ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಉದ್ಯೋಗ ಕೊಡಿಸುವುದೇ ಆತನ ಉದ್ಯೋಗ!

Achyutkumar by Achyutkumar
A A
His job is to provide employment!
Share on FacebookShare on WhatsappShare on Twitter
ADVERTISEMENT

ಹೊನ್ನಾವರದ ಹೆರಅಂಗಡಿಯ ಜಾಫರ್ ಮುಕ್ತೇಸರ್ ಅವರು ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣಪಡೆಯುತ್ತಾರೆ. ಆದರೆ, ಹಣ ಕೊಟ್ಟವರಿಗೆ ನೌಕರಿಯೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ!

Advertisement. Scroll to continue reading.
ADVERTISEMENT

ಜಾಫರ್ ಮುಕ್ತೇಸರ್ ಅವರ ಜೊತೆ ಇನ್ನಿತರರು ಈ ಕೆಲಸದಲ್ಲಿ ಕೈ ಜೋಡಿಸಿದ್ದು, ಈಗಾಗಲೇ ಹಲವರಿಗೆ ಮೋಸ ಮಾಡಿದ್ದಾರೆ. ಹೀಗಾಗಿ `ಉದ್ಯೋಗ ಕೊಡಿಸುವುದಾಗಿ ಹಣಪಡೆದು ವಂಚಿಸುವ ಜಾಲದವರನ್ನು ಬಂಧಿಸಬೇಕು’ ಎಂದು ಮಂಗಳೂರಿನ ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ಮುಖಂಡ ಸಿದ್ದಿಕ್ ತಲಪಾಡಿ ಆಗ್ರಹಿಸಿದ್ದಾರೆ. `ಹೊನ್ನಾವರದ ಹೆರಂಗಡಿ ಮೂಲದ ಜಾಫರ್ ಹುಸೇನ್ ಮುಕ್ತೇಸರ್, ನೌಶಾದ್ @ ನೌಶಾ ಖ್ವಾಜಾ ದಾವೂದ್ ಹಾಗೂ ಹೈದರಾಬಾದ್ ಮೂಲದ ಸುಜಾತಾ ಜಮ್ಮಿ ಕುಂಟಾ ಸೇರಿ ಕುವೈತ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಉತ್ತರ ಕನ್ನಡ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಹಲವರಿಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಕೇರಳದ ವಯ್ಯಲಪರಕ್ಕೋಡದ ಬಿಜ್ಜು ದಾಮೋದರನ್ ಉದಯಂತಜಿAತಿಲ್ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ’ ಎಂದವರು ಮಾಹಿತಿ ನೀಡಿದರು.

ADVERTISEMENT

`33ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಇದ್ದು ಈಗಾಗಲೇ ವಂಚನೆಗೊಳಗಾದವರು ಹೊನ್ನಾವರ ಪೊಲೀಸ್ ಠಾಣೆಗೆ ಹಾಜರಾಗಿ ಸಾಕ್ಷಿಯಾಗುತ್ತಿದ್ದಾರೆ. ಜಾಪರ್ ಮುಕ್ತೆಸರ್ ಕುವೇತ್‌ನಲ್ಲಿ ಡಿಫೆನ್ಸ್ಲ್ಲಿ 48 ಉದ್ಯೋಗಾವಕಾಶಗಳಿವೆ ಎಂದು ತನ್ನ ಪರಿಚಯಸ್ಥರು ಹಾಗೂ ಏಜೆಂಟರುಗಳ ಮೂಲಕ ಜನರನ್ನು ಒಟ್ಟೂಗೂಡಿಸಿ ಹಣ ಹಾಕಿಸಿಕೊಂಡಿದ್ದಾರೆ. ಇದನ್ನು ನಂಬಿದ ಬಿಜ್ಜು ದಾಮೋದರನ್ 33 ಜನರ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ. ಬಳಿಕ ನಕಲಿ ಉದ್ಯೋಗ ಆಫರ್ ಲೆಟರ್‌ಗಳನ್ನು ಕಳುಹಿಸಿ, ಪ್ರತಿಯೊಬ್ಬ ಅಭ್ಯರ್ಥಿಯಿಂದ 3 ಲಕ್ಷ ರೂ ಪಡೆದು ಸುಮಾರು 52 ಲಕ್ಷ ರೂ ಮೋಸ ಮಾಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

`ಜಾಫರ್ ಮುಕ್ತೇಸರ್ ಸದ್ಯ ಹೊನ್ನಾವರದಲ್ಲಿದ್ದು, ಕುವೈತ್ ಹಾಗೂ ಕೆನಡಾ ಪೋನ್ ನಂಬರ್ ಬಳಸಿ ವ್ಯವಹಾರ ಮಾಡುತ್ತಾರೆ. ಮತ್ತೆ ಅಮಾಯಕರಿಗೆ ಉದ್ಯೋಗ ಆಸೆ ಹುಟ್ಟಿಸಿ ವಂಚನೆ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು. `ದಾನ-ಧರ್ಮದ ಹೆಸರಿನಲ್ಲಿಯೂ ಜಾಫರ್ ಮುಕ್ತೇಸರ್ ಜನರನ್ನು ಯಾಮಾರಿಸುತ್ತಿದ್ದಾರೆ. ಅಮಾಯಕರಿಗೆ ವಂಚನೆ ಮಾಡಿ ನೀಡುವ ಹಣವನ್ನು ಸ್ಥಳೀಯರು ಧಾರ್ಮಿಕ ಕಾರ್ಯಗಳಿಗೂ ಬಳಸಬಾರದು’ ಎಂದು ಮನವಿ ಮಾಡಿದರು.

ADVERTISEMENT
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋