ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ 5 ಹಾಗೂ 6ನೇ ಅಣು ವಿದ್ಯುತ್ ಘಟಕ ಸ್ಥಾಪನೆಗೆ ಭಾರೀ ಪ್ರಮಾಣದಲ್ಲಿ ಸಾಮಗ್ರಿ ಸರಬರಾಜಾಗುತ್ತಿದ್ದು, ಸಾಮರ್ಥ್ಯಕ್ಕಿಂತಲೂ ಅಧಿಕ ಬಾರ ಹೊತ್ತು ಲಾರಿ ಹಾಗೂ ಟಿಪ್ಪರ್ ಸಂಚರಿಸುತ್ತಿದೆ. ಆದರೆ, ಇದನ್ನು ಯಾವ ಅಧಿಕಾರಿಯೂ ಅದನ್ನು ಪ್ರಶ್ನಿಸುತ್ತಿಲ್ಲ!
ನಿಯಮಗಳ ಪ್ರಕಾರ 10 ಚಕ್ರದ ಲಾರಿಯಲ್ಲಿ ಲಾರಿ ತೂಕವೂ ಸೇರಿ 28 ಟನ್ ಸಾಮಗ್ರಿ ಸಾಗಾಟಕ್ಕೆ ಮಾತ್ರ ಸರ್ಕಾರ ಅನುಮತಿಸಿದೆ. 12 ಚಕ್ರದ ಲಾರಿಯಲ್ಲಿ ಲಾರಿ ತೂಕವನ್ನು ಸೇರಿ 38 ಟನ್ ಸಾಮಗ್ರಿ ಸಾಗಿಸಲು ಅವಕಾಶ ನೀಡಿದೆ. ಆದರೆ, ಅದಕ್ಕಿಂತಲೂ ಬಾರವಾದ ಕಲ್ಲು-ಪುಡಿಗಳನ್ನು ಕೈಗಾಗೆ ಸಾಗಿಸಲಾಗುತ್ತಿದೆ. ಅರ್ಹತೆಗಿಂತಲೂ ಅಧಿಕ ಸಾಮಗ್ರಿ ತುಂಬಿದ ಲಾರಿಗಳಿಗೂ ಅಧಿಕಾರಿಗಳು ಅಧಿಕೃತ ಮುದ್ರೆ ಒತ್ತಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಕಳೆದ ಆರು ತಿಂಗಳಿನಿAದ ನಿರಂತರವಾಗಿ ಇಂಥ ಲಾರಿಗಳ ಸಂಚಾರ ನಡೆದಿದೆ. ಪರಿಣಾಮ ರಾಷ್ಟಿçÃಯ ಹೆದ್ದಾರಿಯ ಜೊತೆ ರಾಜ್ಯ ಹೆದ್ದಾರಿಯ ಮೇಲೆಯೂ ಒತ್ತಡ ಹೆಚ್ಚಾಗಿದ್ದು, ಅಧಿಕ ಬಾರದ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗುತ್ತಿದೆ.
ಸದ್ಯ ಹುಬ್ಬಳ್ಳಿ-ಧಾರವಾಡ ಭಾಗದಿಂದ ಜಲ್ಲಿ-ಕಲ್ಲು-ಎಂ ಸ್ಯಾಂಡ್ ತುಂಬಿದ ಲಾರಿಗಳು ಕಾರವಾರಕ್ಕೆ ಬರುತ್ತಿವೆ. ಅತ್ಯಂತ ಅಪಾಯಕಾರಿ ರೀತಿಯಲ್ಲಿ ಈ ಲಾರಿಗಳು ಸಂಚರಿಸುತ್ತಿವೆ. ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮೂಲಕ ಈ ಲಾರಿಗಳು ಕಾರವಾರದ ಕೈಗಾಗೆ ತಲುಪುತ್ತಿದ್ದು, ಕಳೆದ ಆರು ತಿಂಗಳಿನಿoದ ಈ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಅದನ್ನು ನೋಡಿಯೂ ನೋಡದ ಹಾಗೇ ಮೌನವಾಗಿದ್ದಾರೆ. ಅತ್ಯಧಿಕ ಬಾರ ಹೊತ್ತ ಲಾರಿ ಸಂಚಾರದಿAದ ರಸ್ತೆ ಸಂಚಾರ ಅಸ್ತವ್ಯಸ್ತವಾಗುವ ಬಗ್ಗೆ ಅರಿವಿದ್ದರೂ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅಧಿಕೃತ ದೂರು ಬಂದರೂ ಕಾಗದ ಪತ್ರಗಳ ವ್ಯವಹಾರದಲ್ಲಿಯೇ ಕಾಲಹರಣ ನಡೆಯುತ್ತಿದೆ.
ಸಾಮರ್ಥ್ಯಕ್ಕಿಂತಲೂ ಅಧಿಕ ಬಾರ ಹೊತ್ತ ಲಾರಿಗಳಿಗೆ ಪರವಾನಿಗೆ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಅದಾಗಿಯೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಂಥ ಲಾರಿಗಳ ಸಾಗಾಟಕ್ಕೆ ಪರವಾನಿಗೆ ನೀಡಿದ್ದಾರೆ. 10 ಚಕ್ರದ ಲಾರಿಯಲ್ಲಿ 33.29 ಟನ್ ಕಲ್ಲುಗಳ ಸಾಗಾಟಕ್ಕೆ ಅನುಮತಿ ನೀಡಿ, ಅದಕ್ಕೆ ರಾಜಧನವನ್ನು ಸಹ ಪಾವತಿಸಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಅಂಕೋಲಾದ ವಿಶ್ವಜಿತ್ ಜಿ ನಾಯಕ ಅವರು ಧ್ವನಿ ಎತ್ತಿದ್ದಾರೆ. ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅವರು ಕೆಲ ವಾಹನದ ದಾಖಲೆಗಳ ಜೊತೆ ದೂರು ನೀಡಿ ಪ್ರಶ್ನಿಸಿದ್ದಾರೆ. ಆದರೆ, ಸಾರಿಗೆ ಅಧಿಕಾರಿಗಳು ದೂರು ನೀಡಿದವರು ನೀಡಿದ ವಾಹನಗಳ ಮೇಲೆ ಮಾತ್ರ ಕ್ರಮ ಜರುಗಿಸುವ ಪ್ರಕ್ರಿಯೆ ಶುರು ಮಾಡಿದ್ದು, ಉಳಿದ ಲಾರಿಗಳನ್ನು ಹಾಗೇ ಬಿಟ್ಟು ಕಳುಹಿಸುತ್ತಿದ್ದಾರೆ.