ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಬನವಾಸಿ ಬಳಿಯ ನಾಗೇಂದ್ರ ನಾಯ್ಕ ಅವರು ವಿಷ ಸೇವಿಸಿದರೂ ಸಾವನಪ್ಪಲಿಲ್ಲ. ನೇಣಿಗೆ ಶರಣಾದರೂ ಅವರ ಉಸಿರು ನಿಲ್ಲಲಿಲ್ಲ. ಬಾವಿಗೆ ಬಿದ್ದರೂ ಅವರ ಜೀವ ಹೋಗಲಿಲ್ಲ. ಆತ್ಮಹತ್ಯೆ ಪ್ರಯತ್ನದ ಎಂಟು ದಿನದ ನಂತರ ಅವರು ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಹೋಗುವಾಗ ಕೊನೆಯುಸಿರೆಳೆದಿದ್ದಾರೆ!
ಶಿರಸಿಯ ಬನವಾಸಿ ಬಳಿಯ ಗುಡ್ನಾಪುರದಲ್ಲಿ ನಾಗೇಂದ್ರ ಬಂಗಾರಪ್ಪ ನಾಯ್ಕ (57) ಅವರು ವಾಸವಾಗಿದ್ದರು. ಅವರಿಗೆ 1.8 ಎಕರೆ ಕೃಷಿ ಭೂಮಿಯಿದ್ದು, ಅಲ್ಲಿ ಅಲ್ಲಿ ಅಡಿಕೆ, ಬತ್ತ ಹಾಗೂ ಶುಂಠಿ ಬೆಳೆದಿದ್ದರು. ಈ ಬೆಳೆಗಾಗಿ ಅವರು ಬನವಾಸಿ ಸೊಸೈಟಿಯಲ್ಲಿ 1 ಲಕ್ಷ ರೂ ಹಾಗೂ ಜನರ ಬಳಿ 65 ಸಾವಿರ ರೂ ಸಾಲ ಮಾಡಿದ್ದರು. ಇದರೊಂದಿಗೆ ಪರಿಚಯಸ್ಥರ ಭೂಮಿಯನ್ನು ಗೇಣಿಗೆಪಡೆದು ಅಲ್ಲಿ ಉಳುಮೆ ಮಾಡುತ್ತಿದ್ದರು.
ವಿಪರೀತ ತಾಪಮಾನ ಹಾಗೂ ನೀರಿನ ಸಮಸ್ಯೆಯಿಂದ ಈ ಬಾರಿ ಅವರಿಗೆ ಕೃಷಿ ಕೈ ಹಿಡಿಯಲಿಲ್ಲ. ಶುಂಠಿ ಬೆಳೆಯಲ್ಲಿ ಸಂಪೂರ್ಣ ನಷ್ಟವಾದ ಕಾರಣ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬನವಾಸಿಯ ಸುವರ್ಣ ಬ್ಯಾಂಕಿಗೆ ಹೋದ ಅವರು ಮನೆಯಲ್ಲಿದ್ದ ಬಂಗಾರವನ್ನು ಅಡವಿಟ್ಟು ಮತ್ತೆ ಸಾಲ ಮಾಡಿದ್ದರು. ಅದರಲ್ಲಿಯೇ ಅಲ್ಪ ಪ್ರಮಾಣದಲ್ಲಿ ಬೆಳೆ ಸಾಲವನ್ನು ತೀರಿಸಿದ್ದರು. ಉಳಿದ ಹಣವನ್ನು ಕೃಷಿಗೆ ವಿನಿಯೋಗಿಸಿದ್ದು, ಅಲ್ಲಿ ಮತ್ತೆ ನಷ್ಟ ಅನುಭವಿಸಿದರು.
ಮೇ 14ರಂದು ಮನೆಯವರೆಲ್ಲ ಮದುವೆಗೆ ಹೋದಾಗ ನಾಗೇಂದ್ರ ನಾಯ್ಕ ಅವರು ಆತ್ಮಹತ್ಯೆಗೆ ನಿರ್ಧರಿಸಿದರು. ಇದಕ್ಕಾಗಿ ಅವರು ಮೊದಲು ವಿಷ ಕುಡಿದರು. ಆದರೆ, ಅದರಿಂದ ಅವರು ಸಾವನಪ್ಪಲಿಲ್ಲ. ವಿಷ ಕುಡಿದ ಕಾರಣ ಹೊಟ್ಟೆನೋವು ಶುರುವಾಗಿದ್ದು, ಆ ಹಿಂಸೆ ಸಹಿಸಲಾಗದೇ ನೇಣು ಹಾಕಿಕೊಳ್ಳುವ ನಿರ್ಧಾರ ಮಾಡಿದರು. ಇದಕ್ಕಾಗಿ ಅವರು ಬಾವಿಯ ಹಗ್ಗ ಬಳಸಿ ನೇತಾಡಿದರು. ಆದರೆ, ಆ ಹಗ್ಗ ತುಂಡಾಗಿ ಅವರು ಬಾವಿಯ ಆಳಕ್ಕೆ ಬಿದ್ದರು. ನೇಣು ಹಾಕಿಕೊಂಡರೂ ಸಹ ಸಾವನಪ್ಪದ ನಾಗೇಂದ್ರ ನಾಯ್ಕ ಅವರು ಬಾವಿಯ ಆಳಕ್ಕೆ ಬಿದ್ದರೂ ಉಸಿರು ನಿಲ್ಲಿಸಲಿಲ್ಲ.
ಈ ವೇಳೆ ಬಾವಿಯಲ್ಲಿ ಬಿದ್ದು ಕೂಗಾಡಿದ ನಾಗೇಂದ್ರ ನಾಯ್ಕ ಅವರ ಧ್ವನಿ ಅದೇ ಭಾಗದ ಅಕ್ಷಯ, ಉಮೇಶ, ಪ್ರತಾಪ ಹಾಗೂ ಕೇಶವ ಅವರಿಗೆ ಕೇಳಿಸಿತು. ಈ ನಾಲ್ವರು ಸೇರಿ ನಾಗೇಂದ್ರ ನಾಯ್ಕ ಅವರನ್ನು ಬಾವಿಯಿಂದ ಮೇಲೆತ್ತಿದರು. ಅವರೇ ನಾಗೇಂದ್ರ ನಾಯ್ಕ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಮದುವೆಗೆ ಹೋಗಿದ್ದ ನಾಗೇಂದ್ರ ನಾಯ್ಕ ಅವರ ಪುತ್ರ ಅವಿನಾಶ ನಾಯ್ಕ ಅವರು ಆಸ್ಪತ್ರೆ ಬಳಿ ಬಂದು ಏನಾಯಿತು? ಎಂದು ವಿಚಾರಿಸಿದರು. ಆಗ, ಕೀಟನಾಶಕ ಸೇವಿಸಿ ಬಾವಿಯಲ್ಲಿ ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾಗಿರುವ ಬಗ್ಗೆ ನಾಗೇಂದ್ರ ನಾಯ್ಕ ಅವರು ಮಾಹಿತಿ ನೀಡಿದರು. ಕೂಡಲೇ ಕುಟುಂಬದವರು ನಾಗೇಂದ್ರ ನಾಯ್ಕ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮುಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಮೇ 23ರಂದು ಮಂಗಳೂರಿಗೆ ಕರೆದೊಯ್ಯುವಾಗ ನಾಗೇಂದ್ರ ನಾಯ್ಕ ಅವರು ಉಸಿರು ನಿಲ್ಲಿಸಿದರು.
You cannot copy content of this page