ಉತ್ತರ ಪ್ರದೇಶದ ಯುವಕರಿಬ್ಬರು ಉತ್ತರ ಕನ್ನಡ ಜಿಲ್ಲೆಯ ಕಡಲಿಗೆ ಇಳಿದಿದ್ದು, ಭಟ್ಕಳದಲ್ಲಿ ಅವರು ಸಾವನಪ್ಪಿದ್ದಾರೆ. ಮಂಡಳಿಯ ನಸ್ತಾರ್ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಬುಧವಾರ ಮಧ್ಯಾಹ್ನ ಮಹಮದ್ ಅಪ್ರೋಜ್ ಹಾಗೂ ರಿಜ್ವಾನ್ ಸಾಕೀರ ಅವರು ತಮ್ಮ ಸ್ನೇಹಿತರ ಜೊತೆ ಭಟ್ಕಳಕ್ಕೆ ಬಂದಿದ್ದರು. ಏಳು ಜನ ಸೇರಿ ಸಮುದ್ರ ಸ್ನಾನಕ್ಕೆ ಮುಂದಾಗಿದ್ದರು. ಈ ವೇಳೆ ರಭಸವಾಗಿ ಬೀಸಿದ ಅಲೆಯೊಂದು ಮಹಮದ್ ಅಪ್ರೋಜ್ ಹಾಗೂ ರಿಜ್ವಾನ್ ಸಾಕೀರ ಅವರನ್ನು ಎಳೆದೊಯ್ದಿತು. ಸಮುದ್ರ ನೀರು ಕುಡಿದ ಅವರು ದಡಕ್ಕೆ ಬರಲು ತೊಂದರೆ ಅನುಭವಿಸಿದರು.
ಅವರ ಜೊತೆ ಮತ್ತೊಬ್ಬರು ಕೊಚ್ಚಿ ಹೋಗಿದ್ದು, ಸ್ಥಳೀಯರಾದ ಸೌದ್ ಗವಾಯಿ ಹಾಗೂ ಸಾಜೀಪ್ ಸೇರಿ ಅವರನ್ನು ರಕ್ಷಿಸಿದರು. ಮತ್ತೆ ಐದು ಜನ ಅಸ್ವಸ್ಥರಾಗಿದ್ದು ಅವರನ್ನು ದಡಕ್ಕೆ ತಂದರು. ಆದರೆ, ಮಹಮದ್ ಅಪ್ರೋಜ್ ಹಾಗೂ ರಿಜ್ವಾನ್ ಸಾಕೀರ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.