ಭಟ್ಕಳದ ಕೋಣಾರ ಬಳಿಯ ಮಂಜುನಾಥ ಹೆಬ್ಬಾರ್ ಅವರ ಮನೆ ಅಂಗಳಕ್ಕೆ ಚಿರತೆ ಆಗಮಿಸಿದೆ. ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಎರಡು ಚಿರತೆಯ ಚಲನ-ವಲನ ಸೆರೆಯಾಗಿದೆ.
ಜನ ವಸತಿ ಪ್ರದೇಶಕ್ಕೆ ಚಿರತೆ ನುಗ್ಗಿರುವುದಕ್ಕೆ ಆ ಭಾಗದ ನಿವಾಸಿಗಳು ಆತಂಕವ್ಯಕ್ತಪಡಿಸಿದ್ದಾರೆ. ಅಂದಾಜು 3 ವರ್ಷದ ಚಿರತೆ ಇಲ್ಲಿ ಓಡಾಟ ನಡೆಸಿದ್ದು, ಜನ ಭಯಗೊಂಡಿದ್ದಾರೆ. ಒಂದಾದ ಮೇಲೆ ಒಂದರAತೆ ಎರಡು ಚಿರತೆ ಒಂದೇ ಮಾರ್ಗದಲ್ಲಿ ಓಡಾಡಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.
ಸಮೀಪದ ಮನೆಯವರು ಸಾಕಿದ್ದ ನಾಯಿಯೊಂದು ಕಣ್ಮರೆಯಾಗಿರುವುದು ಈ ವೇಳೆ ಗಮನಕ್ಕೆ ಬಂದಿದೆ. ಆ ನಾಯಿ ಚಿರತೆಗೆ ಆಹಾರವಾದ ಬಗ್ಗೆ ಅಲ್ಲಿನವರು ಶಂಕಿಸಿದ್ದಾರೆ. `ಸಂಜೆ ವೇಳೆ ಮನೆಯಿಂದ ಹೊರಬರಲು ಹೆದರಿಕೆಯಾಗುತ್ತಿದೆ. ಚಿರತೆಯನ್ನು ಇಲ್ಲಿಂದ ಸ್ಥಳಾಂತರಿಸಬೇಕು’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. `ಚಿರತೆ ಸಂಚಾರ ದೃಢವಾಗಿದ್ದು, ಇಲಾಖೆಯವರು ಚಿರತೆಯನ್ನು ನೋಡಿದ್ದಾರೆ. ಆಹಾರ ಅರೆಸಿ ಅವರು ನಾಡಿನ ಕಡೆ ಬಂದಿವೆ. ಜಾನುವಾರುಗಳಿಗೆ ತೊಂದರೆ ಆದ ದೂರು ಬಂದರೆ ಚಿರತೆ ಸ್ಥಳಾಂತರಕ್ಕೆ ಕ್ರಮಜರುಗಿಸಲಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ವಿ ವಿಶ್ವನಾಥ ಅವರು ಹೇಳಿದ್ದಾರೆ. `ಸದ್ಯ ಸಿಡಿಮದ್ದುಗಳನ್ನು ಸಿಡಿಸಿ ಚಿರತೆ ಕಾಡಿನ ಕಡೆ ಹೋಗುವ ಹಾಗೇ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.