ಭಟ್ಕಳದ ಕಾಲೇಜು ವಿದ್ಯಾರ್ಥಿಯೊಬ್ಬ ಅನೇಕರ ಆಧಾರ್ ಕಾರ್ಡ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿದೆ. ಸ್ನೇಹಿತನ ಮೊಬೈಲ್ ಸಂಖ್ಯೆ ಬಳಸಿ ಅದರಿಂದ ಟೆಲಿಗ್ರಾಂ ಖಾತೆ ತೆರೆದ ಅಪ್ರಾಪ್ತ ಅಲ್ಲಿ ಆಧಾರ್ ಕಾರ್ಡ ಹಾಗೂ ಇನ್ನಿತರ ಮಾಹಿತಿ ಹಂಚಿಕೊoಡಿದ್ದು, ಜನರ `ವಿಶ್ವಾಸ’ಕ್ಕೆ ದಕ್ಕೆ ತಂದ ಆತನ ವಿರುದ್ಧ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಹಾವೇರಿಯ ವಿಶ್ವಾಸಘಾತಕ ಪಾಟೀಲ್ (ಅಪ್ರಾಪ್ತನ ಹೆಸರು ಬದಲಿಸಿದೆ) ಗೌಡಪಾಟೀಲ್ ಅವರು ಭಟ್ಕಳ ಶಿರಾಲಿ ಗುಮ್ಮನಹತ್ಲುವಿನ ಬಳಿ ವಾಸವಾಗಿದ್ದಾರೆ. 17 ವರ್ಷದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಹೆಬಳೆ ವರಕೊಡ್ಲುವಿನ ಹೊನಗದ್ದೆಯ ರಿತೀಶ್ ದೇವಿದಾಸ ನಾಯ್ಕ ಅವರ ಸ್ನೇಹ ಸಂಪಾದಿಸಿದ್ದಾರೆ. ಸ್ನೇಹಿತನ ಮೊಬೈಲ್ಪಡೆದು ಅವರ ಮೊಬೈಲ್ ಸಂಖ್ಯೆ ಆಧಾರದಲ್ಲಿ ಟೆಲಿಗ್ರಾಂ ಐಡಿಯೊಂದನ್ನು ರಚಿಸಿದ್ದಾರೆ. ಆ ಐಡಿ ಮೂಲಕ ವಿವಿಧ ವಿದ್ವಂಸಕ ಕೃತ್ಯಗಳನ್ನು ಮಾಡಿದ್ದಾರೆ.
ಜನರ ಖಾಸಗಿ ಮಾಹಿತಿ ಹಾಗೂ ಆಧಾರ್ ಕಾರ್ಡ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಪೊಲೀಸರು ನೋಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯ ಪಿಸೈ ವೆಂಕಟೇಶ ಮುರನಾಳ ಅವರು ಈ ಬಗ್ಗೆ ತನಿಖೆ ನಡೆಸಿದಾಗ ವಿಶ್ವಾಸಘಾತಕ ಎದುರಾಗಿದ್ದು, ಆತ ಮಾಡಿದ ಕೃತ್ಯಗಳೆಲ್ಲವೂ ಬಯಲಾಗಿದೆ. ಸ್ನೇಹಿತನ ಮೊಬೈಲ್ ಸಂಖ್ಯೆ ದುರುಪಯೋಗಪಡಿಸಿಕೊಂಡ ಆ ಅಪ್ರಾಪ್ತ ಅದಾದ ನಂತರ ಜನರ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ದುರುಪಯೋಗಪಡಿಸುವ ಪ್ರಯತ್ನ ನಡೆಸಿದ ಕಾರಣ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆ ಅಪ್ರಾಪ್ತ ಜನರ ಆಧಾರ್ ಕಾರ್ಡ ಹಾಗೂ ಇನ್ನಿತರ ಮಾಹಿತಿಯನ್ನು ನಕಲಿ ಐಡಿ ಮೂಲಕ ಹಂಚಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.