೆ ಸಹಿ ಹಾಕಿ ಧನಂಜಯ ನಾಯ್ಕ ಹಾಗೂ ಶಾಂಬಾ ನಾಯ್ಕ ಎಂಬಾತರಿಗೆ ಕೊಟ್ಟಿದ್ದರು. ಹಣ ಪೂರ್ತಿಯಾಗಿ ಮರಳಿಸಿದ ನಂತರ ಆ ಚೆಕ್ಕುಗಳನ್ನು ಹಿಂತಿರುಗಿಸುವAತೆ ಕೋರಿದ್ದರು. ಈ ಹಿಂದೆಯೂ ಧನಂಜಯ ನಾಯ್ಕ ಅವರಿಂದ 5 ಗುಂಟೆ ಭೂಮಿ ಖರೀದಿಸಿದ ನಂಬಿಕೆ ಆಧಾರದಲ್ಲಿ ಆ ಚೆಕ್ಕುಗಳನ್ನು ವಿತರಿಸಿದ್ದರು. ಆದರೆ, ಸಕಾಲದಲ್ಲಿ ದಾಖಲಾತಿ ಸಿಗದ ಕಾರಣ ಭೂಮಿಯ ಹಕ್ಕು ವರ್ಗಾವಣೆ ಆಗಿರಲಿಲ್ಲ.
ಈ ಎಲ್ಲಾ ವಿದ್ಯಮಾನ ನಡೆದು ಏಳು ವರ್ಷಗಳ ನಂತರ ವಕೀಲ ಜಿ ವಿ ಭಟ್ಟ ಅವರಿಂದ ಅಮರನಾಥ ಭಾನಾವಳಿಕರ್ ಅವರಿಗೆ ನೋಟಸ್ ಒಂದು ಬಂದಿತು. ಅದರಲ್ಲಿ `ಕೇಣಿ ಕಸಬಾದ ರಾಘು ಅಶೋಕ ನಾಯ್ಕ ಅವರಿಗೆ ಅಮರನಾಥ ಭಾನಾವಳಿಕರ್ ಅವರು 14.70 ಲಕ್ಷ ರೂ ಪಾವತಿಸಬೇಕು’ ಎಂದು ಬರೆದಿತ್ತು. ಹಂತ ಹಂತವಾಗಿ ಪಡೆದಿದ್ದ ಈ ಹಣ ಪಾವತಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿತ್ತು. ಹಣಪಡೆಯದೇ ಇದ್ದರೂ ಹಣ ಪಾವತಿಸಬೇಕಾದ ಪರಿಸ್ಥಿತಿ ಬಂದ ಬಗ್ಗೆ ಅಮರನಾಥ ಭಾನಾವಳಿಕರ್ ಅವರು ಆತಂಕಕ್ಕೆ ಒಳಗಾದರು. ವಿಚಾರಣೆ ನಡೆಸಿದಾಗ 2018ರಲ್ಲಿ ನೀಡಿದ ಚೆಕ್ಕುಗಳು ದುರುಪಯೋಗವಾಗಿರುವುದು ಗಮನಕ್ಕೆ ಬಂದಿತು.
ಈ ಬಗ್ಗೆ ಧನಂಜಯ ನಾಯ್ಕ ಅವರನ್ನು ವಿಚಾರಿಸಿದಾಗ `ಭೂಮಿ ವ್ಯವಹಾರದ ಎಜೆಂಟ್ ಆಗಿದ್ದ ರಾಘು ನಾಯ್ಕ ಅವರು ಆ ಚೆಕ್ ಪಡೆದಿದ್ದರು. ಜಮೀನು ವ್ಯವಹಾರ ಅಪೂರ್ಣವಾಗಿದ್ದರಿಂದ ಆ ಚೆಕ್ ತಾನೇ ಇಟ್ಟುಕೊಳ್ಳುವೆ ಎಂದಿದ್ದರು’ ಎಂಬ ವಿಷಯ ಹೇಳಿದರು. ಧನಂಜಯ ನಾಯ್ಕ ಅವರಿಗೆ ನೀಡಿದ್ದ ಚೆಕ್ಕುಗಳನ್ನು ರಾಘು ನಾಯ್ಕ ಅವರುಪಡೆದು ಅದನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಅರಿತ ಅಮರನಾಥ ಭಾನಾವಳಿಕರ್ ಈ ಬಗ್ಗೆ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ರಾಘು ನಾಯ್ಕ ಅವರ ವಿರುದ್ಧ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.
`ಖಾಲಿ ಚೆಕ್ಕಿನ ಮೇಲೆ ಸಹಿ ಮಾಡಿಕೊಡುವ ಮುನ್ನ ಎಚ್ಚರ’