ಹೊನ್ನಾವರದ ಎನ್ ಜೆ ಕನ್ಸಟ್ರಕ್ಷನ್ ಕಂಪನಿ ನಿರ್ಲಕ್ಷಕ್ಕೆ ಅಲ್ಲಿ ದುಡಿಯುವ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಎನ್ ಜೆ ಕನ್ಸಟ್ರಕ್ಷನ್ ಕಂಪನಿ ಮಾಲಕ ಬಾಲಚಂದ್ರ ಗೌಡ ಅವರು ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡದ ಕಾರಣ ಅಲ್ಲಿ ದುಡಿಯುವ ಮಾರುತಿ ಗೌಡ ಅವರು ನೋವು ಅನುಭವಿಸುತ್ತಿದ್ದಾರೆ.
ಹೊನ್ನಾವರದ ಹೂವಿನಹಿತ್ಲದ ಹೊದ್ಕೆ ಶಿರೂರಿನಲ್ಲಿ ಬಾಲಚಂದ್ರ ನಾರಾಯಣ ಗೌಡ ಅವರು ವಾಸವಾಗಿದ್ದಾರೆ. 33 ವರ್ಷದ ಅವರು ಎನ್ ಜೆ ಕನ್ಸಟ್ರಕ್ಷನ್ ಕಂಪನಿ ಮಾಲಕರಾಗಿದ್ದಾರೆ. ಕಟ್ಟಡ ನಿರ್ಮಾಣದ ಗುತ್ತಿಗೆಪಡೆಯುವ ಬಾಲಚಂದ್ರ ಗೌಡ ಅವರು ವಿವಿಧ ಕಡೆ ಮನೆ ನಿರ್ಮಾಣ ಕೆಲಸ ಮಾಡಿಕೊಂಡಿದ್ದು, ತಮ್ಮಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಸುರಕ್ಷತೆಗೆ ಅವರು ಒತ್ತು ನೀಡುತ್ತಿಲ್ಲ.
ಎನ್ ಜೆ ಕನ್ಸಟ್ರಕ್ಷನ್ ಕಂಪನಿಯಿAದ ಕುಮಟಾ ಮೂರೂರಿನ ಹನುಮಂತ ದೇವಸ್ಥಾನದ ಬಳಿ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ. ಇಲ್ಲಿನ ಜಟ್ಟು ನಾಗು ಗೌಡ ಅವರು ಎನ್ ಜೆ ಕನ್ಸಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣ ಕೆಲಸವನ್ನು ಗುತ್ತಿಗೆಗೆ ನೀಡಿದ್ದಾರೆ. ಈ ಕೆಲಸಕ್ಕಾಗಿ ಬಾಲಚಂದ್ರ ಗೌಡ ಅವರು ಮೂರುರು ಕರ್ಕಿಮಕ್ಕಿಯ ಮಾರುತಿ ಗಣಪು ಗೌಡ ಅವರನ್ನು ದುಡಿಸಿಕೊಳ್ಳುತ್ತಿದ್ದಾರೆ. ಆದರೆ, ಮನೆ ಮೊದಲ ಮಹಡಿ ನಿರ್ಮಾಣ ಹಂತದಲ್ಲಿದ್ದರೂ ಮಾರುತಿ ಗೌಡ ಅವರಿಗೆ ಅಗತ್ಯ ಸುರಕ್ಷತಾ ಸಾಮಗ್ರಿ ಒದಗಿಸಿಲ್ಲ.
ಏಪ್ರಿಲ್ 7ರಂದು ಮನೆ ನಿರ್ಮಾಣ ಕೆಲಸಕ್ಕಾಗಿ ದುಡಿಯುತ್ತಿದ್ದ ಮಾರುತಿ ಗೌಡ ಅವರು ಮೊದಲ ಮಹಡಿಯಿಂದ ನೆಲಕ್ಕೆ ಬಿದ್ದಿದ್ದಾರೆ. `ಕಟ್ಟಡ ನಿರ್ಮಾಣ ಸುರಕ್ಷತಾ ಸಾಮಗ್ರಿಗಳಿದ್ದರೆ ಅವರು ನೋವು ಅನುಭವಿಸುತ್ತಿರಲಿಲ್ಲ. ಆ ಸಾಮಗ್ರಿ ನೀಡದೇ ದುಡಿಸಿದ ಕಾರಣ ಮಾರುತಿ ಗೌಡ ಅವರಿಗೆ ಸಾಕಷ್ಟು ಪೆಟ್ಟಾಗಿದೆ’ ಎಂಬುದು ಅವರ ಕುಟುಂಬದವರ ದೂರು. ಒಂದನೇ ಮಹಡಿಯಿಂದ ಬಿದ್ದ ಮಾರುತಿ ಗೌಡ ಅವರ ಗುತ್ತಿಗೆ ಹಾಗೂ ಬೆನ್ನಿನ ಮೂಳೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಇದಕ್ಕೆ ಮನೆ ನಿರ್ಮಾಣ ಮಾಡುತ್ತಿರುವ ಜಟ್ಟು ಗೌಡ ಹಾಗೂ ಗುತ್ತಿಗೆವಹಿಸಿಕೊಂಡಿರುವ ಬಾಲಚಂದ್ರ ಗೌಡ ಅವರೇ ಕಾರಣ ಎಂದು ಕುಟುಂಬದವರು ದೂರಿದ್ದಾರೆ.