ಹೊನ್ನಾವರದ ಕವಲಕ್ಕಿ ಬಳಿ ಈಶ್ವರ ಹೆಗಡೆ ಅವರಿಗೆ ಬೈಕ್ ಗುದ್ದಿದೆ. ಅಪಘಾತದ ನಂತರ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾರೆ.
ಮೇ 4ರಂದು ಹೊನ್ನಾವರದ ಅರೆಅಂಗಡಿ ಬಳಿಯ ಹೆಬ್ಬಿನಕಾನದ ಈಶ್ವರ ನಾರಾಯಣ ಹೆಗಡೆ (90)ಅವರು ತಮ್ಮ ಸಂಬAಧಿಯಾದ ಕಲವಕ್ಕಿ ನಿವಾಸಿ ಗಣೇಶ ಗಣಪತಿ ಹೆಗಡೆ ಅವರ ಮನೆಗೆ ಹೋಗಿದ್ದರು. ಗಣೇಶ ಹೆಗಡೆ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಅಲ್ಲಿಯೇ ಉಳಿದುಕೊಂಡಿದ್ದರು. ಸಂಜೆ ಅವರು ಕವಲಕ್ಕಿಯ ಲಕ್ಷಿ ಮೆಡಿಕಲ್’ಗೆ ಹೋಗಲು ಮನೆಯಿಂದ ಹೊರ ಬಿದ್ದರು. ಆಗ, ಹೊನ್ನಾವರದಿಂದ ಹಡಿನಬಾಳದ ಕಡೆ ವೇಗವಾಗಿ ಬೈಕೊಂದು ಚಲಿಸಿತು. ಆ ಬೈಕು ಈಶ್ವರ ಹೆಗಡೆ ಅವರಿಗೆ ಗುದ್ದಿತು.
ಈ ವೇಳೆ ಗಣೇಶ ಹೆಗಡೆ ಅವರು ಮನೆ ಅಂಗಳದಲ್ಲಿದ್ದರು. ಆ ಅಪಘಾತ ನೋಡಿದ ಅವರು ಕೂಡಲೇ ಬೈಕ್ ನೋಂದಣಿ ಸಂಖ್ಯೆ ಬರೆದಿಟ್ಟುಕೊಂಡರು. ಈ ವೇಳೆ ಅಲ್ಲಿ ಜನ ಸೇರಿದ್ದು, ಜನರ ಗುಂಪಿನಲ್ಲಿದ್ದ ಬೈಕ್ ಸವಾರ ನಂತರ ನಿಧಾನವಾಗಿ ಅಲ್ಲಿಂದ ಪರಾರಿಯಾದರು. ಆ ಬೈಕ್ ಸವಾರ ಹಡಿನಬಾಳದ ಕಡೆ ಹೋಗಿದನ್ನು ಜನ ನೋಡಿದರು. ಅದಾದ ನಂತರ ಗಾಯಗೊಂಡ ವೃದ್ಧರನ್ನು ನವೀನ ಮರಾಠೆ ಅವರು ತಮ್ಮ ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಈ ಎಲ್ಲಾ ವಿಷಯದ ಬಗ್ಗೆ ಅರಿತು ಪೊಲೀಸರು ಪ್ರಕರಣ ದಾಖಲಿಸಿದರು.