ಸದಾ ಒಂದಿಲ್ಲೊoದು ಹೋರಾಟದ ಮೂಲಕ ಶಿರಸಿ-ಸಿದ್ದಾಪುರದಲ್ಲಿ ಪ್ರಚಲಿತದಲ್ಲಿರುತ್ತಿದ್ದ ಅನಂತಮೂರ್ತಿ ಹೆಗಡೆ ಅವರು ಎರಡುವರೆ ತಿಂಗಳ ನಂತರ ಮತ್ತೆ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ. ಬನವಾಸಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಅವರು ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿಕೊಂಡು ಭಾಷಣ ಮಾಡಿದ್ದಾರೆ.
ಫೆಬ್ರವರಿ 19ರಂದು ಅನಂತಮೂರ್ತಿ ಹೆಗಡೆ ಅವರು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದು, ಸದ್ಯ ರೈತರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ. ಬನವಾಸಿ ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದ್ದು, ಅದರಿಂದ ರೈತರು ಅನುಭವಿಸುವ ತೊಂದರೆಯ ಬಗ್ಗೆ ಅವರು ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ವಿದ್ಯುತ್ ಗ್ರಿಡ್ ಸ್ಥಾಪನೆಯಾಗಿ ಐದು ವರ್ಷ ಕಳೆದರೂ ಅದು ಶುರುವಾಗದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಪ್ರತಿ ದಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಬಿಜೆಪಿ ರೈತ ಮೋರ್ಚಾ ಹಾಗೂ ಬನವಾಸಿ ಬಿಜೆಪಿ ಮಂಡಳದಿAದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದೆ. ಬನವಾಸಿ ಮಧುಕೇಶ್ವರ ದೇವಾಲಯದಿಂದ ಬೈಕ್ ರ್ಯಾಲಿ ಮೂಲಕ ಶಿರಸಿಗೆ ಆಗಮಿಸಿದ ಪ್ರತಿಭಟನಾಕಾರರು, ಮಾರಿಕಾಂಬಾ ದೇವಿಯ ದರ್ಶನ ಪಡೆದುಬಳಿಕ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಮಾತನಾಡಿದ ಬಿಜೆಪಿ ಬನವಾಸಿ ಮಂಡಳದ ಅಧ್ಯಕ್ಷ ರಮೇಶನ ನಾಯ್ಕ ಕುಪ್ಪಳ್ಳಿ `ನಮ್ಮ ಶಾಸಕರಿಗೆ ಯಾವುದೋ ಒಂದು ಯೋಜನೆಯನ್ನು ತಂದರೆ ಆ ಯೋಜನೆಯ ಪ್ರತಿಫಲ ಜನರಿಗೆ ಸಿಗುವುದು ಮುಖ್ಯವಲ್ಲ. ಬದಲಾಗಿ ಅವರಿಗೆ ಬರಬೇಕಾದ ಲಾಭ ಅಥವಾ ಕಿಸೆ ತುಂಬಿದರೆ ಸಾಕು ಸಾಕು ಎಂಬAತಾಗಿದೆ’ ಎಂದು ಟೀಕಿಸಿದರು. `ಗ್ರಿಡ್ ಹಾಗೂ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ ಈಗಾಗಲೇ ಎಸ್ಟಿಮೇಷನ್ ಪ್ರಕಾರ ಕೆಲಸ ಮುಗಿದು, ಹಣ ಪಾವತಿಯಾಗಿ ಅವರಿಗೆ ಬರಬೇಕಾದ ಲಾಭ ತಲುಪಿದೆ. ಹಾಗಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಶಾಸಕರಿಗೆ ಇಲ್ಲದಂತಾಗಿದೆ. ಅಂಡಗಿಯಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಶೀತಲೀಕರಣ ಘಟಕವನ್ನು ನಿರ್ಮಿಸಲು ನಮ್ಮ ಯಡಿಯೂರಪ್ಪನವರ ಬಿಜೆಪಿ ಸರ್ಕಾರದಲ್ಲಿ ಮಂಜೂರಾತಿ ನೀಡಲಾಗಿತ್ತು. ಆದರೆ ಇವತ್ತು ಆ ಕಾಮಗಾರಿ ಅರ್ಧಕ್ಕೆ ನಿಂತು ಮಳೆಯಿಂದಾಗಿ ಸೋರುತ್ತಿದೆ’ಎಂಬ ವಿಷಯ ಪ್ರಸ್ತಾಪಿಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿ `ಬನವಾಸಿ, ದಾಸನಕೊಪ್ಪ ಈ ಭಾಗದ ಅಡಿಕೆ ಬೆಳೆಗಾರರು, ರೈತರು ತಮ್ಮ ನೋವನ್ನು ಹೇಳಿಕೊಳ್ಳಲು ಬೈಕ್ ರ್ಯಾಲಿ ಮುಖಾಂತರವಾಗಿ ಶಿರಸಿಯ ಹೆಸ್ಕಾಂ ಕಚೇರಿಗೆ ಬಂದು ಮನವಿ ನೀಡುತ್ತಿದ್ದಾರೆ. ಇಲ್ಲಿ ಬಂದAತಹ ಎಲ್ಲರೂ ಕೂಡ ಅಪ್ಪಟ ರೈತರರಾಗಿದ್ದು, ಅವರ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಬನವಾಸಿ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ಗಳಾದ ಗಳಾದ ಶಂಕರ ಗೌಡ್ರು ಭಾಶಿ, ಮಂಜುನಾಥ ನಾಯ್ಕ, ಬನವಾಸಿ ಗ್ರಾ ಪಂ ಮಾಜಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ವಿ.ಎಸ್. ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಲ ಸಣ್ಣಲಿಂಗಣ್ಣನವರ್, ಗೀತಾ, ಜ್ಯೋತಿ ಚೆನನಯ್ಯ, ಸತ್ಯವತಿ ನಾಯ್ಕ ಇತರರಿದ್ದರು.