ಮದುವೆ ಆಗಲು ಇಷ್ಟವಿಲ್ಲದ ಕಾರಣ ಯಲ್ಲಾಪುರದ ಕನ್ನಡಗಲ್-ವಡೆಹೊಕ್ಕಳಿ ಬಳಿಯ ಸತೀಶ ಮಳಿಕ ಅವರು ಮನೆ ಬಿಟ್ಟು ಹೋಗಿದ್ದಾರೆ. ಮನೆ ಬಿಡುವ ಮುನ್ನ ಅವರು ಸಹೋದರನಿಗೆ ಮೆಸೆಜ್ ಮಾಡಿದ್ದು, `ಮದುವೆ ಇಷ್ಟವಿಲ್ಲ’ ಎಂದು ಹೇಳಿದ್ದಾರೆ.
ಯಲ್ಲಾಪುರದ ಕನ್ನಡಗಲ್ ಪ್ರದೇಶದ ವಡೆಹೊಕಳಿ ಸಮೀಪದ ಚಿನ್ನೆಹುಕ್ಕಳಿಯಲ್ಲಿ ಸತೀಶ ರಮೇಶ ಮಳಿಕ ಅವರು ವಾಸವಾಗಿದ್ದರು. 26ವರ್ಷದ ಅವರು ಕಾರ್ಪರೆಂಟರ್ ಆಗಿ ಬದುಕು ನಡೆಸುತ್ತಿದ್ದರು. ಕುಟುಂಬದವರೆಲ್ಲ ಸೇರಿ ಸತೀಶ ಮಳಿಕ ಅವರಿಗೆ ಮದುವೆ ಮಾಡಲು ಯೋಚಿಸಿದ್ದರು. ಆದರೆ, ಸತೀಶ್ ಮಳಿಕ ಅವರಿಗೆ ಕುಟುಂಬದವರ ಈ ನಿರ್ಣಯ ಇಷ್ಟವಾಗಿರಲಿಲ್ಲ.
ಮದುವೆ ವಿಷಯವಾಗಿ ಮಾನಸಿಕವಾಗಿ ನೊಂದಿದ್ದ ಸತೀಶ ಮಳಿಕ ಅವರು ಮಾರ್ಚ 28ರಂದು ತಮ್ಮ ಸಹೋದರ ವಿಷ್ಣು ರಮೇಶ ಮಳಿಕ್ ಅವರಿಗೆ ಮೆಸೆಜ್ ಮಾಡಿದರು. `ಮದುವೆ ಇಷ್ಟವಿಲ್ಲದ ಕಾರಣ ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದವರು ಇಂಗ್ಲಿಷಿನಲ್ಲಿ ಬರೆದಿದ್ದರು. ಮಧ್ಯಾಹ್ನ 3.23ಕ್ಕೆ ಮನೆಯಿಂದ ಹೊರಟ ಅವರು ಮರುದಿನವಾದರೂ ಮರಳಿ ಬರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರು.
ಸತೀಶ್ ಮಳಿಕ್ ಅವರಿಗಾಗಿ ಸಂಬAಧಿಕರ ಮನೆಗೆ ಫೋನ್ ಮಾಡಿದರು. ಪರಿಚಯದವರ ಬಳಿ ವಿಚಾರಣೆ ನಡೆಸಿದರು. ಆದರೆ, ಎಲ್ಲಿಯೂ ಸತೀಶ್ ಮಳಿಕ್ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ವಿಷ್ಣು ಮಳಿಕ್ ಅವರು ಪೊಲೀಸರ ಸಹಾಯಪಡೆದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತೀಶ್ ಮಳಿಕ್ ಅವರನ್ನು ಹುಡುಕಿಕೊಡುವ ಭರವಸೆ ನೀಡಿದರು.