ಶಿರಸಿ ದಾಸನಕೊಪ್ಪದ ಕಾಳಂಗಿ ವ್ಯವಸಾಯ ಸಹಕಾರಿ ಸಂಘದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದ ಅನುಮಾನವ್ಯಕ್ತವಾಗಿದೆ. ಹಾವೇರಿಯಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರಿಗೆ ಸೊಸೈಟಿಯಿಂದ 69 ಲಕ್ಷ ರೂ ವರ್ಗವಾಗಿದ್ದು, ಇದರೊಂದಿಗೆ 1.88 ಕೋಟಿ ರೂ ಅಕ್ರಮ ಹಣಕಾಸು ವ್ಯವಹಾರ ನಡೆದ ಬಗ್ಗೆ ದೂರಿದೆ. ಈ ಎಲ್ಲಾ ಅಪರಾತಪರದ ಸಮಗ್ರ ತನಿಖೆಗಾಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಮೂರು ದಿನಗಳಿಂದ ಸೊಸೈಟಿಯ ಆರ್ಥಿಕ ವ್ಯವಹಾರದ ಬಗ್ಗೆ ಎಲ್ಲಡೆ ಚರ್ಚೆ ನಡೆಯುತ್ತಿದೆ. ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾಲದ ಹಣ ದುರುಪಯೋಗಪಡಿಸಿಕೊಂಡ ಆರೋಪವೂ ಕೇಳಿ ಬಂದಿದೆ. ರೈತರ ಗಮನಕ್ಕೆ ಬಾರದ ರೀತಿ ಕೆಲ ಸಾಲಪಡೆದು ಅವ್ಯವಹಾರ ನಡೆಸಿದ ದೂರುಗಳಿವೆ. ಸುಮಂತ ಧನಂಜಯ ಸಾಕಣ್ಣನವರ್ ಹಾಗೂ ನಂಜುAಡಿ ಸಾಕಣ್ಣನವರ್ ಎಂಬ ರೈತರ ಹೆಸರಿನಲ್ಲಿ ವಂಚನೆಯಿAದ ಸಾಲಪಡೆಯಲಾಗಿದ್ದು, ಈ ವಿಷಯ ಬಹಿರಂಗವಾಗಿದೆ. ಅದಾದ ನಂತರಪಡೆದ ಸಾಲವನ್ನು ಸೊಸೈಟಿಗೆ ಮರುಪಾವತಿ ಮಾಡಿ ಪ್ರಕರಣವನ್ನು ಅಲ್ಲಿಗೆ ಮುಚ್ಚುವ ಪ್ರಯತ್ನವೂ ನಡೆದಿದೆ.
ಈ ಎಲ್ಲಾ ಹಿನ್ನಲೆ ಬುಧವಾರ ಸೊಸೈಟಿ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ರೈತರು ಇಟ್ಟಿರುವ ಠೇವಣಿ ಹಣವನ್ನು ಮರಳಿಸುವಂತೆ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ, ಸೊಸೈಟಿ ಖಾತೆಯಲ್ಲಿ ಹಣವಿಲ್ಲ ಎಂಬ ವಿಷಯ ಅರಿತು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಈ ಸೊಸೈಟಿಯಲ್ಲಿ ಐದು ಲಕ್ಷ ರೂ ಹಣವಿಟ್ಟ ರೈತರೊಬ್ಬರು ಆ ಹಣ ಮರಳಿಪಡೆಯುವುದಕ್ಕಾಗಿ 10 ದಿನಗಳಿಂದ ಓಡಾಟ ನಡೆಸಿದ್ದು ಅದು ಸಿಗದ ಕಾರಣ ಇನ್ನಷ್ಟು ರೈತರು ಹಣ ಮರಳಿಪಡೆಯಲು ಆಗಮಿಸುತ್ತಿದ್ದಾರೆ.
ಲಕ್ಷ ರೂ ಕೇಳಿದವರಿಗೆ 25 ಸಾವಿರ ರೂ ಮಾತ್ರ ನೀಡುವುದಾಗಿ ಸೊಸೈಟಿ ಸಿಬ್ಬಂದಿ ಹೇಳಿದ್ದು ಸಹ ರೈತರ ಅನುಮಾನಕ್ಕೆ ಕಾರಣವಾಗಿದೆ. ಸೊಸೈಟಿ ಹಗರಣದ ಸುದ್ದಿ ಕೇಳಿ ಜನ ಕಚೇರಿಯ ಕಡೆ ದೌಡಾಯಿಸುತ್ತಿದ್ದಾರೆ. ಈಗಾಗಲೇ ಹಿಪ್ಪನಳ್ಳಿ ಹಾಗೂ ಗೋಳಿ ಸೊಸೈಟಿ ದಾರಿ ತಪ್ಪಿದ್ದು, ಅದೇ ದಾರಿಯಲ್ಲಿ ದಾಸನಕೊಪ್ಪದ ಕಾಳಂಗಿ ಸೊಸೈಟಿ ಸಹ ಸಾಗಿರುವ ಅನುಮಾನವ್ಯಕ್ತವಾಗಿದೆ.