ಉನ್ನತ ಶಿಕ್ಷಣದ ಕನಸು ಹೊತ್ತು ಬೆಂಗಳೂರು-ಮಂಗಳೂರಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನವರ ಕನಸು. ಇದಕ್ಕೆ ಪೂರಕವಾಗಿ ಪ್ರಾರಂಭವಾಗಿದ್ದು ಸರಸ್ವತಿ ಪಿ.ಯು ಕಾಲೇಜು. ಈ ಕಾಲೇಜಿನ ವಿಜ್ಞಾನ ವಿಭಾಗಕ್ಕಾಗಿ ಮಂಗಳೂರಿನ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿ ಅವರನ್ನು ಸಂಪರ್ಕಿಸಿದ ಈ ಕಾಲೇಜಿನವರು, ಅವರ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಜನ ಮನ್ನಣೆಗಳಿಸಿದ ವಿಧಾತ್ರಿ ಅಕಾಡೆಮಿಯು ಕಳೆದ ಆರು ವರ್ಷಗಳಿಂದ ಕುಮಟಾದಲ್ಲಿಯೂ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ವಿಧಾತ್ರಿ ಅಕಾಡಮಿ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಕುಮಟಾದಲ್ಲಿ ಸರಸ್ವತಿ ಪಿಯು ಕಾಲೇಜು ಮುನ್ನಡೆಯುತ್ತಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧಾರಣ ಅಂಕದೊಂದಿಗೆ ಪಾಸಾದವರೂ ಸಹ ಇಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಹತ್ವದ ಅಂಕಗಳಿಸಿದವರಿಗೆ ಎಲ್ಲಾ ಕಾಲೇಜಿನವರು ಕೈ ಬೀಸಿ ಕರೆಯುತ್ತಾರೆ. ಆದರೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಪಡೆದವರನ್ನು ಸಹ ಮುಖ್ಯ ವಾಹಿನಿಗೆ ತರುವಲ್ಲಿ ವಿಧಾತ್ರಿ ಅಕಾಡೆಮಿ ಶ್ರಮಿಸುತ್ತಿದೆ. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿಯು ಕಾಲೇಜು ಶೇ 50 ಅಂಕದೊಂದಿಗೆ ಪಾಸಾದವರಿಗೂ ಪ್ರವೇಶ ನೀಡಿ, ಅವರಲ್ಲಿನ ಪ್ರತಿಭೆಗೆ ವೇದಿಕೆ ಒದಗಿಸಿದೆ. ಹೀಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕಪಡೆದು ಈ ಕಾಲೇಜಿಗೆ ಪ್ರವೇಶಪಡೆದವರು ಪಿಯುಸಿ ವಿಜ್ಞಾನ ವಿಭಾಗದಲ್ಲಿಯೇ ಶೇ 90ರ ಸಾಧನೆ ಮಾಡಿದ್ದಾರೆ.
2020ರಿಂದ ಈವರೆಗೂ ಸರಸ್ವತಿ ಪಿಯು ಕಾಲೇಜು ಒಂದಿಲ್ಲೊಂದು ದಾಖಲೆ ಬರೆಯುತ್ತಲೇ ಇದೆ. ತಾಲೂಕು ಮಟ್ಟದಿಂದ ಶುರುವಾಗಿ ರಾಜ್ಯಮಟ್ಟದವರೆಗೂ ಇಲ್ಲಿನ ಪ್ರತಿಭೆಗಳು ಬೆಳಗಿವೆ. NEET, JEE, KCET ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ. ಪ್ರತಿ ವರ್ಷವೂ ಈ ಕಾಲೇಜು ಶೇ 100ರ ಸಾಧನೆ ಮಾಡುತ್ತಿದೆ. ಕಾಲೇಜಿನಲ್ಲಿರುವ ನುರಿತ ಉಪನ್ಯಾಸಕರು ಹಾಗೂ ಅವರ ಮಾರ್ಗದರ್ಶನವೇ ಇದಕ್ಕೆ ಕಾರಣ. ಪ್ರತಿ ವಿದ್ಯಾರ್ಥಿಯ ಓದಿನ ಜೊತೆ ಅವರ ಬೇಕು-ಬೇಡಗಳಿಗೆ ಸ್ಪಂದಿಸಿ, ಮಕ್ಕಳ ಆತ್ಮವಿಶ್ವಾಸ ಬೆಳಸುವುದಕ್ಕಾಗಿ ಉಪನ್ಯಾಸಕರು ಶ್ರಮಿಸುತ್ತಿದ್ದಾರೆ. ಅದರಲ್ಲಿಯೂ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಯೋಜನೆಗಳ ಅಡಿ ವಿಶೇಷ ಗಮನಹರಿಸಿ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ನಿರಂತರವಾಗಿದೆ.
ಈ ಎಲ್ಲಾ ಹಿನ್ನಲೆ ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆಯುತ್ತಿದೆ. ಸರಸ್ವತಿ ಪಿಯು ಕಾಲೇಜು ಜನರ ಪ್ರೀತಿ-ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇಡೀ ಉತ್ತರ ಕನ್ನಡ ಜಿಲ್ಲೆಯ ಜನರ ನಂಬಿಕೆಯ ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಂಡಿದೆ. `ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು’ ಎಂದು ಮಂಕಾಗಿರುವ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅವರ ಭದ್ರ ಭವಿಷ್ಯಕ್ಕೆ ಈ ಕಾಲೇಜು ಅಡಿಪಾಯ ಹಾಕುತ್ತಿದೆ. ವಿದ್ಯಾಗಿರಿಯಲ್ಲಿರುವ ಸರಸ್ವತಿ ಪಿಯು ಕಾಲೇಜು ವಿದ್ಯೆಯನ್ನು ದಾರೆ ಎರೆಯುವ ಕಾಯಕವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ.
ವಿಧಾತ್ರಿಯ ವಿದ್ಯಾಧಾಮ
ವಿಧಾತ್ರಿ ಅಕಾಡೆಮಿ ಮುಂದಾಳತ್ವದಲ್ಲಿ ನಡೆಯುವ ಸರಸ್ವತಿ ಪಿಯು ಕಾಲೇಜಿನಲ್ಲಿ ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೇಲ್’ಗಳಿವೆ. ‘ವಿದ್ಯಾಧಾಮ’ ಎಂಬ ಹೆಸರಿನಲ್ಲಿರುವ ಈ ಹಾಸ್ಟೇಲ್ ನಲ್ಲಿ ವಿದ್ಯಾರ್ಥಿಗಳಿಗೂ ಅನೇಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಊಟ-ವಸತಿ ಜೊತೆ ವಿಶೇಷ ತರಗತಿಗಳನ್ನು ಆಯೋಜಿಸಿ ಮಕ್ಕಳ ವೈಯಕ್ತಿಕ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುತ್ತದೆ. ವಿಶೇಷ ತರಗತಿಗಳಿಗೆ ಪೂರಕವಾಗಿ ಪ್ರತಿ ವಾರ ಪರೀಕ್ಷೆಗಳು ನಡೆಯುತ್ತದೆ. ಇದರೊಂದಿಗೆ ಮಕ್ಕಳಲ್ಲಿ ಶಿಸ್ತು ಬೆಳೆಸಲು ನಿವೃತ್ತ ಸೈನಿಕರೊಬ್ಬರು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಆಪ್ತ ಸಮಾಲೋಚನೆಗಾಗಿ ಮಾನಸಿಕ ತಜ್ಞರನ್ನು ಸಂಸ್ಥೆ ನೇಮಿಸಿದೆ.
ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಕಾಲೇಜು ಭವಿಷ್ಯದ ಕನಸು ಈಡೇರಿಕೆಗೆ ನೆರವು ನೀಡುತ್ತದೆ. ಈಗಾಗಲೇ ಅನೇಕ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪ್ರಕ್ರಿಯೆಗೆ ಆಗಮಿಸಿದ್ದು, ನಿಮ್ಮ ಮಗುವಿನ ಪ್ರವೇಶಕ್ಕಾಗಿ ಇಲ್ಲಿ ಫೋನ್ ಮಾಡಿ: 9972664155 ಅಥವಾ 9972663855
#Sponsored